ಬೆಂಗಳೂರು ನಗರದಲ್ಲಿ ಹಲವಾರು ಪ್ರದೇಶಗಳಲ್ಲಿ ಮಧ್ಯರಾತ್ರಿ ಎರಡು ಗಂಟೆಯಿಂದ ಐದು ಗಂಟೆಯ ಸಮಯದ ಹೋಟೆಲ್ ಗಳಲ್ಲಿ ತಿಂಡಿ ತಿನ್ನಲು ಹೋಗುವಂತಹ ಸಂದರ್ಭಗಳಲ್ಲಿ ಹಲವಾರು ಅಪಘಾತಗಳು ಮೇಲಿಂದ ಮೇಲೆ ಸಂಭವಿಸುತ್ತ ಹಲವರು ಜೀವಗಳು ಕಳೆದುಕೊಳ್ಳುವ ಸಂಗತಿಗಳು ಪೋಷಕರನ್ನು ಹೆತ್ತವರನ್ನು ದುಃಖದ ದಿನಗಳಿಗೆ ಕೊಂಡೊಯ್ಯುತ್ತಿದೆ.
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
ಇತ್ತೀಚಿನ ವರ್ಷಗಳಲ್ಲಿ ಮಧ್ಯರಾತ್ರಿ ತಿಂಡಿ ಹೋಟೆಲ್ ಗಳು ಆರಂಭವಾಗಿ ಇಲ್ಲಿ ದೊರೆಯುವ ಕೆಲವು ವಿಶೇಷ ತಿಂಡಿಗಳು ಮತ್ತು ಇತರೆ ರುಚಿರುಚಿಯಾದ ಪದಾರ್ಥಗಳು ತಡವಾಗಿ ಹೋದರೆ ದೊರೆಯುವುದಿಲ್ಲ ಎನ್ನುವ ಕಾರಣಕ್ಕೆ ಬೆಂಗಳೂರಿನ ಹೊರವಲಯದಲ್ಲಿ ಮತ್ತು ಕೆಲವು ಪ್ರಮುಖ ಸ್ಥಳಗಳಲ್ಲಿ ಇರುವ ಇಂತಹ ಹೋಟೆಲ್ ಗಳಿಗಾಗಿ ವಿಶೇಷವಾಗಿ ಯುವಜನರು ವಾಹನಗಳಲ್ಲಿ ಮಿತಿಮೀರಿದ ವೇಗದಲ್ಲಿ ಚಲಿಸುತ್ತಾ ಅಪಘಾತಗಳನ್ನ ಮಾಡಿ ತಮ್ಮ ಪ್ರಾಣಗಳನ್ನು ಕಳೆದುಕೊಳ್ಳುವುದರ ಜೊತೆಗೆ ಹೆತ್ತವರನ್ನು ಕಣ್ಣೀರಿನ ಸಾಗರದಲ್ಲಿ ಮುಳುಗಿಸುತ್ತಿದ್ದಾರೆ. ಇದರ ಜೊತೆಗೆ ಕೆಲವೊಮ್ಮೆ ಅಮಾಯಕ ಜನರು ಇವರ ತಪ್ಪಿನ ಕಾರಣಗಳಿಗೆ ತಮ್ಮ ಪ್ರಾಣಗಳನ್ನು ಕಳೆದುಕೊಳ್ಳುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಮಾನ್ಯ ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರು ಸಚಿವರು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆಯನ್ನ ನಡೆಸಿ ಮಧ್ಯರಾತ್ರಿ ಎರಡು ಗಂಟೆಯಿಂದ ಐದು ಗಂಟೆ ಅವಧಿಯಲ್ಲಿ ವ್ಯಾಪಾರ ಮಾಡುತ್ತಿರುವ ಇಂತಹ ರಸ್ತೆ ಬದಿಯ ಹೋಟೆಲ್ ಗಳನ್ನು ಮತ್ತು ಇತರೆ ಹೋಟೆಲ್ ಗಳನ್ನು ಮುಚ್ಚಿಸಿ ಅಪಘಾತಗಳು ಆಗುವುದನ್ನು ತಡೆಗಟ್ಟಬೇಕು.
ಪ್ರತಿಯೊಂದು ವಿಚಾರಕ್ಕೂ ನಮ್ಮ ಪ್ರಕೃತಿಯಲ್ಲಿ ಅದರ ಒಂದು ನಿಯಮವಿದೆ. ಊಟ ಮಾಡಲು ಮತ್ತು ತಿಂಡಿ ತಿನ್ನಲು ಒಂದು ಸಮಯವೂ ಇರುತ್ತದೆ. ಈ ರೀತಿಯಲ್ಲಿ ಮಧ್ಯರಾತ್ರಿಯಲ್ಲಿ ಊಟವನ್ನು ಮಾಡುವುದು ಮತ್ತು ತಿಂಡಿಯನ್ನು ತಿನ್ನುವುದು ಇವರ ದೇಹಗಳ ಮೇಲೂ ಸಹ ಕೆಟ್ಟ ಪರಿಣಾಮ ಬೀರುತ್ತದೆ. ಹಲವಾರು ರೀತಿಯ ಆರೋಗ್ಯದ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇದಕ್ಕಿಂತ ಮಿಗಿಲಾಗಿ ಇವರು ತಿನ್ನುವ ಅವಸರದಲ್ಲಿ ವೇಗವಾಗಿ ವಾಹನಗಳನ್ನು ಓಡಿಸಿ ಸಾಕಷ್ಟು ಜನರಿಗೆ ತೊಂದರೆಯನ್ನು ಉಂಟುಮಾಡುತ್ತಿರುವುದರಿಂದ ಈ ನಿಟ್ಟಿನಲ್ಲಿ ಸೂಕ್ತವಾದಂತಹ ನಿರ್ಧಾರವನ್ನು ಕೈಗೊಳ್ಳಬೇಕೆಂದು ನೊಂದ ಪೋಷಕರ ಮತ್ತು ಸಾರ್ವಜನಿಕರ ಪರವಾಗಿ ಮುಖ್ಯಮಂತ್ರಿಗಳಲ್ಲಿ ಮತ್ತು ಗೃಹ ಸಚಿವರಲ್ಲಿ ಕೋರಿಕೊಳ್ಳುತ್ತೇನೆ.
– ಕೆ ಎಸ್ ನಾಗರಾಜ್, ಬೆಂಗಳೂರು




