ಕಾಡುಮಲ್ಲಿಕಾರ್ಜುನ ಸ್ವಾಮಿಯ ಬ್ರಹ್ಮರಥೋತ್ಸವ

2 years ago

ಲಕ್ಷಾಂತರ ಭಕ್ತರು ಭಾಗಿ

ಬೆಂಗಳೂರು: ಮಲ್ಲೇಶ್ವರಂನ ಶ್ರೀ ಭ್ರಮರಾಂಭ ಸಮೇತ ಶ್ರೀ ಕಾಡುಮಲ್ಲೇಶ್ವರ ಸ್ವಾಮಿ ದೇವಸ್ಥಾನ ಮತ್ತು ಕಾಡುಮಲ್ಲೇಶ್ವರ ಗೆಳಯರ ಬಳಗ ಸಹಯೋಗ ಕಾಡುಮಲ್ಲಿಕಾರ್ಜುನ ಸ್ವಾಮಿ ಬ್ರಹ್ಮರಥೋತ್ಸವ ಸಮಾರಂಭ ನಡೆಯಿತು.

ರಥಗಳಿಗೆ ಶಾಸ್ತ್ರಬದ್ದವಾಗಿ ಕಳಸಪೂಜೆ ಪೂಜೆ ಮಾಡಿ, ಹೋಮಹವನ ನೇರವೆರಿಸಿ, ಭಕ್ತರಿಂದ ಹಗ್ಗ ಕಟ್ಟಿ ರಥ ಎಳೆಯಲು ಚಾಲನೆ ನೀಡಲಾಯಿತು.

ಶ್ರೀ ಕಾಡುಮಲ್ಲಿಕಾರ್ಜುನ ಮತ್ತು ಗಣೇಶ, ಸುಬ್ರಮಣ್ಯ ದೇವರುಗಳನ್ನು ಮೂರು ರಥಗಳಲ್ಲಿ ಭವ್ಯ ಮೆರವಣಿಗೆಯಲ್ಲಿ ಮಲ್ಲೇಶ್ವರಂ ರಾಜ ಬೀದಿಗಳಲ್ಲಿ ಮೆರವಣಿಗೆ ಸಾಗಿತು.

ಬಂದ ಭಕ್ತರಿಗೆ ಪುಳಿಯೋಗರೆ, ಪಲಾವ್ ಮತ್ತು ಕೊಸಂಬರಿ, ಪಾನಕ, ಮಜ್ಜಿಗೆ ವಿತರಿಸಲಾಯಿತು.

ಭಕ್ತರ ಸಂಕಷ್ಟಗಳ ನಿವಾರಣೆಗಾಗಿ ಮೆಣಸು, ಉಪ್ಪು ರಥಕ್ಕೆ ಸಮರ್ಪಣೆ ಮಾಡಿದರು, ರಥಕ್ಕೆ ಎಲಕ್ಕಿ ಬಾಳೆಹಣ್ಣು, ಧವನವನ್ನು ಎರಚುವ ಮೂಲಕ ಇಷ್ಟಾರ್ಥ, ಬಯಕೆಗಳನ್ನು ಈಡೇರಿಸುವಂತೆ ಪ್ರಾರ್ಥಿಸಿದರು.

ಬ್ರಹ್ಮರಥೋತ್ಸವದಲ್ಲಿ ಕಂಸಾಳೆ, ವೀರಗಾಸೆ, ಪಟ ಕುಣಿತ, ಡೊಳ್ಳು ಮತ್ತು ತಮಟೆ ವಾದ್ಯ ನೂರಕ್ಕೂ ಹೆಚ್ಚು ಕಲಾತಂಡಗಳು, ಸಾವಿರಾರು ಕಲಾವಿದರುಗಳು ಮೆರವಣಿಗೆ ಕಲಾ ಪ್ರದರ್ಶನ ನೀಡಿದರು.

ಕಾಡು ಮಲ್ಲೇಶ್ವರ ಗೆಳಯರ ಬಳಗ ಅಧ್ಯಕ್ಷರಾದ ಬಿ.ಕೆ.ಶಿವರಾಂರವರು ಮಾತನಾಡಿ ಕಳೆದ 16 ವರ್ಷಗಳಿಂದ ಬ್ರಹ್ಮರಥೋತ್ಸವ ಅದ್ದೂರಿಯಾಗಿ ನಡೆದುಕೊಂಡು ಬರಲಾಗುತ್ತಿದೆ.

ಭಕ್ತರ ಸಂಖ್ಯೆ ದಿನದಿಂದ ಹೆಚ್ಚಾಗುತ್ತಿದೆ. ಕಾಡುಲ್ಲಿಕಾರ್ಜುನ ದೇವರು ದರ್ಶನ ಪಡೆದ ಭಕ್ತರಿಗೆ ಇಲ್ಲಿಗೆ ಬಂದ ಮೇಲೆ ಮನಸ್ಸಿಗೆ ನೆಮ್ಮದಿ ಮತ್ತು ಕುಟುಂಬ ಶ್ರೇಯೋಭಿವೃದ್ದಿಯಾಗುತ್ತಿದೆ ಎಂದು ಲಕ್ಷಾಂತರ ಭಕ್ತರು ಹೇಳುತ್ತಾರೆ.

ಶ್ರೀ ಕಾಡುಮಲ್ಲಿಕಾರ್ಜುನ ಬ್ರಹ್ಮರಥೋತ್ಸವದಲ್ಲಿ ಲಕ್ಷಾಂತರ ಭಕ್ತರು ದೇವರ ದರ್ಶನ ಪಡೆದು ರಥವನ್ನು ಏಳೆಯುವ ಮೂಲಕ ಭಕ್ತಿಭಾವ ಮೆರೆದರು.

ಶಿವ, ಗಣೇಶ ಸುಬ್ರಮಣ್ಯ ದೇವರುಗಳಿಗೆ ಅದ್ದೂರಿಯಾಗಿ ಅಲಂಕರಿಸಿ ರಥೋತ್ಸವ ಮೂಲಕ ಶಿವರಾತ್ರಿಯ ಎರಡು ದಿನ ಸಮಾರಂಭ ಮುಕ್ತಾಯಗೊಳ್ಳಲಿದೆ. 

Leave a Reply