ಸಾಹಿತ್ಯ ಮತ್ತು ಸಂಗೀತದ ಅಪೂರ್ವ ಸಂಗಮ!
ದೊಡ್ಡಬಳ್ಳಾಪುರ: ಅಕ್ಷರ ಮತ್ತು ಸ್ವರಗಳ ಮಿಲನಕ್ಕೆ ಸಾಕ್ಷಿಯಾಗಲು ರೇಷ್ಮೆ ನಗರಿ ಸಜ್ಜಾಗಿದೆ. ಡಾ. ಡಿ.ಆರ್. ನಾಗರಾಜ್ ಬಳಗ ಹಾಗೂ ಕರ್ನಾಟಕ ಗಜಲ್ ಅಕಾಡೆಮಿ (ರಿ.), ಬೆಂಗಳೂರು ಇವರ ಸಹಯೋಗದಲ್ಲಿ ಬರುವ ಏಪ್ರಿಲ್ 19ರಂದು ವಿಶಿಷ್ಟವಾದ ‘ಗಜಲ್ ಸಂಭ್ರಮ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
- ಜನಸಹಭಾಗಿತ್ವದೊಂದಿಗೆ ಸ್ವಚ್ಛತಾ ಅಭಿಯಾನಕ್ಕೆ ಸಜ್ಜು
- UPI ಡಿಜಿಟಲ್ ಮೇಲಿನ ಹೆಚ್ಚುವರಿ ಶುಲ್ಕ ಪ್ರಸ್ತಾವನೆ ಹಿಂಪಡೆಯಬೇಕು
- ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ: ಪೌರ ಕಾರ್ಮಿಕರಿಗೆ ಸನ್ಮಾನ
ಗಜಲ್ ಸಾಹಿತ್ಯದ ಸೌಂದರ್ಯವನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ ಆಯೋಜಿಸಲಾಗಿರುವ ಈ ಕಾರ್ಯಕ್ರಮದಲ್ಲಿ ಗಜಲ್ ವಾಚನ ಮತ್ತು ಗಾಯನ ಎರಡೂ ಇರಲಿರುವುದು ವಿಶೇಷ.
ಕಾರ್ಯಕ್ರಮದ ವಿವರಗಳು:
ದಿನಾಂಕ: 19 ಏಪ್ರಿಲ್ 2026
ಸ್ಥಳ: ಕಲಾಭವನ, ಮುದ್ದನಾಯಕನ ಪಾಳ್ಯ, ನಂದಿ ಮೋರಿ ಹತ್ತಿರ, ರಾಮಯ್ಯನ ಪಾಳ್ಯದ ರಸ್ತೆ, ದೊಡ್ಡಬಳ್ಳಾಪುರ.
ಸಮಯ: 11

ಗಜಲ್ ಎಂದರೆ ಕೇವಲ ಸಾಹಿತ್ಯವಲ್ಲ, ಅದೊಂದು ಭಾವನೆಗಳ ಮಹಾಪೂರ. ಹಾರ್ಮೋನಿಯಂನ ಸುಶ್ರಾವ್ಯ ನಾದ ಮತ್ತು ತಬಲಾದ ಲಯಬದ್ಧ ಗತಿಯೊಂದಿಗೆ ಗಜಲ್ ಪ್ರಿಯರಿಗೆ ಹಬ್ಬದೂಟ.
ದೊಡ್ಡಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಾಹಿತ್ಯಾಸಕ್ತರು ಹಾಗೂ ಸಂಗೀತ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಸಾಂಸ್ಕೃತಿಕ ಹಬ್ಬವನ್ನು ಯಶಸ್ವಿಗೊಳಿಸಬೇಕೆಂದು ಡಾ. ಡಿ.ಆರ್. ನಾಗರಾಜ್ ಬಳಗ ವಿನಂತಿಸಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಮೊಬೈಲ್ ಸಂಖ್ಯೆ: 97315 14051




