ಮಾನ್ಯ ಸೋಮಣ್ಣನವರು ಶ್ರೀ ಶಿವಕುಮಾರ ಸ್ವಾಮೀಜಿರವರ ಹೆಸರನ್ನು ಯಾವುದಾದರೂ ಒಂದು ಪ್ರಮುಖ ರೈಲಿಗೆ ನಾಮಕರಣ ಮಾಡಿ. ನಡೆದಾಡುವ ದೇವರು ಎಂಬ ಮಾತಿನೊಂದಿಗೆ ಕೋಟ್ಯಾಂತರ ಜನರ ಮನಸ್ಸಿನಲ್ಲಿ ಅಪಾರವಾದ ಭಕ್ತಿಯ ಆರಾಧ್ಯ ದೇವರಾಗಿರುವ ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳು.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಇವರ ಬಗ್ಗೆ ಅಪಾರವಾದಂತಹ ಗೌರವ ಮತ್ತು ಭಕ್ತಿಯನ್ನು ಹೊಂದಿರುವರು ತುಮಕೂರು ಲೋಕಸಭಾ ಕ್ಷೇತ್ರದ ಸದಸ್ಯರು ಮತ್ತು ವಿಶೇಷವಾಗಿ ಕೇಂದ್ರದ ರೈಲ್ವೆ ರಾಜ್ಯ ಸಚಿವರಾಗಿರುವ ಸೋಮಣ್ಣನವರು.
ಸೋಮಣ್ಣನವರು ಈಗಲಾದರೂ ತಮ್ಮ ಅಧಿಕಾರದ ವ್ಯಾಪ್ತಿಯಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿರವರ ಹೆಸರುನ್ನು ಯಾವುದಾದರೂ ಒಂದು ಪ್ರಮುಖವಾದಂತಹ ರೈಲಿಗೆ ನಾಮಕರಣ ಮಾಡಬೇಕು. ಹಾಗೆ ಮಾಡಿದರೆ ಇದರಿಂದ ಕೋಟ್ಯಾಂತರ ಭಕ್ತರಿಗೆ ಸಂತೋಷವಾಗುತ್ತದೆ ಮತ್ತು ಇವರ ಹಿರಿಮೆಯನ್ನ ಮತ್ತಷ್ಟು ಜನರಿಗೆ ಮುಟ್ಟಿಸಿದಂತಾಗುತ್ತದೆ. ಇವರಿಗೆ ಭಾರತರತ್ನ ಗೌರವವೂ ದೊರೆತಿಲ್ಲ. ಈಗಲಾದರೂ ಮಾನ್ಯ ಸೋಮಣ್ಣನವರು ಪ್ರಮುಖವಾದ ರೈಲಿಗೆ ಇವರ ಹೆಸರನ್ನು ನಾಮಕರಣ ಮಾಡಿ ಮಾಡಿ ಪದೇಪದೇ ಇವರ ಹೆಸರನ್ನು ಸ್ಮರಿಸಿಕೊಳ್ಳುವಂತೆ ಮಾಡಬೇಕೆಂದು ಕೋರಿಕೊಳ್ಳುತ್ತೇನೆ.
– ಕೆ ಎಸ್ ನಾಗರಾಜ್, ಬೆಂಗಳೂರು




