shivasunder

ಕವಿ ಸಮಯ

ಕಾಳ್ಗಿಚ್ಚಿನಿಂದ ಮನೆದೀಪ ಬೆಳಗುವುದೇ?

ಮುಸ್ಸಂಜೆಯ ಮಬ್ಬಗತ್ತಲನ್ನುಮುಂಜಾವಿನಮುಂಬೆಳಕೆಂದುಭ್ರಮಿಸಬಹುದೇ? ಸಾವಿಗೆ ಮುಂಚಿನಸುಟ್ಟ ನೋವಿನಅರಿವಳಿಕೆಯನ್ನು ಆರೈಕೆಯೆಂದುಭ್ರಮಿಸಬಹುದೇ? ಪೂರ್ಣಾಂಕಗಳುಶೂನ್ಯದೊಡನೆಸೆಣಸಿಗಳಿಸುವಸೊನ್ನೆಗಳನ್ನುಪರಿಹಾರವೆನ್ನಬಹುದೇ? ಸರಿಯುತ್ತಿರುವನೆಲದೊಳಗೆಕುಸಿಯುತ್ತಿರುವಮರಕುದುರೆಯಪತನವನ್ನುನಾಗಾಲೋಟವೆಂದುಬಣ್ಣಿಸಬಹುದೇ? ತೂತುಲೋಟದೊಳಗೆತುಂಬಿಟ್ಟ ನೀರು ಬಾಯಾರಿದಾಗದಕ್ಕಬಹುದೇ? -ಶಿವಸುಂದರ್, ಹಿರಿಯ ಕವಿಗಳು

ಮುಂದೆ ಓದಿ »
ಕವಿ ಸಮಯ

ತ್ರಾಣವಿಲ್ಲವೇಕೆ ಪ್ರಜಾತಂತ್ರಕ್ಕೆ?

ಪ್ರಜಾತಂತ್ರದಹಿತ್ತಲಲ್ಲಿ.. ಮಾನವತೆಯತಂಪುಯುಗದಲ್ಲಿ ಸತ್ತಂತೆ ನಟಿಸುವಹಿಟ್ಲರನ ಮೊಟ್ಟೆಗಳು… ಬಂಡವಾಳಕ್ಕೆಬಿಸಿಯೇರಿದಂತೆ.. ಸುಡುಹಸಿವಿನಬೇಗೆಯಲ್ಲಿಕಾವುಪಡೆದುಜೀವತಳೆಯುತ್ತವೆ ಮೊಟ್ಟೆಯೊಡೆದುಹೊರಬಂದುಹಿಟ್ಲರನ ಚಿಟ್ಟೆಗಳುಭೂಮ್ಯಾಕಾಶವವ್ಯಾಪಿಸುತ್ತವೆ ಅಂಧಕಾರಸೃಷ್ಟಿಸುತ್ತವೆ… ಆದರೆ… ಹಿಟ್ಲರನ ರೆಕ್ಕೆಗಳಸುಡವಷ್ಟು ಸೂರ್ಯನ ಬೆಳಕುಬಿಸಿಯಿಲ್ಲವೇಕೆ? ಉರಿವ ಬಂಡವಾಳವಮಣಿಸಿಜಗವ ಪೊರೆಯುವಷ್ಟು.. ತ್ರಾಣವಿಲ್ಲವೇಕೆಪ್ರಜಾತಂತ್ರಕ್ಕೆ ?

ಮುಂದೆ ಓದಿ »