ಮುಸ್ಸಂಜೆಯ
ಮಬ್ಬಗತ್ತಲನ್ನು
ಮುಂಜಾವಿನ
ಮುಂಬೆಳಕೆಂದು
ಭ್ರಮಿಸಬಹುದೇ?
ಸಾವಿಗೆ ಮುಂಚಿನ
ಸುಟ್ಟ ನೋವಿನ
ಅರಿವಳಿಕೆಯನ್ನು
ಆರೈಕೆಯೆಂದು
ಭ್ರಮಿಸಬಹುದೇ?
ಪೂರ್ಣಾಂಕಗಳು
ಶೂನ್ಯದೊಡನೆ
ಸೆಣಸಿಗಳಿಸುವ
ಸೊನ್ನೆಗಳನ್ನು
ಪರಿಹಾರವೆನ್ನಬಹುದೇ?
ಸರಿಯುತ್ತಿರುವ
ನೆಲದೊಳಗೆ
ಕುಸಿಯುತ್ತಿರುವ
ಮರಕುದುರೆಯ
ಪತನವನ್ನು
ನಾಗಾಲೋಟವೆಂದು
ಬಣ್ಣಿಸಬಹುದೇ?
ತೂತುಲೋಟದೊಳಗೆ
ತುಂಬಿಟ್ಟ ನೀರು
ಬಾಯಾರಿದಾಗ
ದಕ್ಕಬಹುದೇ?
-ಶಿವಸುಂದರ್, ಹಿರಿಯ ಕವಿಗಳು




