ಅಲ್ಲವೇ?
ಅಂಬೇಡ್ಕರ್ ಅವರು ವಿದೇಶದಲ್ಲಿ ಶಿಕ್ಷಣ ಮುಗಿಸಿ ಭಾರತಕ್ಕೆ ಬಂದಾಗ ಅವರು ಬರೋಡಾದಲ್ಲಿ ರಕ್ಷಣಾ ಸಲಹೆಗಾರರಾಗಿ ನೇಮಕಗೊಂಡರು.
- ಪ್ರೊ. ಬರಗೂರು ಅವರ ದಿಟ್ಟ ಹೆಜ್ಜೆ – 25 ವರ್ಷಗಳ ಸಾರ್ಥಕ ಯಾನ!
- ಸಂಪುಟದಿಂದ ಹೊರಗಿಟ್ಟಿರುವುದು ನನಗೆ ಸಿಕ್ಕ ಪ್ರತಿಫಲವೇ?: ಬಿ ಆರ್ ಪಾಟೀಲ್
- ಸಂಪುಟದಲ್ಲಿ ಭ್ರಷ್ಟಾಚಾರಿಗಳು, ಪೇಮೆಂಟ್ ಕೋಟಾ ಮೂಲಕ ಅವಕಾಶ ಗಿಟ್ಟಿಸಿಕೊಂಡವರು ಇದ್ದಾರೆ: ಆರ್.ಅಶೋಕ
- ಬಿಜೆಪಿ ನಾಯಕರು ಸಂವಿಧಾನ ಓದಿದನ ನಂತರ ಕಾಂಗ್ರೆಸ್ ಲೆಟರ್ಹೆಡ್ ಓದಲಿ: ಬಿ.ಕೆ.ಹರಿಪ್ರಸಾದ್
- ನೀರು ಸತ್ಯಾಗ್ರಹ ಕೃತಕ ಬುದ್ಧಿಮತ್ತೆ ಮತ್ತು ಕೃಷಿ ಕುರಿತು ಗಂಭೀರ ಚರ್ಚೆ
ಸೆಪ್ಟೆಂಬರ್ ತಿಂಗಳಲ್ಲಿ ಅವರು ಬರೋಡಾಗೆ ಬಂದಿಳಿದಾಗ ರಾಜರ ಆದೇಶವಿದ್ದರೂ ಅವರನ್ನು ಸ್ವಾಗತಿಸಲು ರೈಲು ನಿಲ್ದಾಣಕ್ಕೆ ಯಾರೂ ಬರಲಿಲ್ಲ. ಆ ಊರಿನಲ್ಲಿ ಅವರ ವಾಸಕ್ಕೆ ಒಂದೇ ಒಂದು ಬಾಡಿಗೆ ಮನೆ ಸಿಗಲಿಲ್ಲ.
ಕೆಲಸ ಮಾಡುವ ಸ್ಥಳದಲ್ಲೂ ಯಾರೂ ಸಹಕಾರ ನೀಡಲಿಲ್ಲ. ಕಚೇರಿಯಲ್ಲಿ ಟಪಾಲು ಪತ್ರಗಳನ್ನು ದೂರದಿಂದಲೇ ಬಿಸಾಡುತ್ತಿದ್ದರು. ಹೀಗಿರುವಾಗ ವಸತಿ ವ್ಯವಸ್ಥೆ ಮಾಡಿಕೊಳ್ಳಲು ಆಗುತ್ತಿಲ್ಲ ಎಂದು ಅಧಿಕಾರಿಗಳ ಬಳಿ ಅಂಬೇಡ್ಕರ್ ಅವರು ಹೇಳಿದರು. ಮಹಾರಾಜರಿಗೂ ಪತ್ರ ಬರೆದರು. ಆಗ ಮಹಾರಾಜರು ಆ ಪತ್ರವನ್ನು ದಿವಾನರಿಗೆ ವರ್ಗಾಯಿಸಿದರು. ದಿವಾನರು ಈ ವಿಷಯದಲ್ಲಿ ನನಗೇನೂ ಮಾಡಲು ಸಾಧ್ಯವಿಲ್ಲ ಎಂದರು.
ಆಗ ಅಂಬೇಡ್ಕರ್ ಗುರುಗಳಾಗಿದ್ದ ಕೇಳುಸ್ಕರ್ ಮಾಸ್ತರ್ ಅವರು ತಮಗೆ ಗೊತ್ತಿದ್ದ ಒಬ್ಬ ವಿಚಾರವಂತ ಗೆಳೆಯನ ಮನೆಗೆ ಕಳಿಸಿದರು. ಆತ ಇವರನ್ನು ಮನೆಯಲ್ಲಿ ಇರಿ ಎಂದರು, ಆತನ ಹೆಂಡತಿ ಮಾತ್ರ ಅಸ್ಪೃಶ್ಯರನ್ನು ಮನೆಯಲ್ಲಿ ಇಟ್ಟುಕೊಳ್ಳುವುದಿಲ್ಲ ಎಂದು ಮುಖಕ್ಕೆ ಹೇಳಿದಳು. ಓರ್ವ ಕ್ರೈಸ್ತ ಮಿತ್ರರ ಮನೆಯಲ್ಲೇ ಇದೇ ಕೆಟ್ಟ ಅನುಭವ ಆಯಿತು.
ಇನ್ನು ಕಚೇರಿಯಲ್ಲಿ ಒಬ್ಬ ಜವಾನನೂ ಕೂಡಾ ಅಸ್ಪಶ್ಯರನ್ನು ಮುಟ್ಟಿಸಿಕೊಳ್ಳಬಾರದು ಎಂದು ದೂರದಿಂದಲೇ ಫೈಲುಗಳನ್ನು ದೊಪ್ಪನೆ ಎಸೆದು ಹೋಗುತ್ತಿದ್ದರು.
ಅಧಿಕಾರಿಗಳ ಕ್ಲಬ್ ಗೆ ಸೇರಲು ಹೋದರೆ ಅಲ್ಲಿಯೂ ಇವರಿಗೆ ತಿರಸ್ಕಾರದ ಅವಮಾನವಾಯಿತು.
ಕೊನೆಗೆ ಒಬ್ಬ ಪಾರ್ಸಿಗಳ ಮನೆಯಲ್ಲಿ ಜಾತಿಯ ಹೆಸರು ಹೇಳದೇ ಕೇವಲ ಹಿಂದೂ ಎಂದರು. ಅವರೂ ಸಹ ಇಂಗ್ಲಿಷ್ ಮಾತಾಡುತ್ತಿದ್ದ ಈತ ಉನ್ನತ ಜಾತಿಯವನೇ ಇರಬೇಕೆಂದು ಮನೆ ನೀಡಿದರು.
ಆದರೆ ಯಾವಾಗ ಇವರು ಅಸ್ಪೃಶ್ಯ ಸಮುದಾಯದವರು ಎಂದು ತಿಳಿಯತೋ ಆ ಮನೆಯ ಯಜಮಾನ ಇವರನ್ನು ನಡೆಯೋ ಆಚೆಗೆ ಎಂದುಬಿಟ್ಟ!
ಆಗ ಅಂಬೇಡ್ಕರ್ ಅವರು ಮುಂದೆ ಎಲ್ಲಿರಬೇಕೆಂದು ತೋಚದೇ ಯಾರಿಗೂ ತಿಳಿಯದಂತೆ ಅಟ್ಟದ ಮೇಲೆ ಇರುತ್ತೇನೆ ಎಂದು ಹೇಳಿ, ಅಟ್ಟದ ಮೇಲಿನ ಸಾಮಾನಿನ ರಾಶಿ ಹಾಗು ಧೂಳಿನ ನಡುವೆ, ಒಂದು ಮುರುಕು ಕುರ್ಚಿ ಹಾಗೂ ಕಾಟಿನ ಮೇಲೆ ಯಾರಿಗೂ ಕಾಣದಂತೆ ಕಾಲ ಕಳೆಯತೊಡಗಿದರು.
ಆದರೆ ಮುಂದೆ ಇದು ಹೇಗೋ ಪಾರ್ಸಿಗಳಿಗೆ ಗೊತ್ತಾಗಿ ಅವರು ಲಾಠಿ ಹಿಡಿದು ಬಂದು ನಿಂತ ನೆಲದಲ್ಲೇ ಹೊರಗಡೆ ಹೋಗದಿದ್ದರೆ ಕೊಂದು ಬಿಡುವುದಾಗಿ ಧಮಕಿ ಹಾಕಿದರು.
ಆಗ ಜೀವ ಉಳಿದರೆ ಸಾಕೆಂದು ಇದ್ದ ಸಾಮಾನುಗಳು ಮತ್ತು ಪುಸ್ತಕಗಳೊಂದಿಗೆ ಅಂಬೇಡ್ಕರ್ ಅವರು ಬೀದಿಗೆ ಬಂದು ನಿಂತರು. ಯಾವ ಗೆಳೆಯರ ಸಹಾಯವೂ ಇಲ್ಲದೇ, ಕೂರಲು ಸ್ಥಳವಿಲ್ಲದೇ ಒಳಗೆ ಬಿಟ್ಟುಕೊಳ್ಳುವ ಗೆಳೆಯರ ಮನೆಗಳೂ ಇಲ್ಲದೇ ಅಕ್ಷರಶಃ ಅವಮಾನ ಅನುಭವಿಸಿದರು.
ಆಗ ಒಂದು ಮರದ ಕೆಳಗೆ ಕೂತ ಅಂಬೇಡ್ಕರ್ ಅವರು ” ಎಷ್ಟು ಕಷ್ಟಪಟ್ಟು ವಿದೇಶದಲ್ಲಿ ಉನ್ನತ ವ್ಯಾಸಾಂಗ ನಡೆಸಿ, ಪದವಿ ಪಡೆದರೂ ತಾನು ಹುಟ್ಟಿದ ಭಾರತದ ನೆಲದಲ್ಲಿ ಇರುವ ಜಾತಿಯ ಮುಂದೆ ತನ್ನ ವಿದ್ಯೆ, ಗುಣ ಮತ್ತು ಜ್ಞಾನ ಯಾವುದೂ ಲೆಕ್ಕಕ್ಕೆ ಇಲ್ಲದೇ ಹೋಯಿತಲ್ಲಾ… ಎಂದು ಯೋಚಿಸುತ್ತಾ, ತನ್ನ ಅಸಹಾಯಕತೆ ಮತ್ತು ಅವಮಾನವನ್ನು ನೆನೆದು ಬಾಬಾ ಸಾಹೇಬರು ಬಿಕ್ಕಿ ಬಿಕ್ಕಿ ಅಳುತ್ತಾರೆ.
ನಮಗಾಗಿ ಬದುಕಿನ ಉದ್ದಕ್ಕೂ ಹೋರಾಟ ನಡೆಸಿದ ಬಾಬಾ ಸಾಹೇಬರು ಎಂತಹ ಸ್ಥಿತಿ ಎದುರಿಸಿದ್ದರು ಅಲ್ಲವೇ?
– ಡಾ.ಎಚ್.ಸಿ.ಮಹದೇವಪ್ಪ, ಸಮಾಜ ಕಲ್ಯಾಣ ಸಚಿವ




