ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ

1 week ago


ಜೂನ್ 14 ರಂದು ‘ಗಜಲ್ ಸಂಚಿಕೆ-35’ ಸಾಂಸ್ಕೃತಿಕ ಹಬ್ಬ!

ಬೆಂಗಳೂರು: ರಾಜಧಾನಿಯ ಗಜಲ್ ಪ್ರೇಮಿಗಳಿಗೊಂದು ಸಿಹಿ ಸುದ್ದಿ! ರಂಗಮಂಡಲ ಮತ್ತು ಶುಭದ ಟ್ರಸ್ಟ್ (ಬೆಂಗಳೂರು) ಜಂಟಿ ಆಶ್ರಯದಲ್ಲಿ “ಕನ್ನಡ ಗಜಲ್ ಯಾತ್ರೆ 100 – ನಮ್ಮ ಪ್ರೀತಿ ನೂರು ರೀತಿ” ಅಭಿಯಾನದ ಭಾಗವಾಗಿ ಅತ್ಯಂತ ಆಕರ್ಷಕ ‘ಗಜಲ್ ಸಂಚಿಕೆ 35’ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಬರುವ ಜೂನ್ 14, 2026ರ ಭಾನುವಾರ ಮಧ್ಯಾಹ್ನ 3:30ಕ್ಕೆ ಬೆಂಗಳೂರಿನ ಕೆಂಗೇರಿ ಉಪನಗರದ 1ನೇ ಹಂತದ ಸರ್. ಎಂ. ವಿ. ಬಡಾವಣೆಯಲ್ಲಿರುವ ಪ್ರಸಿದ್ಧ ‘ಸಿವಗಂಗ ರಂಗಮಂದಿರ’ದಲ್ಲಿ ಈ ಕಾವ್ಯ ಮತ್ತು ಗಾಯನ ಸೌರಭದ ಮಹೋತ್ಸವ ಜರುಗಲಿದೆ.

ಗಾನ ಲಹರಿ ಮತ್ತು ವಾದ್ಯ ವೈಭವ: ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಸುಪ್ರಸಿದ್ಧ ಗಾಯಕರಾದ ಅನುರಾಗ್ ಗದ್ದಿ ಮತ್ತು ಗೀತಾ ಭಟ್ ಅವರು ತಮ್ಮ ಮಧುರ ಕಂಠದಿಂದ ಗಜಲ್ ಗಾಯನ ಪ್ರಸ್ತುತಪಡಿಸಲಿದ್ದಾರೆ. ಇವರಿಗೆ ತಬಲಾದಲ್ಲಿ ಶರಣು ಗೋಗಿ ಹಾಗೂ ಕೀ-ಬೋರ್ಡ್‌ನಲ್ಲಿ ದುಷ್ಯಂತ್ ಅವರು ಸಾಥ್ ನೀಡಲಿದ್ದಾರೆ. ಸಂಗೀತ ಮತ್ತು ಸಾಹಿತ್ಯದ ಈ ಅಪೂರ್ವ ಸಂಗಮವು ಶ್ರೋತೃಗಳನ್ನು ಮಂತ್ರಮುಗ್ಧರನ್ನಾಗಿಸುವುದರಲ್ಲಿ ಸಂದೇಹವಿಲ್ಲ.

ಗಣ್ಯರ ಉಪಸ್ಥಿತಿ: ಈ ಕಾರ್ಯಕ್ರಮಕ್ಕೆ ಸಾಹಿತ್ಯ, ಸಿನಿಮಾ ಮತ್ತು ಪತ್ರಿಕೋದ್ಯಮ ರಂಗದ ಹಲವು ಪ್ರಮುಖ ಗಣ್ಯರು ಸಾಕ್ಷಿಯಾಗಲಿದ್ದಾರೆ.

ಆರ್. ಜಿ. ಹಳ್ಳಿ ನಾಗರಾಜ್, ಖ್ಯಾತ ಸಾಹಿತಿಗಳು, ಸಂಪಾದಕರು, ಅನ್ವೇಷಣೆ ಸಾಹಿತ್ಯ ಪತ್ರಿಕೆ
ಜಿ. ಎಸ್. ಮೃತ್ಯುಂಜಯಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ
ಪರಮ್ ಗುಬ್ಬಿ, ಚಲನಚಿತ್ರ ನಿರ್ದೇಶಕರು
ಡಾ. ಗೀತಾ ಕಶ್ಯಪ್, ಪತ್ರಕರ್ತೆ, ಅನುವಾದಕಿ ಹಾಗೂ ನಾಟಕಕಾರರು

ಕಾರ್ಯಕ್ರಮದ ನಿರ್ವಹಣೆ:
ಸ್ವಾಗತ: ಪ್ರಶಾಂತ್ ಶುಭದ
ಪ್ರಾಸ್ತಾವಿಕ ನುಡಿ: ಮಲ್ಲಿಕಾರ್ಜುನಸ್ವಾಮಿ ಮಹಾಮನೆ
ನಿರೂಪಣೆ: ಎಚ್. ಎಸ್. ಲಕ್ಷ್ಮಿ ಗೌರಿಬಿದನೂರು
ಸಂಘಟಕರು: ಬಿ. ಎಸ್. ನೇತ್ರಾವತಿ, ನಿರ್ಮಲಾ ನಾಡನ್, ಮತ್ತು ಎಚ್. ಎಸ್. ಸೌಭಾಗ್ಯ.

ಕನ್ನಡ ಗಜಲ್ ಸಾಹಿತ್ಯವನ್ನು ಮತ್ತಷ್ಟು ಜನಪ್ರಿಯಗೊಳಿಸುವ ಮತ್ತು ನೂರರ ಸಂಭ್ರಮವನ್ನು ಆಚರಿಸುವ ಈ ಸಾಂಸ್ಕೃತಿಕ ಹಬ್ಬಕ್ಕೆ ಕಲಾಭಿಮಾನಿಗಳಿಗೆ ‘ಪ್ರೀತಿಯ ಸ್ವಾಗತ’ ಕೋರಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

ಮಹಾಮನೆ: 9448970731
ಪ್ರಶಾಂತ್: 9148910954

Leave a Reply