ಕಡು ಕಷ್ಟಗಳು ಎಷ್ಟೇ ಇರಲಿ, ದುಃಖ ತುಂಬಿರಲಿ, ಎಂದಿಗೂ ಯಾರ ಮುಂದೆಯೂ ಕೈ ಚಾಚದೆ, ತಲೆ ಬಾಗಿ ನಿಲ್ಲದೆ, ಬದುಕುವರು ಸ್ವಾಭಿಮಾನಿಗಳು
- ದೇಶದ ರಾಜ್ಯಗಳಲ್ಲಿ ಕೊನೆಯ ಬಾರಿ ಕಾಂಗ್ರೆಸ್ ಸಿಎಂ ಇದ್ದದ್ದು ಯಾವಾಗ?
- ನಮ್ಮ ತಲೆಮಾರಿನ ರಾಜಕಾರಣಿಗಳು, ಭವಿಷ್ಯದ ಯುವ ನಾಯಕರಿಗೆ ಸಿದ್ದರಾಮಯ್ಯ ಸ್ಫೂರ್ತಿ: ಪ್ರಿಯಾಂಕ್ ಖರ್ಗೆ
- ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿದ್ದರಾಮಯ್ಯ ಹೇಳಿದ್ದೇನು?
- ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ಯಾರು, ಏನೆಂದರು?
- ಹಣಕಾಸು ಮಂತ್ರಿಗಳಾಗಿ ಸಿದ್ದರಾಮಯ್ಯ ಸಾಧಿಸಿದ ಆರ್ಥಿಕ ಶಿಸ್ತು ಒಂದು ಪಠ್ಯದಂತಿದೆ: ಬಿ ಶ್ರೀಪಾದ ಭಟ್
ತಮ್ಮ ಎಲ್ಲ ಕಷ್ಟಗಳಿಗೆ, ತಮ್ಮೆಲ್ಲ ನೋವುಗಳ ಬಗೆಹರಿಸಲು ಸಮಾಜವಿದೆಯೆಂದು ಭಾವಿಸಿ, ಎಲ್ಲರ ಮುಂದೆ ಕೈ ಚಾಚುತ್ತ ಎಲ್ಲರ ನೆರವಿನೊಂದಿಗೆ ಬದುಕಲಿಚ್ಚಿಸುವವರು , ಪರಾವಲಂಬಿಗಳು
ಎಲ್ಲರಿಂದ ನೆರವು ಪಡೆದು, ಯಾರಿಗೂ ಕಷ್ಟ ಕಾಲದಲ್ಲಿ ಜೊತೆಯಲ್ಲಿ ನಿಲ್ಲದೆ ತಾನಾಯಿತು ತನ್ನ ಪಾಡಾಯಿತು ಎಂದು ತನಗಾಗಿ ಬದುಕುವವರು ಸ್ವಾರ್ಥಿಗಳು
ತಮ್ಮ ಕಷ್ಟಗಳು ನೂರಿರಲಿ, ಎಷ್ಟೇ ಸಮಸ್ಯೆಗಳಿರಲಿ, ನೋವು ತುಂಬಿದ್ದರು, ಎಲ್ಲವನು ನುಂಗಿಕೊಂಡು, ಇರುವುದರಲ್ಲಿಯೇ ಪರರಿಗೂ ಹಂಚುತ್ತ ,ಪರರ ನೋವಿಗೆ ಸ್ಪಂದಿಸುತ್ತಾ ಬದುಕುವರು, ನಿಸ್ವಾರ್ಥಿಗಳು
ಗೆಲುವಿನ ಗಳಿಗೆಯಲ್ಲಿ ಗೆಲುವಿಗೆ ನಾನೇ ಕಾರಣವೆಂದು ಮೆರೆಯುತ್ತ ,ಸೋಲಿಗೆ ತನ್ನ ಬೆಂಬಲಿಗರು ಕಾರಣವೆಂದು ಮೂದಲಿಸುತ್ತಾ , ಸೋಲಿನ ಹೊರೆಯನ್ನು ಹೊರಲಾರದವರು ನಾಯಕರಾಗಲಾರರು
ಯಾರಿಗೂ ಒಳಿತನ್ನು ಬಯಸದೆ, ಒಳಿತನ್ನು ಮಾಡದೆ, ಯಾವ ಸೇವಾ ಕಾರ್ಯಗಳಲ್ಲಿ ಸಣ್ಣ ಪಾತ್ರ ನಿರ್ವಹಿಸದೆ ಇರುವವರ ಟೀಕೆಗಳು, ಅಭಿಪ್ರಾಯಗಳು, ಮೌಲ್ಯವಿಲ್ಲದ ಮಾತುಗಳು
– ಕೆ ಎಸ್ ನಾಗರಾಜ್




