ಕಳತಾವೂರ್ ಮಳಾವ್ -03, ಸಜ್ಜನರ ಸಲ್ಲಾಪ -03, ಮೀನಾರೋ ಪಾಮಣೋ-ತಿಂಗಳ ಅತಿಥಿ ಸಮಾರಂಭ

1 year ago

ಬೆಂಗಳೂರು: ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ವತಿಯಿಂದ ದಿನಾಂಕ: 23.12.2024ರಂದು ಸಂಜೆ 05.00ಗಂಟೆಗೆ ಮಹಿಳಾ ವಿಶ್ರಾಂತಿ ಕೊಠಡಿ, ರವೀಂದ್ರ ಕಲಾಕ್ಷೇತ್ರ, ಬೆಂಗಳೂರು ಇಲ್ಲಿ ಕಳತಾವೂರ್ ಮಳಾವ್ -03, ಸಜ್ಜನರ ಸಲ್ಲಾಪ -03, ಮೀನಾರೋ ಪಾಮಣೋ-ತಿಂಗಳ ಅತಿಥಿ ಸಮಾರಂಭವನ್ನು ಏರ್ಪಡಿಸಲಾಗಿದೆ.

ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷ ಡಾ. ಎ. ಆರ್. ಗೋವಿಂದಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.  ಡಾ.ಬಿ.ಟಿ ಲಲಿತಾನಾಯಕ, ಹಿರಿಯ ಸಾಹಿತಿ, ಚಿಂತಕರು ಹಾಗೂ ಮಾಜಿ ಮಂತ್ರಿಗಳು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಗೌರವಾರ್ಪಣೆ ಮತ್ತುತಿಂಗಳ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.  ಮುಖ್ಯ ಅತಿಥಿಯಾಗಿ ದಿನೇಶ್‌ ಅಮಿನ್‌ ಮಟ್ಟು, ಹಿರಿಯ ಸಾಂಸ್ಕೃತಿಕ ಚಿಂತಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಸುವರ್ಣ ಮಹೋತ್ಸವ ಪ್ರಶಸ್ತಿ  ಪುರಸ್ಕೃತರಾದ ಸುರೇಶ್ ಠಾಕೆರಪ್ಪ, ಲಮಾಣಿ (ಜಾನಪದ), ಗದಗ, ತಂಬೂರಿ ಉಮನಾಯಕ್ (ಜಾನಪದ), ದಾವಣಗೆರೆ, ರುಕ್ಮೀಣಿ ಬಾಯಿ (ಚಿತ್ರಕಲೆ), ಕೊಪ್ಪಳ ಇವರಿಗೆ ಗೌರವಾರ್ಪಣೆ ನಡೆಯಲಿದೆ. ಪಂಡಿತ್ ಎಂ.ಎಸ್. ಪ್ರದೀಪ್ ಕುಮಾರ್ ಮತ್ತು ತಂಡದವರಿಂದ ಸಿತಾರ್ ವಾದನ ಸಂಜೆ  5.00 ಕ್ಕೆ ನಡೆಯಲಿದೆ.

Leave a Reply