ಮಂಗಳೂರು: ಭಾರತದ ನಂ.1 ಫರ್ನಿಚರ್ ಬ್ರಾಂಡ್ ಆಗಿರುವ ರಾಯಲ್ಓಕ್ ಫರ್ನಿಚರ್ ಸಂಸ್ಥೆಯು ಮಂಗಳೂರಿನ ಮ್ಯಾಕ್ ಮಾಲ್ನಲ್ಲಿ ಹೊಸ ಮಳಿಗೆಯನ್ನು ಉದ್ಘಾಟಿಸಿದೆ.
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
ಈ ಮಳಿಗೆಯು ದೇಶದ 179ನೇ ಹಾಗೂ ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಯಲ್ಓಕ್ ನ 59ನೇ ಮಳಿಗೆಯಾಗಿದೆ.
ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮ್ಯಾಕ್ ಇನ್ಫ್ರಾರಿಯಲ್ಟಿ ಪೈ. ಲಿ.ನ ಎಂ.ಡಿ. ಮೊಹಮ್ಮದ್ ಅರಬಿ ಕೆ. ಮಾತಾಡಿ, ಮಂಗಳೂರಿನ ಜನರಿಗೆ ದೊಡ್ಡದಾದ ಶೋರೂಮ್ ನಲ್ಲಿ ಮನೆಗೆ ಬೇಕಾಗುವ ನವನವೀನ ಶೈಲಿಯ ಫರ್ನಿಚರ್ ಗಳನ್ನು ಒಂದೇ ಸೂರಿನಡಿ ಖರೀದಿ ಮಾಡಲು ಅವಕಾಶ ಇಲ್ಲಿದೆ. ಮ್ಯಾಕ್ ಮಾಲ್ ನಲ್ಲಿ ಹೋಮ್ ಡೆಕೋರ್ ಮತ್ತು ಫರ್ನಿಚರ್ ಕಲೆಕ್ಷನ್ ಒಳಗೊಂಡಿದೆ ಎಂದರು.

ರಾಯಲ್ ಓಕ್ ಇನ್ ಕಾರ್ಪೊರೇಷನ್ ಪ್ರೈ.ಲಿ.ನ ಚೇರ್ ಮನ್ ವಿಜಯ್ ಸುಬ್ರಮಣಿಯಂ ಮಾತನಾಡಿ, ಕರ್ನಾಟಕದಲ್ಲಿ ಮತ್ತೊಂದು ಮಳಿಗೆ ಉದ್ಘಾಟನೆಗೊಂಡಿರುವುದು ನಮಗೆ ಹರ್ಷ ತಂದಿದೆ. ಕರ್ನಾಟಕದಲ್ಲಿ ನಾವು ಈಗ ಸುಮಾರು 60 ಮಳಿಗೆಗಳ ಬಲವಾದ ಜಾಲವನ್ನು ಹೊಂದಿದ್ದೇವೆ. ಈ ಮಳಿಗೆಯಲ್ಲಿ ಮಂಗಳೂರಿನ ಜನ ಅಂತರರಾಷ್ಟ್ರೀಯ ಉತ್ಪನ್ನಗಳನ್ನು ಕೈಗೆಟುಕುವ ಬೆಲೆಯಲ್ಲಿ ತಮ್ಮದಾಗಿಸಿಕೊಳ್ಳುತ್ತಾರೆ ಎಂದು ಭಾವಿಸುತ್ತೇವೆ ಮತ್ತು ಇಲ್ಲಿನ ಗ್ರಾಹಕರನ್ನು ಎದುರುಗೊಳ್ಳಲು ಉತ್ಸುಕರಾಗಿದ್ದೇವೆ ಎಂದರು.
ನವೀನ್ ಮಾತಾಡಿ, ಇಡೀ ದೇಶದಲ್ಲಿ ಪ್ರಥಮ ಬಾರಿಗೆ ಮಾಲ್ ನಲ್ಲಿ ಪ್ರಥಮ ಶೋರೂಮ್ ಆಗಿ ರಾಯಲ್ ಓಕ್ ಅನ್ನು ಇಲ್ಲಿ ಆರಂಭಸಲಾಗಿದೆ. ಆರಂಭದ ಹಿನ್ನೆಲೆಯಲ್ಲಿ ಇಲ್ಲಿ ಅತ್ಯಾಕರ್ಷಕ ಆಫ಼ರ್ ಗಳನ್ನು ನೀಡಲಾಗುತ್ತದೆ. ಮಂಗಳೂರಿನ ಜನರು ಇಲ್ಲಿಗೆ ಬಂದು ಪ್ರಯೋಜನ ಪಡೆದುಕೊಳ್ಳಿ ಎಂದು ಕರೆ ನೀಡಿದರು.
ಉದ್ಘಾಟನಾ ಕೊಡುಗೆಯಾಗಿ ಈ ಮಳಿಗೆಯಲ್ಲಿ ವಿವಿಧ ಶಾಪಿಂಗ್ ಗಳ ಮೇಲೆ 14,990 ರೂ. ಮೌಲ್ಯದ ಉಚಿತ ರಿಕ್ಲೈನರ್ ಗಳನ್ನು ಮತ್ತು 3,000 ರಿಂದ 7,000 ರೂ.ವರೆಗಿನ ಉತ್ಪನ್ನಗಳನ್ನು ಉಚಿತವಾಗಿ ನೀಡಲಾಗುತ್ತಿದೆ.
ಈ ಮಳಿಗೆಯಲ್ಲಿ ವಿಶೇಷವಾದ ‘ಕಂಟ್ರಿ ಸ್ಕೋರ್’ ವಿಭಾಗವಿದ್ದು, ಇಲ್ಲಿ ಅಮೆರಿಕಾ, ಇಟಲಿ, ಮಲೇಷಿಯಾ ಮತ್ತು ಭಾರತದ ಉತ್ತಮ ಮತ್ತು ಅನನ್ಯ ಫರ್ನಿಚರ್ ಗಳನ್ನು ಪ್ರದರ್ಶಿಸಲಾತ್ತದೆ. ರಾಯಲ್ಓಕ್ ಭಾರತದಾದ್ಯಂತ ಇರುವ ಎಲ್ಲಾ ಮಹಾ ನಗರಗಳು ಮತ್ತು 2ನೇ 2 ಮತ್ತು 3ನೇ ಶ್ರೇಣಿಯ ನಗರಗಳಲ್ಲಿ ಉಪಸ್ಥಿತಿ ಹೊಂದಿದೆ.
ರಾಯಲ್ಓಕ್ ನ ಫ್ರಾಂಚೈಸ್ ಹೆಡ್ ಕಿರಣ್ ಛಾಬ್ರಿಯಾ, ರಾಯಲ್ ಓಕ್ ನ ವಿಎಂ & ಎನ್ ಎಸ್ ಓ ಹೆಡ್ ತಮ್ಮಯ್ಯ ಕೊಟೇರ ಮತ್ತು ರಾಯಲ್ ಓಕ್ ನ ಫ್ರಾಂಚೈಸ್ ಆಪರೇಷನ್ ಮ್ಯಾನೇಜರ್ ಮಹೇಶ್ ಪಂಡಿತ್ ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.




