ಸಾಹಿತ್ಯ ಮತ್ತು ಸಂಗೀತದ ಅಪೂರ್ವ ಸಂಗಮ!
ದೊಡ್ಡಬಳ್ಳಾಪುರ: ಅಕ್ಷರ ಮತ್ತು ಸ್ವರಗಳ ಮಿಲನಕ್ಕೆ ಸಾಕ್ಷಿಯಾಗಲು ರೇಷ್ಮೆ ನಗರಿ ಸಜ್ಜಾಗಿದೆ. ಡಾ. ಡಿ.ಆರ್. ನಾಗರಾಜ್ ಬಳಗ ಹಾಗೂ ಕರ್ನಾಟಕ ಗಜಲ್ ಅಕಾಡೆಮಿ (ರಿ.), ಬೆಂಗಳೂರು ಇವರ ಸಹಯೋಗದಲ್ಲಿ ಬರುವ ಏಪ್ರಿಲ್ 19ರಂದು ವಿಶಿಷ್ಟವಾದ ‘ಗಜಲ್ ಸಂಭ್ರಮ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
- ದೇಶದ ರಾಜ್ಯಗಳಲ್ಲಿ ಕೊನೆಯ ಬಾರಿ ಕಾಂಗ್ರೆಸ್ ಸಿಎಂ ಇದ್ದದ್ದು ಯಾವಾಗ?
- ನಮ್ಮ ತಲೆಮಾರಿನ ರಾಜಕಾರಣಿಗಳು, ಭವಿಷ್ಯದ ಯುವ ನಾಯಕರಿಗೆ ಸಿದ್ದರಾಮಯ್ಯ ಸ್ಫೂರ್ತಿ: ಪ್ರಿಯಾಂಕ್ ಖರ್ಗೆ
- ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿದ್ದರಾಮಯ್ಯ ಹೇಳಿದ್ದೇನು?
- ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ಯಾರು, ಏನೆಂದರು?
- ಹಣಕಾಸು ಮಂತ್ರಿಗಳಾಗಿ ಸಿದ್ದರಾಮಯ್ಯ ಸಾಧಿಸಿದ ಆರ್ಥಿಕ ಶಿಸ್ತು ಒಂದು ಪಠ್ಯದಂತಿದೆ: ಬಿ ಶ್ರೀಪಾದ ಭಟ್
ಗಜಲ್ ಸಾಹಿತ್ಯದ ಸೌಂದರ್ಯವನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ ಆಯೋಜಿಸಲಾಗಿರುವ ಈ ಕಾರ್ಯಕ್ರಮದಲ್ಲಿ ಗಜಲ್ ವಾಚನ ಮತ್ತು ಗಾಯನ ಎರಡೂ ಇರಲಿರುವುದು ವಿಶೇಷ.
ಕಾರ್ಯಕ್ರಮದ ವಿವರಗಳು:
ದಿನಾಂಕ: 19 ಏಪ್ರಿಲ್ 2026
ಸ್ಥಳ: ಕಲಾಭವನ, ಮುದ್ದನಾಯಕನ ಪಾಳ್ಯ, ನಂದಿ ಮೋರಿ ಹತ್ತಿರ, ರಾಮಯ್ಯನ ಪಾಳ್ಯದ ರಸ್ತೆ, ದೊಡ್ಡಬಳ್ಳಾಪುರ.
ಸಮಯ: 11

ಗಜಲ್ ಎಂದರೆ ಕೇವಲ ಸಾಹಿತ್ಯವಲ್ಲ, ಅದೊಂದು ಭಾವನೆಗಳ ಮಹಾಪೂರ. ಹಾರ್ಮೋನಿಯಂನ ಸುಶ್ರಾವ್ಯ ನಾದ ಮತ್ತು ತಬಲಾದ ಲಯಬದ್ಧ ಗತಿಯೊಂದಿಗೆ ಗಜಲ್ ಪ್ರಿಯರಿಗೆ ಹಬ್ಬದೂಟ.
ದೊಡ್ಡಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಾಹಿತ್ಯಾಸಕ್ತರು ಹಾಗೂ ಸಂಗೀತ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಸಾಂಸ್ಕೃತಿಕ ಹಬ್ಬವನ್ನು ಯಶಸ್ವಿಗೊಳಿಸಬೇಕೆಂದು ಡಾ. ಡಿ.ಆರ್. ನಾಗರಾಜ್ ಬಳಗ ವಿನಂತಿಸಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಮೊಬೈಲ್ ಸಂಖ್ಯೆ: 97315 14051




