ರಂಗಬಳಪ ಸಾಂಸ್ಕೃತಿಕ ವೇದಿಕೆ ಯಾದಗಿರಿ, ತಮ್ಮಲ್ಲಿ ವಿನಂತಿಸಿಕೊಳ್ಳುವದೇನೆಂದರೆ ಯಾದಗಿರಿ ಪಟ್ಟಣದಲ್ಲಿ ರಂಗ ಚಟುವಟಿಕೆಗಳು ನಡೆಯಲು ರಂಗ ಮಂದಿರದ ಅವಶ್ಯಕತೆ ಇದೆ. ಹಾಗಾಗಿ ರಂಗ ನಾಟಕ ತಂಡಗಳು ಜಿಲ್ಲೆಗೆ ಆಗಮಿಸುವಲ್ಲಿ ರಂಗಬಳಪ ತಂಡ ಕಾರ್ಯನಿರತವಾಗಿದೆ.
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
ಸೂಕ್ತ ರಂಗಮಂದಿರ ಇಲ್ಲದಿರುವುದರಿಂದ ನಾಟಕ ತಂಡಗಳು ಯಾದಗಿರಿ ಜಿಲ್ಲೆಗೆ ಆಗಮಿಸುತ್ತಿಲ್ಲ. ಹಾಗಾಗಿ ನಿರ್ಮಾಣ ಹಂತದಲ್ಲಿರುವ ರಂಗ ಮಂದಿರವನ್ನು ಕೂಡಲೇ ಉದ್ಘಾಟಿಸಿ, ಲೋಕಾರ್ಪಣೆಗೊಳಿಸಬೇಕೆಂದು ತಮ್ಮಲ್ಲಿ ಮನವಿ.
ರಂಗ ಬಳಪ ವೇದಿಕೆ ಬಹಳಷ್ಟು ಕಾರ್ಯಕ್ರಮಗಳು ರಂಗಮಂದಿರದಲ್ಲಿಯೇ ನಡೆಸಬೇಕಾಗಿದೆ. ಜಿಲ್ಲೆಯಲ್ಲಿ ರಂಗಕಮ್ಮಟ ಕಾವ್ಯ ಶಿಬಿರ ಇತ್ಯಾದಿ, ಸಾಂಸ್ಕೃತಿಕ ಚಟುವಟಿಕೆಗಳನ್ನು ರಂಗಬಳಪ ನಿರ್ವಹಿಸುತ್ತಿದೆ.
ನಾಡಿನ ಪ್ರಖ್ಯಾತ ರಂಗ ನಾಟಕ ತಂಡಗಳು ಯಾದಗಿರಿ ಜನತೆಗೆ ಸಾಂಸ್ಕೃತಿಕ ಲೋಕವನ್ನು ಪರಿಚಯಿಸಲು ರಂಗಮಂದಿರ ಸಾರ್ವಜನಿಕಗೊಳಿಸಬೇಕೆಂದು ತಮ್ಮಲ್ಲಿ ಈ ಮೂಲಕ ಒತ್ತಾಯಿಸುತ್ತಿದ್ದೇವೆ.
– ಡಾ.ರಾಜೇಂದ್ರಕುಮಾರ್ ಕೆ. ಮುದ್ನಾಳ್, ನಿರ್ದೇಶಕರು, ರಂಗಬಳಪ, ಸಾಂಸ್ಕೃತಿಕ ವೇದಿಕೆ ಯಾದಗಿರಿ, ಮೊ. 9902836498, email:kruparaj38@gmail.com




