ರಂಗಬಳಪದಿಂದ ಸಂಶೋಧನೆ, ಕಾವ್ಯ, ಕಥಾ, ರಂಗಕಮ್ಮಟ ಏರ್ಪಡಿಸುವ ಯೋಜನೆ: ಡಾ. ರಾಜೇಂದ್ರ ಕುಮಾರ್ ಮುದ್ನಾಳ್
ಕಲಾವಿದ ಕೃಷ್ಣ ರಾಯಚೂರು ರಚಿಸಿದ ರಂಗ ಬಳಪ ಲಾಂಛನ ಲೋಕಾರ್ಪಣೆ
ಯಾದಗಿರಿ: ಯಾದಗಿರಿಯ ರಂಗಬಳಪ ಸಾಂಸ್ಕೃತಿಕ ವೇದಿಕೆಯ ಲಾಂಛನವನ್ನು ಮಹೇಶ್ ರೆಡ್ಡಿ ಮುದ್ನಾಳ ಅವರು ಚಾಮಾ ಕಲ್ಯಾಣ ಮಂಟಪದಲ್ಲಿ ಅನಾವರಣಗೊಳಿಸಿದರು.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಇದೇ ವೇಳೆ ಮಾತನಾಡಿದ ಅವರು, ಸದಾಕಾಲ ಸಾಂಸ್ಕೃತಿಕ ಚಟುವಟಿಕೆಗಳನ್ನು ಮಾಡುವವರಿಗೆ ನನ್ನ ಬೆಂಬಲ ಸದಾ ಇರುವುದು ಎಂದರು. ರಾಚಣ್ಣ ಗೌಡ ಮುದ್ನಾಳ ಅವರು ಆಯೋಜಕರನ್ನು ಪ್ರೋತ್ಸಾಹಿಸಿದರು.
ರಂಗ ಬಳಪ ಸಾಂಸ್ಕೃತಿಕ ಸಂಘಟನೆ ಜಿಲ್ಲೆಯಾದ್ಯಂತ ಕಥೆ, ಕಾದಂಬರಿ, ನಾಟಕ, ಚಿತ್ರಕಲೆಗಳ ಕುರಿತ ಸಂಶೋಧನೆ, ಕಾವ್ಯ, ಕಥಾ, ರಂಗಕಮ್ಮಟಗಳನ್ನು ಏರ್ಪಡಿಸುವ ಯೋಜನೆ ಒಳಗೊಂಡಿದೆ ಎಂದು ಎಂದು ರಂಗ ಬಳಪದ ನಿರ್ದೇಶಕರಾದ ಡಾ. ರಾಜೇಂದ್ರ ಕುಮಾರ್ ಮುದ್ನಾಳ್ ಹೇಳಿದರು.

ಮುಖ್ಯವಾಗಿ ಜಿಲ್ಲಾ ಕಲಾವಿದರನ್ನು, ಸಾಂಸ್ಕೃತಿಕವಾಗಿ ಗುರುತಿಸುವ ಉದ್ದೇಶವಿದೆ. ಹೆಚ್ಚಾಗಿ ಶಿಕ್ಷಕ ಮಿತ್ರರನ್ನು ಒಳಗೊಂಡಿರತಕ್ಕಂತಹ ವೇದಿಕೆ ಇದಾಗಿದೆ ಎಂದರು.
ಮಕ್ಕಳಲ್ಲಿರುವ ಸೃಜನ ಶೀಲತೆಯನ್ನು ಪ್ರಯೋಗಕ್ಕೊಳಪಡಿಸುವುದು ವೇದಿಕೆ ಮೂಲ ಉದ್ದೇಶ ಎಂದು ವಿವರಿಸಿದರು.
ಜಿಲ್ಲಾ ಕುಂಬಾರ ಸಂಘ ಅಧ್ಯಕ್ಷ ದೇವಿಂದ್ರಪ್ಪ ದರ್ಶನಾಪುರ, ಕ್ಷೇತ್ರ ಶಿಕ್ಷಣ ಅಧಿಕಾರಿಗಳಾದ ಈರಪ್ಪ ಕನ್ನಳ್ಳಿ ಸಾಗರ ಚಾಮಾ, ಭೀಮರಾಯ ಮುಂಡರಗಿ, ಬಂಗಾರಪ್ಪ, ಸಿದ್ದಲಿಂಗ ರೆಡ್ಡಿ ರಟ್ನಡಗಿ ಶಿಕ್ಷಕರು, ಸಾಹಿತ್ಯ ಆಸಕ್ತರು, ಸಂಪನ್ಮೂಲ ವ್ಯಕ್ತಿಗಳು ಸಹ ಹೃದಯರಿದ್ದರು. ಶಿಕ್ಷಕ ಶರಣಪ್ಪ ನಿರೂಪಿಸಿದರು.




