ತೃತೀಯ ಲಿಂಗಿಗಳ ಕಾನೂನು ಅರಿವು ಕುರಿತು ನೆರವು ಬೀದಿ ನಾಟಕ

5 months ago

ದಾವಣಗೆರೆ: ಜಿಲ್ಲಾ ಕಾನೂನು ಸೇವಗಳ ಪ್ರಾಧಿಕಾರ ಹಾಗೂ ಆರ್.ಎಲ್.ಕಾನೂನು ಕಾಲೇಜು ಸಹಯೋಗದಲ್ಲಿ ನವೆಂಬರ್ 11 ರಂದು ಸಂಜೆ 4 ಗಂಟೆಗೆ ನಗರದ ರಾಮ್-ಅಂಡ್ ಕೋ ವೃತ್ತದಲ್ಲಿ ತೃತೀಯ ಲಿಂಗಿಗಳ ಕಾನೂನಾತ್ಮಕ ಹಕ್ಕುಗಳು ಕುರಿತ ಆರ್.ಎಲ್.ಕಾಲೇಜಿನ ಕಾನೂನು ವಿದ್ಯಾರ್ಥಿಗಳಿಂದ ಕಾನೂನು ಅರಿವು ನೆರವು ಬೀದಿ ನಾಟಕ ಕಾರ್ಯಕ್ರಮ ಆಯೋಜಿಸಲಾಗಿದೆ.

ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷೆ ವೇಲಾ.ಡಿ.ಕೆ ಉದ್ಘಾಟಿಸುವರು. ಆರ್..ಎಲ್.ಕಾನೂನು ಕಾಲೇಜು ಪ್ರಾಂಶುಪಾಲ ಬಿ.ಪಿ.ಬಸನಗೌಡ ಅಧ್ಯಕ್ಷತೆ ವಹಿಸುವರು. ಮಖ್ಯ ಅತಿಥಿಗಳಾಗಿ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಮಹಾವೀರ ಮ ಕರೆಣ್ಣವರ, ಆರ್.ಎಲ್.ಕಾನೂನು ಕಾಲೇಜಿನ ನಿವೃತ್ತ ಪ್ರಾಂಶುಪಾಲರು ಹಾಗೂ ನಿರ್ದೇಶಕ ಡಾ.ಎಂ.ಸೋಮಶೇಖರಪ್ಪ ಭಾಗವಹಿಸುವರು.

Leave a Reply