ರಾಜ್ಯಮಟ್ಟದ ಮುಳ್ಳೂರು ನಾಗರಾಜ ಕಾವ್ಯ ಪ್ರಶಸ್ತಿಗೆ ಕೃತಿಗಳ ಆಹ್ವಾನ

1 year ago

ಚಾಮರಾಜನಗರ: ನಗರದ ಪ್ರತಿಷ್ಠಿತ ರಂಗವಾಹಿನಿ ಸಂಸ್ಥೆಯ ವತಿಯಿಂದ 13ನೇ ವರ್ಷದ ಮುಳ್ಳೂರು ನಾಗರಾಜ ರಾಜ್ಯಮಟ್ಟದ ಕಾವ್ಯ ಪ್ರಶಸ್ತಿಗೆ ಕವನ ಸಂಕಲಗಳನ್ನು ಆಹ್ವಾನಿಸಲಾಗಿದೆ.

ಕವನ ಸಂಕಲನ 2024ರಲ್ಲಿ ಪ್ರಕಟಗೊಂಡಿರಬೇಕು. ಪ್ರಶಸ್ತಿಯು 10,000  ರೂಪಾಯಿ ( ಹತ್ತು ಸಾವಿರ) ನಗದು, ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ. ಪ್ರಶಸ್ತಿಯ ಆಯ್ಕೆ ಸಮಿತಿಯ ತೀರ್ಮಾನವೇ ಅಂತಿಮವಾಗಿರುತ್ತದೆ. 2025 ಏಪ್ರಿಲ್ ತಿಂಗಳ ಮೊದಲನೇ ವಾರ ಪ್ರಶಸ್ತಿ ಪ್ರದಾನ ಸಮಾರಂಭ ಮೈಸೂರಿನಲ್ಲಿ ನಡೆಯಲಿದೆ.

ಆಸಕ್ತರು ತಮ್ಮ ಭಾವಚಿತ್ರ ಮತ್ತು ಕಿರು ಪರಿಚಯದೊಂದಿಗೆ ಕವನ ಸಂಕಲನದ 4 ಪ್ರತಿಗಳನ್ನು ಸಿ.ಎಂ. ನರಸಿಂಹಮೂರ್ತಿ ಅಧ್ಯಕ್ಷರು, ರಂಗವಾಹಿನಿ(ರಿ) ಜಯದೇಗುಲ, 10ನೇ ಕ್ರಾಸ್, ಕೋರ್ಟ್ ಎದುರು, ಚಾಮರಾಜನಗರ – 571313 ಈ ವಿಳಾಸಕ್ಕೆ ಫೆಬ್ರವರಿ 26 ಒಳಗಾಗಿ ಸಲ್ಲಿಸಬೇಕೆಂದು ಪ್ರಕಟಣೆ ತಿಳಿಸಿದೆ

ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ : 9916115263  ಸಂಪರ್ಕಿಸಬಹುದು.

Leave a Reply