ಬಿ.ವಿ. ಕಾರಂತರ ಜನ್ಮದಿನದ ಅಂಗವಾಗಿ ಉಪನ್ಯಾಸ ಹಾಗೂ ರಂಗಗೀತೆ ಕಾರ್ಯಕ್ರಮ

2 years ago

ಧಾರವಾಡ:  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ರಂಗಾಯಣದ ಸಹಯೋಗದಲ್ಲಿ ಆಧುನಿಕ ಕನ್ನಡ ರಂಗಭೂಮಿಯ ಬೆಳ್ಳಿಚುಕ್ಕಿ, ರಂಗಋಷಿ ಬಿ.ವಿ.ಕಾರಂತ ಅವರ ಜನ್ಮದಿನದ ನೆನಪಿನಲ್ಲಿ  ಕವಿ, ನಾಟಕಕಾರ, ರಂಗ ನಿರ್ದೇಶಕ ರಘುನಂದನ ಅವರಿಂದ ರಂಗಭೂಮಿ, ರಂಗಾಯಣ: ಗೊತ್ತುಗುರಿಯ ಮಾತು  ಉಪನ್ಯಾಸ ಹಾಗೂ ರಂಗಗೀತೆ ಕಾರ್ಯಕ್ರಮವನ್ನು ಸೆಪ್ಟೆಂಬರ್ 23, 2024 ರಂದು ಬೆಳಿಗ್ಗೆ 10.30 ಗಂಟೆಗೆ ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಚಯ ಸಭಾಭವನದಲ್ಲಿ ಆಯೋಜಿಸಲಾಗಿದೆ.

ರಂಗಾಯಣ ನಿರ್ದೇಶಕ ಡಾ. ರಾಜು ತಾಳಿಕೋಟೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಕರ್ನಾಟಕ ನಾಟಕ ಅಕಾಡೆಮಿ ಸದಸ್ಯೆ ಗಾಯತ್ರಿ ಮಹಾದೇವ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತಿ ವಹಿಸುವರು.

ಕಾರ್ಯಕ್ರಮದಲ್ಲಿ ರಂಗನಿರ್ದೇಶಕ ರಘುನಂದನ ಅವರು ನಾನು ಸತ್ತಮೇಲೆ ಕವನ ಸಂಕಲನ ಮತ್ತು ಬೇಂದ್ರೆ ಕಾವ್ಯ ಕುರಿತ ತುಯ್ತವೆಲ್ಲ ನವ್ಯದತ್ತ ಪುಸ್ತಕದ ಕುರಿತು ಮಾತನಾಡವರು. ಹಾಗೂ ಸುನಂದಾ ನಿಂಬನಗೌಡರ ಅವರು ರಂಗಗೀತೆಗಳನ್ನು ಪ್ರಸ್ತುತ ಪಡಿಸಲಿದ್ದಾರೆ.

Leave a Reply