ಮುಂಬೈ ಅಂಗಳದಲ್ಲಿ ಮಲೆನಾಡು-ಕರಾವಳಿ ಹಬ್ಬ
ಮುಂಬೈ: ಮಾಯಾನಗರಿ ಮುಂಬೈ ಎಂದರೆ ಅಲ್ಲಿ ಎಲ್ಲವೂ ಪರಭಾಷೆಯಮಯ ಎಂಬ ಮಾತಿದೆ. ಆದರೆ, ಬಾಲಿವುಡ್ ತಾರೆ, ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ ಈಗ ಮುಂಬೈನ ಹೃದಯಭಾಗವಾದ ಬಾಂದ್ರಾದಲ್ಲಿ ಕನ್ನಡದ ಕಂಪು ಪಸರಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ತಮ್ಮ ಹೊಸ ರೆಸ್ಟೋರೆಂಟ್ ‘ಬಾಸ್ಟಿಯನ್ ಅಮ್ಮಾಕೈ’ (Bastian Amma Kai) ಮೂಲಕ ಅವರು ಮೆನುವಿನಿಂದ ಹಿಡಿದು ಮ್ಯಾಪ್ವರೆಗೆ ಎಲ್ಲದರಲ್ಲೂ ‘ಕನ್ನಡದ ಛಾಪು’ ಮೂಡಿಸಿದ್ದಾರೆ.
- ಎಸ್ಐಆರ್ ಎನ್ಯೂಮರೇಷನ್ ಪ್ರಕ್ರಿಯೆ ಬಗ್ಗೆ ಗೊಂದಲ ನಿವಾರಣೆ ಅಗತ್ಯ: ಅಪ್ಸರ್ ಕೊಡ್ಲಿಪೇಟೆ
- ಮಾತಾಡದೇ ನನ್ನೊಳಗೇ ಉಳಿದ ವಿಷಯಗಳು ಹೀಗಿವೆ
- ಪಂಚ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೆ ನಿಲ್ಲಿಸುವುದಿಲ್ಲ: ಸಿದ್ದರಾಮಯ್ಯ
- ಉನ್ನತ ಮಟ್ಟದ ಪರಿಶೀಲನಾ ಸಮಿತಿಗೆ ಪತ್ರ ಬರೆದ ಪ್ರತಿಪಕ್ಷ ನಾಯಕ ಆರ್.ಅಶೋಕ
- ಕಸಾಪಗೆ ಕಪ್ಪುಚುಕ್ಕೆ ಇಟ್ಟವರು ನಾಲ್ವಡಿಯವರಿಗೆ ಬಗೆದ ದ್ರೋಹ
ಹೆಸರಿನಲ್ಲೇ ಇದೆ ಅಮ್ಮನ ಮಮತೆ: ತುಳುವಿನಲ್ಲಿ ‘ಅಮ್ಮಾಕೈ’ ಎಂದರೆ ‘ಅಮ್ಮನ ಕೈ ರುಚಿ’ ಎಂದರ್ಥ. ಶಿಲ್ಪಾ ಶೆಟ್ಟಿ ಅವರು ತಮ್ಮ ತಾಯಿ ಸುನಂದಾ ಶೆಟ್ಟಿ ಅವರ ಕೈರುಚಿಯಿಂದ ಪ್ರೇರಿತರಾಗಿ ಈ ಹೋಟೆಲ್ಗೆ ಈ ಹೆಸರಿಟ್ಟಿದ್ದಾರೆ. ಕೇವಲ ಹೆಸರಷ್ಟೇ ಅಲ್ಲ, ಇಲ್ಲಿನ ಪ್ರತಿ ತುತ್ತಿನಲ್ಲೂ ಕನ್ನಡಿಗರ ಮನೆಮನದ ರುಚಿ ಅಡಗಿದೆ.
- ಎಸ್ಐಆರ್ ಎನ್ಯೂಮರೇಷನ್ ಪ್ರಕ್ರಿಯೆ ಬಗ್ಗೆ ಗೊಂದಲ ನಿವಾರಣೆ ಅಗತ್ಯ: ಅಪ್ಸರ್ ಕೊಡ್ಲಿಪೇಟೆ
- ಮಾತಾಡದೇ ನನ್ನೊಳಗೇ ಉಳಿದ ವಿಷಯಗಳು ಹೀಗಿವೆ
- ಪಂಚ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೆ ನಿಲ್ಲಿಸುವುದಿಲ್ಲ: ಸಿದ್ದರಾಮಯ್ಯ
- ಉನ್ನತ ಮಟ್ಟದ ಪರಿಶೀಲನಾ ಸಮಿತಿಗೆ ಪತ್ರ ಬರೆದ ಪ್ರತಿಪಕ್ಷ ನಾಯಕ ಆರ್.ಅಶೋಕ
- ಕಸಾಪಗೆ ಕಪ್ಪುಚುಕ್ಕೆ ಇಟ್ಟವರು ನಾಲ್ವಡಿಯವರಿಗೆ ಬಗೆದ ದ್ರೋಹ
ಮೆನುವಿನಲ್ಲಿ ಕರ್ನಾಟಕದ ಭೂಪಟ!: ಈ ರೆಸ್ಟೋರೆಂಟ್ನ ಅತ್ಯಂತ ಆಕರ್ಷಕ ಅಂಶವೆಂದರೆ ಅದರ ಮೆನು ಕಾರ್ಡ್. ಗ್ರಾಹಕರು ಕೈಗೆತ್ತಿಕೊಳ್ಳುವ ಮೆನುವಿನಲ್ಲಿ ಕರ್ನಾಟಕದ ಪೂರ್ಣ ಭೂಪಟವನ್ನು ಮುದ್ರಿಸಲಾಗಿದೆ. ರಾಜ್ಯದ ಯಾವ ಯಾವ ಜಿಲ್ಲೆಗಳಲ್ಲಿ ಯಾವ ತಿಂಡಿ ಪ್ರಸಿದ್ಧವೋ, ಅದನ್ನು ಚಿತ್ರಗಳ ಮೂಲಕ ಅಲ್ಲಿ ಬಿಂಬಿಸಲಾಗಿದೆ. ಮುಂಬೈ ಮೂಲದ ಗ್ರಾಹಕರಿಗೆ ಕರ್ನಾಟಕದ ಭೌಗೋಳಿಕ ಮತ್ತು ಆಹಾರದ ವೈವಿಧ್ಯತೆಯನ್ನು ಪರಿಚಯಿಸುವ ಈ ಪ್ರಯತ್ನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಹಿಂದಿ ಮರೆತು ಕನ್ನಡಕ್ಕೆ ಮಣೆ: ಸಾಮಾನ್ಯವಾಗಿ ಮುಂಬೈನಲ್ಲಿ ಹೋಟೆಲ್ ಮೆನುಗಳು ಇಂಗ್ಲಿಷ್ ಅಥವಾ ಹಿಂದಿಯಲ್ಲಿರುತ್ತವೆ. ಆದರೆ ಶಿಲ್ಪಾ ಶೆಟ್ಟಿ ಇಲ್ಲಿ ಧೈರ್ಯದ ಹೆಜ್ಜೆ ಇಟ್ಟಿದ್ದಾರೆ.

ಕೈಮ ಉಂಡೆ, ಖಾರಾ ಬೋಟಿ, ಎಣ್ಣೆಗಾಯಿ ಬದನೆಕಾಯಿ,ಕೋರಿ ರೊಟ್ಟಿ, ಕೊಡಗು ಪಾಂಡಿ ಕರಿ – ಇಂತಹ ಅಪ್ಪಟ ಕನ್ನಡದ ಹೆಸರುಗಳನ್ನೇ ಮೆನುವಿನಲ್ಲಿ ಬಳಸಲಾಗಿದೆ. “ಮುಂಬೈನಲ್ಲಿ ಕುಳಿತು ಕನ್ನಡದಲ್ಲಿ ಆರ್ಡರ್ ಮಾಡುವ ಸುಖವೇ ಬೇರೆ” ಎಂದು ಅಲ್ಲಿಗೆ ಭೇಟಿ ನೀಡುತ್ತಿರುವ ಕನ್ನಡಿಗರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ.
ಮಂಗಳೂರಿನಿಂದ ಮುಂಬೈವರೆಗೆ: ಕರಾವಳಿಯ ಮಸಾಲೆಗಳು, ತೆಂಗಿನಕಾಯಿಯ ಬಳಕೆ ಮತ್ತು ಅಪ್ಪಟ ನಾಟಿ ಶೈಲಿಯ ಅಡುಗೆಯನ್ನು ಇಲ್ಲಿನ ಪರಿಣಿತ ಬಾಣಸಿಗರು ಉಣಬಡಿಸುತ್ತಿದ್ದಾರೆ. ಕೇವಲ ಸೆಲೆಬ್ರಿಟಿಗಳಷ್ಟೇ ಅಲ್ಲದೆ, ಸಾಮಾನ್ಯ ಜನರಿಗೂ ಕರ್ನಾಟಕದ ರುಚಿ ತಲುಪಬೇಕು ಎಂಬುದು ಶಿಲ್ಪಾ ಶೆಟ್ಟಿ ಅವರ ಆಶಯ.
ಒಟ್ಟಾರೆ, ದೂರದ ಮುಂಬೈನಲ್ಲಿ ಕನ್ನಡದ ಬಾವುಟ ಹಾರಿಸಿ, ತವರು ನೆಲದ ರುಚಿಯನ್ನು ಜಗತ್ತಿಗೆ ಪರಿಚಯಿಸುತ್ತಿರುವ ಶಿಲ್ಪಾ ಶೆಟ್ಟಿ ಅವರ ಈ ‘ಕನ್ನಡ ಪ್ರೇಮ’ ನಿಜಕ್ಕೂ ಅಭಿನಂದನಾರ್ಹ.




