ರಂಗಬಳಪ ಸಾಂಸ್ಕೃತಿಕ ವೇದಿಕೆ ಯಾದಗಿರಿ, ತಮ್ಮಲ್ಲಿ ವಿನಂತಿಸಿಕೊಳ್ಳುವದೇನೆಂದರೆ ಯಾದಗಿರಿ ಪಟ್ಟಣದಲ್ಲಿ ರಂಗ ಚಟುವಟಿಕೆಗಳು ನಡೆಯಲು ರಂಗ ಮಂದಿರದ ಅವಶ್ಯಕತೆ ಇದೆ. ಹಾಗಾಗಿ ರಂಗ ನಾಟಕ ತಂಡಗಳು ಜಿಲ್ಲೆಗೆ ಆಗಮಿಸುವಲ್ಲಿ ರಂಗಬಳಪ ತಂಡ ಕಾರ್ಯನಿರತವಾಗಿದೆ.
- ಕಟ್ಟೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಸೇವೆ ಮನೆ ಬಾಗಿಲಿಗೆ ಮಾದರಿ ಕಾರ್ಯಕ್ರಮ
- ಕನ್ನಡ ಸಿನಿಮಾ: ಮುಳುಗುತ್ತಿರುವ ಟೈಟಾನಿಕ್
- RSS ಅನ್ನು ಪ್ರಶ್ನಿಸುವ ಯೋಗ್ಯತೆಯಿದೆಯೇ?: ಆರ್. ಅಶೋಕ್
- ಎಸ್ಐಆರ್ ಎನ್ಯೂಮರೇಷನ್ ಪ್ರಕ್ರಿಯೆ ಬಗ್ಗೆ ಗೊಂದಲ ನಿವಾರಣೆ ಅಗತ್ಯ: ಅಪ್ಸರ್ ಕೊಡ್ಲಿಪೇಟೆ
- ಮಾತಾಡದೇ ನನ್ನೊಳಗೇ ಉಳಿದ ವಿಷಯಗಳು ಹೀಗಿವೆ
ಸೂಕ್ತ ರಂಗಮಂದಿರ ಇಲ್ಲದಿರುವುದರಿಂದ ನಾಟಕ ತಂಡಗಳು ಯಾದಗಿರಿ ಜಿಲ್ಲೆಗೆ ಆಗಮಿಸುತ್ತಿಲ್ಲ. ಹಾಗಾಗಿ ನಿರ್ಮಾಣ ಹಂತದಲ್ಲಿರುವ ರಂಗ ಮಂದಿರವನ್ನು ಕೂಡಲೇ ಉದ್ಘಾಟಿಸಿ, ಲೋಕಾರ್ಪಣೆಗೊಳಿಸಬೇಕೆಂದು ತಮ್ಮಲ್ಲಿ ಮನವಿ.
ರಂಗ ಬಳಪ ವೇದಿಕೆ ಬಹಳಷ್ಟು ಕಾರ್ಯಕ್ರಮಗಳು ರಂಗಮಂದಿರದಲ್ಲಿಯೇ ನಡೆಸಬೇಕಾಗಿದೆ. ಜಿಲ್ಲೆಯಲ್ಲಿ ರಂಗಕಮ್ಮಟ ಕಾವ್ಯ ಶಿಬಿರ ಇತ್ಯಾದಿ, ಸಾಂಸ್ಕೃತಿಕ ಚಟುವಟಿಕೆಗಳನ್ನು ರಂಗಬಳಪ ನಿರ್ವಹಿಸುತ್ತಿದೆ.
ನಾಡಿನ ಪ್ರಖ್ಯಾತ ರಂಗ ನಾಟಕ ತಂಡಗಳು ಯಾದಗಿರಿ ಜನತೆಗೆ ಸಾಂಸ್ಕೃತಿಕ ಲೋಕವನ್ನು ಪರಿಚಯಿಸಲು ರಂಗಮಂದಿರ ಸಾರ್ವಜನಿಕಗೊಳಿಸಬೇಕೆಂದು ತಮ್ಮಲ್ಲಿ ಈ ಮೂಲಕ ಒತ್ತಾಯಿಸುತ್ತಿದ್ದೇವೆ.
– ಡಾ.ರಾಜೇಂದ್ರಕುಮಾರ್ ಕೆ. ಮುದ್ನಾಳ್, ನಿರ್ದೇಶಕರು, ರಂಗಬಳಪ, ಸಾಂಸ್ಕೃತಿಕ ವೇದಿಕೆ ಯಾದಗಿರಿ, ಮೊ. 9902836498, email:kruparaj38@gmail.com




