ದೇಶದ ಅನೇಕ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳನ್ನು ವಿಭಜಿಸುತ್ತ ಅಲ್ಲಿಂದ ಚುನಾಯಿತರಾಗಿದ್ದ ಲೋಕಸಭಾ ಸದಸ್ಯರು ಮತ್ತು ರಾಜ್ಯಸಭಾ ಸದಸ್ಯರು ಜೊತೆಗೆ ವಿಧಾನಸಭಾ ಸದಸ್ಯರನ್ನು ಯಾವುದೇ ನಾಚಿಕೆ ಇಲ್ಲದೆ ತಮ್ಮ ಪಕ್ಷಕ್ಕೆ ಸೇರ್ಪಡೆ ಮಾಡಿಸಿಕೊಂಡು, ಸಣ್ಣಪುಟ್ಟ ಪಕ್ಷಗಳನ್ನು ನಿರ್ನಾಮ ಮಾಡುತ್ತಿರುವ, ಬಿಜೆಪಿಯವರಿಗೆ ಕರ್ನಾಟಕದಲ್ಲಿನ ತಮ್ಮ ಪಕ್ಷದ ಆಸೆಬುರುಕ ಮತ್ತು ಸ್ವಾರ್ಥಿಗಳು ಅಡ್ಡ ಮತದಾನ ಮಾಡಿದ್ದಾರೆ ಎನ್ನುವುದು ದೊಡ್ಡದಾದಂತಹ ಘಟನೆಯಾಗಿದೆ. ಇದೇ ರೀತಿಯ ಅಭಿಪ್ರಾಯ ಮಹಾರಾಷ್ಟ್ರದಲ್ಲಿ ಮತ್ತು ಪಶ್ಚಿಮ ಬಂಗಾಳದಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿಯವರು ನಡೆಸುತ್ತಿರುವ ಪಕ್ಷಾಂತರ ಪರ್ವವೆಂಬ ಪ್ರಜಾಪ್ರಭುತ್ವದ ಕಗ್ಗೊಲೆಯ ಪ್ರಕರಣಗಳಲ್ಲಿ ಬಾಯಿ ಬಿಡಲು ಏನಾಗಿತ್ತು?
- ಭಾರತದ 72% IAS ಅಧಿಕಾರಿಗಳು, 90% ಹೈಕೋರ್ಟ್ ನ್ಯಾಯಮೂರ್ತಿಗಳು ಬ್ರಾಹ್ಮಣರೇ?
- ಪ್ರವಾಸಿ ಮಾರ್ಗದರ್ಶಿ ತರಬೇತಿಗೆ ಅರ್ಜಿ ಆಹ್ವಾನ
- ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಂದ ‘ಫ್ರೀಡಂ ಹಬ್ಬ’ ಘೋಷಣೆ
- ರಾಜೀನಾಮೆ ಸಲ್ಲಿಸುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ ಬಿ.ಆರ್.ಪಾಟೀಲ್
- ಫೆಲೋಶಿಪ್ಗೆ ಅರ್ಜಿ ಆಹ್ವಾನ
ಈ ಹಿಂದೆ ಯಡಿಯೂರಪ್ಪನವರು ಧರ್ಮಸ್ಥಳದಲ್ಲಿ ಆಣೆ ಪ್ರಮಾಣದ ಪ್ರಸ್ತಾಪವನ್ನ ಮಾಡಿ ಅದೊಂದು ದೊಡ್ಡ ಘಟನೆಯಾಯಿತು. ಈಗ ಇವರ ಸುಪುತ್ರ ವಿಜಯೇಂದ್ರ ರವರು ಇದೇ ಹಾದಿಯನ್ನ ಹಿಡಿದು ಅಡ್ಡ ಮತದಾನದ ವಿಚಾರಕ್ಕೆ ಧರ್ಮಸ್ಥಳವನ್ನು ಎಳೆದು ತಂದಿರುವುದು ಸರಿಯಾದಂತಹ ನಿರ್ಧಾರವಲ್ಲ.
ಅಡ್ಡ ಮತದಾನ ಮಾಡಿದವರಿಗೆ ಪತ್ತೆಹಚ್ಚಲು ಈಗಾಗಲೇ ವಿಚಾರಣಾ ಸಮಿತಿಯನ್ನು ನೇಮಿಸಿಕೊಂಡಿದ್ದೀರಿ. ಅವರುಗಳು ಕಂಡುಹಿಡಿಯಲು ಆಗದಿದ್ದರೆ ನಿಮ್ಮ ಪಕ್ಷದ ಕಚೇರಿಯ ಮುಂಭಾಗದಲ್ಲಿ ನಿಮ್ಮ ಪಕ್ಷದ ಶಾಸಕರುಗಳಿಗೆ ಅವರ ಹೆಂಡತಿ ಮತ್ತು ಮಕ್ಕಳ ತಲೆಯ ಮೇಲೆ ಕೈ ಇಟ್ಟು ಯಾರಿಗೆ ಮತ ಹಾಕಿದ್ದೇವೆ ಎಂದು ಪ್ರಮಾಣ ಮಾಡಲು ತಿಳಿಸಿ. ಆಗ ಭಯ ಬರುತ್ತದೆ. ಬೇಕಾದರೆ ದೇವರ ಮುಂದೆಯೂ ಸುಳ್ಳು ಹೇಳದಿರಲು ಸಾಧ್ಯವಿಲ್ಲ.
ಏನೇ ಆಗಲಿ ಧರ್ಮಸ್ಥಳ ಕೋಟ್ಯಾಂತರ ಜನರ ಭಕ್ತಿಯ, ನಂಬಿಕೆಯ ಕೇಂದ್ರವಾಗಿದೆ. ಇಲ್ಲಿ ರಾಜಕಾರಣಕ್ಕಾಗಿ ದೇವರನ್ನು ಬಳಸುವುದು ಸರಿಯಲ್ಲ. ಈ ಹಿನ್ನೆಲೆಯಲ್ಲಿ ಬಿಜೆಪಿಯ ನಾಯಕರು ತಮ್ಮ ಈ ನಿರ್ಧಾರದಿಂದ ಹಿಂದೆ ಸರಿದು ತಮ್ಮ ಪಕ್ಷದ ರಾಷ್ಟ್ರೀಯ ನಾಯಕರಿಗೆ ಬೇರೆಬೇರೆ ರಾಜ್ಯದಲ್ಲಿ ನೀವು ಮಾಡುತ್ತಿರುವ ಪ್ರಜಾಪ್ರಭುತ್ವದ ಕಗ್ಗೊಲೆಯ ಪ್ರಕರಣಗಳಿಂದಾಗಿ, ನಮ್ಮ ರಾಜ್ಯದಲ್ಲಿ ನಮ್ಮ ಪಕ್ಷಕ್ಕೆ ಬರೇ ಹಾಕಿದ್ದಾರೆ ಎಂದು ತಿಳಿಸುತ್ತಾ, ಅವರುಗಳ ನಡವಳಿಕೆಯನ್ನು ಮತ್ತು ಕುತಂತ್ರದ ಚಾಣಾಕ್ಷತನವೆಂಬ ರಾಜಕಾರಣದ ಹಾದಿಯನ್ನ ಬಿಟ್ಟು, ಸರಿಯಾದ ಮಾರ್ಗದಲ್ಲಿ ಹೋಗಲು ತಿಳಿಸಿ.
– ಕೆ ಎಸ್ ನಾಗರಾಜ್, ಬೆಂಗಳೂರು



