ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಭಾನುವಾರ ರಜಾ ದಿನವಾದ ಕಾರಣದಿಂದ ಅಂದು ಕಾಯಿಲೆ ಬಂದವರು ಚಿಕಿತ್ಸೆಗೆ ಆಸ್ಪತ್ರೆಗಳಿಗೆ ಹೋದರೆ ವೈದ್ಯರುಗಳ ಕೊರತೆಯಿಂದ ಸೋಮುವಾರದ ತನಕ ಕಾಯಬೇಕಾಗಿದೆ. ತುರ್ತು ಚಿಕಿತ್ಸೆಗಳಿಗಾಗಿ ಕಾಯಿಲೆಗಳಿಗೆ ರಜಾ ದಿನ ಎಂದು ಹೇಳುವುದಾದರೂ ಹೇಗೆ? ಇಂದು ರಜವಿದೆ ಕಾಯಿಲೆಗಳು ಕಾಡಬೇಡ ಎಂದು ದೇಹವನ್ನು ಕೇಳಿಕೊಳ್ಳಲು ಸಾಧ್ಯವಿಲ್ಲ. ಕೇಳಿಕೊಂಡರು ದೇಹ ಅದರಂತೆ ನಡೆದುಕೊಳ್ಳುವುದಿಲ್ಲ.
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
ಸರ್ಕಾರಿ ಆಸ್ಪತ್ರೆಗಳಲ್ಲಿ ಭಾನುವಾರದ ದಿನ ಹೊರರೋಗಿಗಳ ತಪಾಸಣೆ ಮತ್ತು ತುರ್ತು ಚಿಕಿತ್ಸೆಗಳಿಗೆ ಅವಕಾಶವಿರುವುದಿಲ್ಲ. ಇದರಿಂದ ದಿನಗೂಲಿ ನೌಕರರಿಗೆ ಮತ್ತು ಇತರೆ ಶ್ರಮದ ಜೀವನ ನಡೆಸುವ ಕಾರ್ಮಿಕರಿಗೆ ತೊಂದರೆಯಾಗುತ್ತಿದೆ. ವಾರದ ಮಧ್ಯದಲ್ಲಿ ಅವರುಗಳು ತಮ್ಮ ಕೆಲಸಗಳಿಗೆ ರಜಾ ಹಾಕಿ ಇಲ್ಲವೇ ಕೆಲಸವನ್ನ ಮಾಡದೆ ಆಸ್ಪತ್ರೆಗಳಿಗೆ ಬಂದು ತಪಾಸಣೆ ಅಥವಾ ಚಿಕಿತ್ಸೆ ಪಡೆಯಲು ಸಾಧ್ಯವಾಗುವುದಿಲ್ಲ. ಅಂದು ದುಡಿದು ಅಂದು ಹೊಟ್ಟೆಯನ್ನ ತುಂಬಿಸಿಕೊಳ್ಳಬೇಕಾದಂತಹ ಶ್ರಮ ಜೀವಿಗಳಿಗೆ ಒಂದು ದಿನದ ರಜವು ಸಹ ಸಾಧ್ಯವಾಗುವುದಿಲ್ಲ. ಕಾರಣ ಕೂಲಿಯ ಚಿಂತೆಯಾಗಿರುತ್ತದೆ.
ಈ ಹಿನ್ನೆಲೆಯಲ್ಲಿ ಸರ್ಕಾರ ಭಾನುವಾರದ ದಿನಗಳಲ್ಲಿ ಹೊರರೋಗಿಗಳ ತಪಾಸಣೆ ಮತ್ತು ಚಿಕಿತ್ಸೆಗೆ ಅನುವು ಮಾಡಿಕೊಟ್ಟರೆ ಲಕ್ಷಾಂತರ ದುಡಿಯುವ ಮಂದಿಗೆ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಮಾನ್ಯ ಆರೋಗ್ಯ ಸಚಿವರು ಚಿಂತಿಸಿ ಬೇಕಾದಂತಹ ಯೋಜನೆಯನ್ನು ರೂಪಿಸಿಕೊಟ್ಟರೆ ದುಡಿಯುವ. ಶ್ರಮದ. ಮಂದಿಗೆ ಅನುಕೂಲವಾಗುತ್ತದೆ. ಬಡವರ ಬಗ್ಗೆ ಕಾಳಜಿ ಉಳ್ಳಂತಹ. ಮಾನ್ಯ ಆರೋಗ್ಯ ಸಚಿವರು ಈ ವಿಚಾರವನ್ನ ಗಂಭೀರವಾಗಿ ಪರಿಗಣಿಸಿ ಅಗತ್ಯವಾದಂತಹ ಕ್ರಮವನ್ನ ಕೈಗೊಂಡರೆ ಇದೊಂದು ಒಳ್ಳೆಯ ಯೋಜನೆ ಆಗುತ್ತದೆ.
– ಕೆ ಎಸ್ ನಾಗರಾಜ್, ಬೆಂಗಳೂರು



