ಈಗಾಗಲೇ ಹಾವುಗಳು ಸೇರಿದಂತೆ ಅನೇಕ ವಿಷ ಜಂತುಗಳ ಕಾಟವೇ ಸಾಕಾಗಿದೆ, ಇನ್ನು ವಿಷಕಾರಿ ಅಂಶಗಳು ಭೂಮಿಯ ಸೇರುತ್ತದೆ, ತಿನ್ನುವ ಆಹಾರ ಪದಾರ್ಥಗಳು ವಿಷವಾಗುತ್ತಿದೆ, ಉಸಿರಾಡುವ ಗಾಳಿಯು ಮಲಿನಗೊಂಡಿದೆ, ಇದರ ಜೊತೆಗೆ ನಾಯಕರುಗಳ ಮಾತಿನಲ್ಲಿ ವಿಷವು ಉಕ್ಕಿ ಹರಿಯುತ್ತಿದೆ.
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
ದೇಶ ಆಳುತ್ತಿರುವವರು ಸತ್ಯಹರಿಶ್ಚಂದ್ರರು ಅಲ್ಲ, ಮಾತನಾಡುತ್ತಿರುವವರು ಎಲ್ಲರೂ ಹಾಲಿನಷ್ಟು ಶುದ್ಧರಲ್ಲ, ಇನ್ನು ಗಾಂಧೀಜಿಯವರಷ್ಟು ನೈತಿಕತೆಯ ವ್ಯಕ್ತಿಗಳು ಅಲ್ಲ, ಎಲ್ಲರೂ ಗಾಜಿನ ಮನೆಯಲ್ಲಿ ಕುಳಿತು ಪರಸ್ಪರ ಕಲ್ಲು ಬಿಸುತಿದ್ದೀರಿ, ಎಲ್ಲರ ಮುಖವಾಡಗಳು ಕಳಚಿ ಬೀಳುತ್ತಿವೆ.
ದೇಹ ಶುದ್ಧವಾದರೆ ಸಾಲದು, ನಿಮ್ಮ ಕಿವಿಗಳು ಶುದ್ಧವಾಗಿರಲಿ, ನಿಮ್ಮ ನಾಲಿಗೆಗಳು ಶುದ್ಧವಾಗಿರಲಿ, ನಿಮ್ಮ ಹೃದಯಗಳು ಶುದ್ಧವಾಗಿರಲಿ , ಮೆತ್ತಿರುವ ಹೊಲಸನ್ನು ತೊಳೆಯುವ ಪ್ರಯತ್ನ ಮಾಡಿ, ನಿಮ್ಮ ಕಣ್ಣಿನ ನೋಟಗಳು ಶುಭ್ರವಾಗಿರಲಿ.
ಹುಟ್ಟಿದವರು ನಿರ್ಗಮಿಸಲೇಬೇಕು ಹಾಗೆ ಸಿಂಹಾಸನವನ್ನೇರಿದ ಎಲ್ಲರೂ ಒಂದಲ್ಲ ಒಂದು ಕಾರಣದಿ, ಅಲ್ಲಿಂದ ನಿರ್ಗಮಿಸಲೇಬೇಕು, ಸ್ಮಶಾನಕ್ಕೆ ಹೊತ್ತು ಹೋಗುವುದು ದೇಹಗಳನ್ನು ಅಷ್ಟೇ ಹೊರತು ನೀವು ಕುಳಿತ ಕುರ್ಚಿಗಳನ್ನಲ್ಲ ಎಂಬುದು ನೆನಪಿರಲಿ.
ಹಗಲಿನಲ್ಲಿ ನಿಮ್ಮ ಲೋಪಗಳ ಕಂಡಿದ್ದೇವೆ, ಕತ್ತಲಲ್ಲಿ ಕುಳಿತು ಆರ್ಭಟಿಸಿದ ಮಾತ್ರಕ್ಕೆ ನೀವು ಶುದ್ಧರೆಂದು ನಂಬಲು ಇಲ್ಲಿ ಯಾರು ಮೂರ್ಖರಲ್ಲ, ಎಲ್ಲರ ಬದುಕಿನ ಹಿಂದಿನ ಪುಟಗಳ ಪರಿಚಯ ಬಹಳಷ್ಟು ಮಂದಿಗಿದೆ.
– ಕೆ ಎಸ್ ನಾಗರಾಜ್, ಬೆಂಗಳೂರು




