ಚಿತ್ರದುರ್ಗದ ಕೆ.ಎಸ್.ಆರ್.ಟಿ.ಸಿ ಬಸ್ ಸ್ಟಾಂಡಿನಲ್ಲಿರುವ ಈ ಅಂಗಡಿಯನ್ನು ಕಳೆದ 20 ವರ್ಷಗಳಿಂದಲೂ ನೋಡುತ್ತಿರುವೆ. ಇಲ್ಲಿ ಕರ್ನಾಟಕದ ಎಲ್ಲಾ ಲೀಡಿಂಗ್ ಪತ್ರಿಕೆಗಳೂ, ವಾರ ಪತ್ರಿಕೆ,ಮಾಸ ಪತ್ರಿಕೆ, ಸ್ಕೂಲ್ ಮಕ್ಕಳಿಗೆ ಬೇಕಾದ ಪುಸ್ತಕಗಳು, ಬೈರಪ್ಪ, ರವಿಬೆಳೆಗೆರೆ, ಪ್ರತಾಪಸಿಂಹ, ತರಾಸು ಹೀಗೆ ಜನಪ್ರಿಯ ಲೇಖಕರ ಮತ್ತು ಸ್ಥಳೀಯ ಲೇಖಕರ ಪುಸ್ತಕಗಳಿಂದ ಕಿಕ್ಕಿರಿದಿರುತ್ತಿತ್ತು.
- ಕಟ್ಟೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಸೇವೆ ಮನೆ ಬಾಗಿಲಿಗೆ ಮಾದರಿ ಕಾರ್ಯಕ್ರಮ
- ಕನ್ನಡ ಸಿನಿಮಾ: ಮುಳುಗುತ್ತಿರುವ ಟೈಟಾನಿಕ್
- RSS ಅನ್ನು ಪ್ರಶ್ನಿಸುವ ಯೋಗ್ಯತೆಯಿದೆಯೇ?: ಆರ್. ಅಶೋಕ್
- ಎಸ್ಐಆರ್ ಎನ್ಯೂಮರೇಷನ್ ಪ್ರಕ್ರಿಯೆ ಬಗ್ಗೆ ಗೊಂದಲ ನಿವಾರಣೆ ಅಗತ್ಯ: ಅಪ್ಸರ್ ಕೊಡ್ಲಿಪೇಟೆ
- ಮಾತಾಡದೇ ನನ್ನೊಳಗೇ ಉಳಿದ ವಿಷಯಗಳು ಹೀಗಿವೆ
ನಿಧಾನಕ್ಕೆ ಪುಸ್ತಕಗಳ ಮಾರಾಟ ಕಡಿಮೆಯಾಗುತ್ತಾ ಬಂತು. ಈಗಂತೂ ಅಂಗಡಿಯ 25% ಜಾಗ ಮಾತ್ರ ಪುಸ್ತಕ ಪೇಪರುಗಳಿಗೆ ಉಳಿಸಿಕೊಂಡು ಉಳಿದ ಜಾಗದಲ್ಲಿ ಜನರು ಕೊಳ್ಳಬಹುದಾದ ಸ್ಟೇಷನರಿ ಸಾಮಾನುಗಳನ್ನು ತುಂಬಿದ್ದಾರೆ. ಇದು ವ್ಯಾಪಾರದ ಆದ್ಯತೆ ಕೂಡ. ಖರ್ಚಾಗದ ಪುಸ್ತಕಗಳನ್ನು ವರ್ಷಗಟ್ಟಲೆ ಪ್ರದರ್ಶಿಸುವುದಕ್ಕಿಂತ ಖರ್ಚಾಗುವ ವಸ್ತುಗಳನ್ನು ಕಡಿಮೆ ಅವಧಿ ಇಟ್ಟುಕೊಳ್ಳುವುದು ಉತ್ತಮ.
ಇದು ಕೇವಲ ಚಿತ್ರದುರ್ಗದ ಪುಸ್ತಕದಂಗಡಿಯ ಕತೆ ಮಾತ್ರವಲ್ಲ, ನಾನು ನೋಡಿದ ಬಹುತೇಕ ಪುಸ್ತಕಗದಂಗಡಿಗಳ ರೂಪಾಂತರವಿದು. ಈ ಅಂಗಡಿಯಲ್ಲಿ ಇನ್ನೂ ಪುಸ್ತಕಗಳನ್ನು ಅಂಗಡಿಯ ಒಳಗಡೆ ಇಟ್ಟುಕೊಂಡಿದ್ದಾರೆ. ಬೆಂಗಳೂರಿನ ಮೆಜೆಸ್ಟಿಕ್ ನ ಒಂದು ಪುಸ್ತಕದ ಅಂಗಡಿಯಂತೂ ಅಂಗಡಿ ಹೊರಗಡೆ ಒಂದು ಸ್ಟೂಲ್ ಹಾಕಿ ಕೆಲವು ಪತ್ರಿಕೆಗಳನ್ನು ಪ್ರದರ್ಶನಕ್ಕಿಟ್ಟಿದ್ದಾರೆ. ಕಾಲ ಕಸದಂತೆ. ಆ ಪುಸ್ತಕದಂಗಡಿ ಟೀ ಕಾಫಿ ಟಿಫಿನ್ ಗೆ ರೂಪಾಂತರವಾಗಿದೆ.

ಇದು ಸಮಾಜದ ಆದ್ಯತೆಯ ರೂಪಾಂತರಕ್ಕೂ ಸಾಕ್ಷಿಯಾಗಿದೆ. ಸಮಾಜದ ಆದ್ಯತೆಗಳು ಬದಲಾದಂತೆ ಈ ಸಮಾಜದ ಪ್ರತಿಬಿಂಬದಂತೆ ಅಂಗಡಿಗಳು ರೂಪಾಂತರಗೊಳ್ಳಲೇಬೇಕಲ್ಲ.
ನಿಮ್ಮ ಊರುಗಳ ಪುಸ್ತಕದಂಗಡಿಗಳ ಕಥೆ ಏನಾಗಿದೆ?
- ಡಾ.ಅರುಣ್ ಜೋಳದಕೂಡ್ಲಿಗಿ, ಜಾನಪದ ವಿದ್ವಾಂಸರು




