ಬೆಂಗಳೂರು: ಕರ್ನಾಟಕ ಸರ್ಕಾರದಿಂದ 2020-21 ನೇ ಸಾಲಿನಲ್ಲಿ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯನ್ನು ಸ್ಥಾಪಿಸಲಾಗಿರುತ್ತದೆ.
- ಭಾರತದ 72% IAS ಅಧಿಕಾರಿಗಳು, 90% ಹೈಕೋರ್ಟ್ ನ್ಯಾಯಮೂರ್ತಿಗಳು ಬ್ರಾಹ್ಮಣರೇ?
- ಪ್ರವಾಸಿ ಮಾರ್ಗದರ್ಶಿ ತರಬೇತಿಗೆ ಅರ್ಜಿ ಆಹ್ವಾನ
- ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಂದ ‘ಫ್ರೀಡಂ ಹಬ್ಬ’ ಘೋಷಣೆ
- ರಾಜೀನಾಮೆ ಸಲ್ಲಿಸುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ ಬಿ.ಆರ್.ಪಾಟೀಲ್
- ಫೆಲೋಶಿಪ್ಗೆ ಅರ್ಜಿ ಆಹ್ವಾನ
ಅಕಾಡೆಮಿಯ ವತಿಯಿಂದ ಬಂಜಾರ ಸಂಸ್ಕೃತಿ, ಭಾಷೆ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದಂತೆ ವೈವಿಧ್ಯಮಯವಾದ ಕಾರ್ಯಕ್ರಮಗಳು ಹಾಗೂ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಈ ಹಿನ್ನಲೆಯಲ್ಲಿ ಬಂಜಾರ ಸಮುದಾಯದ ಸಂಪ್ರದಾಯಗಳು, ಆಚಾರ ವಿಚಾರಗಳು ಹಾಗೂ ವೇಷಭೂಷಣಗಳು ಇತ್ಯಾದಿ ಸಮಗ್ರ ವಿಷಯಗಳನ್ನು ಒಳಗೊಂಡ ಲೋಗೋವನ್ನು ರಚಿಸಬೇಕಾಗಿರುತ್ತದೆ.
ಆಸಕ್ತ ಕಲಾವಿದರು ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಗೆ ಸೂಕ್ತವಾಗುವಂತಹ ಒಂದು ಲೋಗೋವನ್ನು (03 ವಿಭಿನ್ನ ರೀತಿಯಲ್ಲಿ ರಚಿಸುವುದು) ರಚಿಸಿ ದಿನಾಂಕ: 15.11.2024ರ ಒಳಗಾಗಿ ಖುದ್ದಾಗಿ ಅಕಾಡೆಮಿಯ ಕಚೇರಿಗೆ ತಲುಪಿಸಲು ಕೋರಿದೆ.
ಆಯ್ಕೆಯಾದ ಲೋಗೋ ಒಂದಕ್ಕೆ ಅಕಾಡೆಮಿಯಿಂದ ರೂ.25,000/- ಗಳ ಬಹುಮಾನವನ್ನು ನೀಡಲಾಗುವುದು. ಲೋಗೋ ಆಯ್ಕೆ ಮಾಡುವಲ್ಲಿ ಅಕಾಡೆಮಿಯ ತೀರ್ಮಾನವೇ ಅಂತಿಮವಾಗಿರುತ್ತದೆ.



