ಬಳ್ಳಾರಿ: ನೆಹರು ಯುವ ಕೇಂದ್ರ ವತಿಯಿಂದ ಜಿಲ್ಲಾ ಮಟ್ಟದ ಯುವ ಉತ್ಸವ ಕಾರ್ಯಕ್ರಮ ಅಂಗವಾಗಿ ವಿವಿಧ ಸ್ಪರ್ಧೆ ಆಯೋಜಿಸಲಾಗಿದ್ದು, ಆಸಕ್ತ ಯುವ ಸಮೂಹವು ನ.29ರ ಒಳಗಾಗಿ ಗೂಗಲ್ ಶೀಟ್ ಮೂಲಕ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಳ್ಳಬಹುದು ಎಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಮೊಂಟು ಪಾತರ್ ತಿಳಿಸಿದ್ದಾರೆ.
- ದೇಶದ ರಾಜ್ಯಗಳಲ್ಲಿ ಕೊನೆಯ ಬಾರಿ ಕಾಂಗ್ರೆಸ್ ಸಿಎಂ ಇದ್ದದ್ದು ಯಾವಾಗ?
- ನಮ್ಮ ತಲೆಮಾರಿನ ರಾಜಕಾರಣಿಗಳು, ಭವಿಷ್ಯದ ಯುವ ನಾಯಕರಿಗೆ ಸಿದ್ದರಾಮಯ್ಯ ಸ್ಫೂರ್ತಿ: ಪ್ರಿಯಾಂಕ್ ಖರ್ಗೆ
- ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿದ್ದರಾಮಯ್ಯ ಹೇಳಿದ್ದೇನು?
- ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ಯಾರು, ಏನೆಂದರು?
- ಹಣಕಾಸು ಮಂತ್ರಿಗಳಾಗಿ ಸಿದ್ದರಾಮಯ್ಯ ಸಾಧಿಸಿದ ಆರ್ಥಿಕ ಶಿಸ್ತು ಒಂದು ಪಠ್ಯದಂತಿದೆ: ಬಿ ಶ್ರೀಪಾದ ಭಟ್
ಸ್ಪರ್ಧೆ ಮತ್ತು ಬಹುಮಾನಗಳ ವಿವರ:
ವಿಜ್ಞಾನ ಮೇಳ (ಸ್ಪರ್ಧಾತ್ಮಕ ಕಾರ್ಯಕ್ರಮ-ವೈಯಕ್ತಿಕ): ಪ್ರಥಮ–ರೂ.3000, ದ್ವಿತೀಯ-ರೂ.2000, ತೃತೀಯ-ರೂ.1500.
ವಿಜ್ಞಾನ ಮೇಳ (ಸ್ಪರ್ಧಾತ್ಮಕ ಕಾರ್ಯಕ್ರಮ-ಗುಂಪು): ಪ್ರಥಮ –ರೂ.7000, ದ್ವಿತೀಯ-ರೂ.5000, ತೃತೀಯ-ರೂ.3000.
ಯುವ ಬರಹಗಾರರ ಸ್ಪರ್ಧೆ: ಪ್ರಥಮ –ರೂ.2500, ದ್ವಿತೀಯ-ರೂ.1500 , ತೃತೀಯ-ರೂ.1000.
ಯುವ ಕಲಾಕಾರರ ಸ್ಪರ್ಧೆ: ಪ್ರಥಮ –ರೂ.2500, ದ್ವಿತೀಯ-ರೂ.1500 , ತೃತೀಯ-ರೂ.1000.
ಫೋಟೊಗ್ರಫಿ ಸ್ಪರ್ಧೆ ಮತ್ತು ಕಾರ್ಯಾಗಾರ: ಪ್ರಥಮ –ರೂ.2500, ದ್ವಿತೀಯ-ರೂ.1500 , ತೃತೀಯ-ರೂ.1000
ಭಾಷಣ ಸ್ಪರ್ಧೆ: ಪ್ರಥಮ –ರೂ.5000, ದ್ವಿತೀಯ-ರೂ.2500, ತೃತೀಯ-ರೂ.1500
ಕಥೆ ಬರವಣಿಗೆ: ಪ್ರಥಮ–ರೂ.2500, ದ್ವಿತೀಯ-ರೂ.1500 , ತೃತೀಯ-ರೂ.1000
ಜಾನಪದ ನೃತ್ಯ ಕಾರ್ಯಕ್ರಮ-ಗುಂಪು: ಪ್ರಥಮ –ರೂ.7000, ದ್ವಿತೀಯ-ರೂ.5000 , ತೃತೀಯ-ರೂ.3000.
ಜಾನಪದ ನೃತ್ಯ ಕಾರ್ಯಕ್ರಮ-ವೈಯಕ್ತಿಕ: ಪ್ರಥಮ –ರೂ.2500, ದ್ವಿತೀಯ-ರೂ.1500, ತೃತೀಯ-ರೂ.1000.
ಷರತ್ತುಗಳು:
ಸ್ಪರ್ಧೆಗಳಲ್ಲಿ ಭಾಗವಹಿಸುವವರ ವಯಸ್ಸು 15 ರಿಂದ 29 ವರ್ಷದೊಳಗಿನವರಾಗಿರಬೇಕು. ಹಿಂದಿ, ಇಂಗ್ಲೀಷ್ನಲ್ಲಿ ಮಾತನಾಡಬಹುದು. ಆಧಾರ್ ಕಾರ್ಡ್, 2 ಫೋಟೊ, ಜನ್ಮ ದಿನಾಂಕದ ದಾಖಲಾತಿ, ಬ್ಯಾಂಕ್ ಪಾಸ್ಬುಕ್ ಜೆರಾಕ್ಸ್ ಪ್ರತಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಮೊ.9972552385, 9049487027 ಗೆ ಸಂಪರ್ಕಿಸಬಹುದು.




