ಬೆಂಗಳೂರು: ನಿವೃತ್ತ ಐಪಿಎಸ್ ಅಧಿಕಾರಿ ಡಾ.ಸುಭಾಷ್ ಭರಣಿಯವರ 75ನೇ ಜನ್ಮದಿನದ ಆಚರಣೆ ಹಾಗೂ ಮದುವೆ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ತಮ್ಮ ಮನೆಯ ಬಳಿ ಹಮ್ಮಿಕೊಂಡಿದ್ದರು.
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
ಇದೇ ಸಂದರ್ಭದಲ್ಲಿ ಹೊಸಬೆಳಕು ಟ್ರಸ್ಟ್ ತನ್ನ ಸೇವೆಯನ್ನು ಇಪ್ಪತ್ತು ವರ್ಷ ಪೂರೈಸುತ್ತಿರುವ ಸುಸಂದರ್ಭದಲ್ಲಿ ಹೊಸ ಬೆಳಕು ಟ್ರಸ್ಟ್ ಕತ್ತಲಿನಿಂದ ಬೆಳಕಿನಡೆಗಿನ ಪಯಣದಲ್ಲಿ ಸೇವೆಯನ್ನು ಜನರಿಗೆ ತಲುಪಿಸಲು ಬೆನ್ನೆಲುಬಾಗಿ ನಿಂತ ಸಾಧಕರಿಗೆ ಹೊಸಬೆಳಕು ಸದ್ಭಾವನಾ ಪ್ರಶಸ್ತಿ 2025ಅನ್ನು ಸಾಧಕರ ಮನೆಬಾಗಿಲಲ್ಲೇ ನೀಡಲು ನಿರ್ಧರಿಸಿದ್ದು ಮೋಹನ ಭರಣಿ ಮತ್ತು ಸುಭಾಷ್ ಭರಣಿ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿದ ಭರಣಿ ಮಾತನಾಡಿ, 20 ವರ್ಷ ಒಂದು ಟ್ರಸ್ಟನ್ನು ನಡೆಸಿಕೊಂಡು ಅಂಧತ್ವ ನಿವಾರಣೆ, ಆರೋಗ್ಯ ಶಿಬಿರ, ರಕ್ತದಾನ, ನೇತ್ರದಾನ, ಅಂಗಾಂಗದಾನ ಸೇವೆ ಮಾಡುತ್ತಾ ಬಂದಿರುವುದು ತುಂಬಾ ಸಂತಸದ ವಿಚಾರ ಎಂದರು.
ಹತ್ತು ವರ್ಷದ ಹಿಂದೆ ನಾನು ಒಂದು 50 ಕನ್ನಡಕ ಉಚಿತವಾಗಿ ಕೊಡಿಸಿದ್ದೆ. ಮುಂದೆಯೂ ನನ್ನ ಸಹಕಾರ ಇರುತ್ತದೆ. ಹೊಸಬೆಳಕು ನೀಡುವ ಕಾಯಕ ಮುಂದುವರೆಯಲಿ, ಒಳಿತಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಹೊಸಬೆಳಕು ಟ್ರಸ್ಟಿನ ಸಂಸ್ಥಾಪಕ ಡಾ. ರಾಮಕೃಷ್ಣ, ಭರಣಿ ನ್ಯೂಸ್ನ ಶಿವರಾಜ್ ಭರಣಿ, ಮುನಿರಾಮು, ಮಂಜುಳಾ, ಸರಸ್ವತಿ ಇತರರು ಹಾಜರಿದ್ದರು.




