ಬೆಂಗಳೂರು: ಕರ್ನಾಟಕ ಪ್ರದೇಶ ಬಂಜಾರ (ಲಂಬಾಣಿ) ಸೇವಾ ಸಂಘದ ಪದಾಧಿಕಾರಿಗಳಿಂದ ನಗರಸಭೆ ಅಧ್ಯಕ್ಷ ಕೆ ಶೇಷಾದ್ರಿ ಅವರಿಗೆ ಸಂಘದ ಸಲಹೆಗಾರ ಹೆಚ್ ಬಿ ಸಿದ್ಯಾನಾಯ್ಕ, ಕಾರ್ಯಾಧ್ಯಕ್ಷ ಹಾಗೂ ಮಾಜಿ ಅಧ್ಯಕ್ಷ ಡಾ. ಎಂ ಆರ್ ಗೋವಿಂದ ಸ್ವಾಮಿ, ಧನಂಜಯ್ ನಾಯ್ಕ್ ಉಪಾಧ್ಯಕ್ಷ, ಕೃಷ್ಣ ನಾಯ್ಕ, ಪ್ರಧಾನ ಕಾರ್ಯದರ್ಶಿ ಕೃಷ್ಣ ನಾಯ್ಕ, ಶಂಕರ್ ನಾಯ್ಕ್, ಪ್ರಕಾಶ್ ನಾಯ್ಕ್ ಇವರುಗಳು ರಾಮನಗರ ನಗರ ಜಿಲ್ಲೆ ಬೇಡ ಬಂಜಾರರಿಗೆ ವಿವಿಧ ಸವಲತ್ತುಗಳನ್ನು ಕೋರಿ ಮನವಿ ಸಲ್ಲಿಸಿದರು.
- ಪ್ರೊ. ಬರಗೂರು ಅವರ ದಿಟ್ಟ ಹೆಜ್ಜೆ – 25 ವರ್ಷಗಳ ಸಾರ್ಥಕ ಯಾನ!
- ಸಂಪುಟದಿಂದ ಹೊರಗಿಟ್ಟಿರುವುದು ನನಗೆ ಸಿಕ್ಕ ಪ್ರತಿಫಲವೇ?: ಬಿ ಆರ್ ಪಾಟೀಲ್
- ಸಂಪುಟದಲ್ಲಿ ಭ್ರಷ್ಟಾಚಾರಿಗಳು, ಪೇಮೆಂಟ್ ಕೋಟಾ ಮೂಲಕ ಅವಕಾಶ ಗಿಟ್ಟಿಸಿಕೊಂಡವರು ಇದ್ದಾರೆ: ಆರ್.ಅಶೋಕ
- ಬಿಜೆಪಿ ನಾಯಕರು ಸಂವಿಧಾನ ಓದಿದನ ನಂತರ ಕಾಂಗ್ರೆಸ್ ಲೆಟರ್ಹೆಡ್ ಓದಲಿ: ಬಿ.ಕೆ.ಹರಿಪ್ರಸಾದ್
- ನೀರು ಸತ್ಯಾಗ್ರಹ ಕೃತಕ ಬುದ್ಧಿಮತ್ತೆ ಮತ್ತು ಕೃಷಿ ಕುರಿತು ಗಂಭೀರ ಚರ್ಚೆ
ಬೇಡಿಕೆಗಳು
೧. ರಾಮನಗರದ ಸ್ವಾತಂತ್ರ್ಯ ಹೋರಾಟಗಾರರು, ಸಾಹಿತಿಗಳು, ಪ್ರಧಾನಿಗಳು, ಕೆಂಗಲ್ ಹನುಮಂತಯ್ಯ, ಮುಖ್ಯಮಂತ್ರಿಗಳನ್ನು ಒಳಗೊಂಡಂತೆ ಥೀಮ್ ಪಾರ್ಕ್ ಮಾಡುವುದು.
೨. ನಗರದಲ್ಲಿ ಬಂಜಾರ ಭವನಕ್ಕೆ ನಿವೇಶನ ಮತ್ತು ಸಾಂಸ್ಕೃತಿಕ ಮತ್ತು ಕೌಶಲ್ಯ ಅಭಿವೃದ್ಧಿ ಕೇಂದ್ರಕ್ಕೆ ನಿವೇಶನ ನೀಡುವುದು.
೩. ಪ್ರತಿ ವರ್ಷ ನಗರದಲ್ಲಿ ಸಂತ ಸೇವಾಲಾಲ್ ಜಯಂತಿ ಆಚರಣೆಗೆ ಧನ ಸಹಾಯ ಮತ್ತು ಅನುದಾನ ನಿಗದಿ ಮಾಡುವುದು.
೪. ಸಂಘದ ಕಛೇರಿಗೆ ನಿವೇಶನ ಮತ್ತು ತಾತ್ಕಾಲಿಕ ಬಾಡಿಗೆ ಕಟ್ಟಡ ಒದಗಿಸುವುದು
೫. ಬಡ ಬಂಜಾರರಿಗೆ ಉಚಿತ ನಿವೇಶನ ನೀಡುವುದು.
೬. ನಗರದ ಸುತ್ತಮುತ್ತ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವುದು.
೭. ಖಾಸಗಿ ಸಹಭಾಗಿತ್ವದಲ್ಲಿ ನಗರವನ್ನು ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳುವುದು.





