ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಪೊಲೀಸರ ಬಲೆಗೆ ಬಿದ್ದಿರುವ ಈ ಮಹಿಳೆ ಅಂತಿಂಥಾ ಮಹಿಳೆಯಲ್ಲ. ತನಗೆ ಸಿಎಂ ಸಿದ್ದರಾಮಯ್ಯ ಗೊತ್ತು, ಡಿಸಿಎಂ ಡಿ ಕೆ ಶಿವಕುಮಾರ್ ಆಪ್ತರು, ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಅತ್ಯಂತ ಆಪ್ತರು ಎಂದು ಶ್ರೀಮಂತ ಮಹಿಳೆಯರನ್ನು ನಂಬಿಸಿ ಕೋಟಿ, ಕೋಟಿ ರೂಪಾಯಿ ವಂಚಿಸಿದ್ದಾರೆ.
- ಕುಡಿಯುವ ನೀರು, ಉದ್ಯೋಗ ಸೃಷ್ಟಿ ಹಾಗೂ ಮೇವು ಸಂಗ್ರಹಣೆ ಕಡ್ಡಾಯ
- RSSಗೆ ಗಲಿಬಿಲಿಯಾದರೆ ಬಿಜೆಪಿ ಬುಸುಗುಡುತ್ತೆ: ಪ್ರಿಯಾಂಕ್ ಖರ್ಗೆ
- ಶ್ರೀರಾಮ ದೇಗುಲದಲಿ ಕಳ್ಳತನ, ಚಾನ್ಸೇ ಇಲ್ಲ!!!
- ದೇವರ ಮುಂದೆ ಎಲ್ಲರೂ ಸಮಾನರು: ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ
- ಯಡಿಯೂರಿನಲ್ಲಿ ಅ.ನ.ಕೃ ಕನ್ವೆನ್ಷನ್ ಸೆಂಟರ್, ಡಾ. ಪುನೀತ್ ರಾಜ್ಕುಮಾರ್ ಸಭಾಂಗಣ ಲೋಕಾರ್ಪಣೆ
ಕಿಟ್ಟಿ ಪಾರ್ಟಿಗಳ ಖಾಯಂ ಗಿರಾಕಿಯಾದ ಮಹಿಳೆಯ ಹೆಸರು ಸವಿತಾ. ತನಗೆ ಅನೇಕ ಪ್ರಭಾವಿಗಳ ಒಡನಾಟವಿದೆ ಎಂದು ಹೇಳುತ್ತಿದ್ದರು. ಅವರೊಂದಿಗೆ ತೆಗಿಸಿಕೊಂಡ ಫೊಟೋ ತೋರಿಸಿ ಶ್ರೀಮಂತ ಮಹಿಳೆಯರನ್ನು ಪರಿಚಯ ಮಾಡಿಕೊಳ್ಳುತ್ತಿದ್ದರು. ನಂತರ ತಾನೂ ಕಿಟ್ಟಿ ಪಾರ್ಟಿ ಆಯೋಜಿಸುವ ಮೂಲಕ ತನ್ನ ಸ್ನೇಹಿತೆಯರಿಗೆ ನಯವಾದ ಮಾತುಗಳಿಂದ ಹೂಡಿಕೆ ಮತ್ತು ಚಿನ್ನಾಭರಣದ ಆಸೆ ತೋರಿಸಿ ಕೋಟಿ ಕೋಟಿ ವಂಚನೆ ಮಾಡಿದ್ದಾರೆ.
ಈ ಕುರಿತಂತೆ ಸಲ್ಲಿಕೆಯಾದ ಹಲವು ದೂರುಗಳ ಹಿನ್ನೆಲೆಯಲ್ಲಿ ಈ ಮಹಿಳೆಯನ್ನು ಬಸವೇಶ್ವರನಗರ ಪೊಲೀಸರು ಬಂಧಿಸಿದ್ದಾರೆ. ಸುಮಾರು 20 ಮಹಿಳೆಯರಿಗೆ 30 ಕೋಟಿ ರೂ.ಗಿಂತಲೂ ಹೆಚ್ಚು ವಂಚನೆ ಮಾಡಿದ್ದ ಆರೋಪದಡಿ ಇವರನ್ನು ಬಂಧಿಸಲಾಗಿದೆ.
ಕಿಟ್ಟಿ ಪಾರ್ಟಿ ಹೆಸರಲ್ಲಿ ಶ್ರೀಮಂತ ಮಹಿಳೆಯರನ್ನು ಪರಿಚಯ ಮಾಡಿಕೊಂಡಿದ್ದ ಸವಿತಾ ತನಗೆ ಸಿಎಂ, ಡಿಸಿಎಂ, ಸಚಿವ ಎಂ ಬಿ ಪಾಟೀಲ್ ಪರಿಚಯವಿದ್ದಾರೆ ಎಂದು ನಂಬಿಕೆ ಹುಟ್ಟಿಸಿ ಅಧಿಕ ಲಾಭಾಂಶದ ನೆಪ ಮಾಡಿ ಹೂಡಿಕೆ ನೆಪದಲ್ಲಿ ಆರೋಪಿಯ ಹಣ ಪಡೆದುಕೊಳ್ಳುತ್ತಿದ್ದರು.
ಅಮೆರಿಕದಿಂದ ಕಡಿಮೆ ಬೆಲೆಗೆ ಚಿನ್ನ ತರಿಸಿಕೊಡುವುದಾಗಿ ವಂಚನೆ ಮಾಡಿದ್ದಾಳೆ. ಒಬ್ಬರಿಂದ ತಲಾ 50 ಲಕ್ಷದಿಂದ ಎರಡೂವರೆ ಕೋಟಿ ಹಣ ಪಡೆದು ವಾಪಸ್ ಹಣ ನೀಡದೇ ನೆಪ ಹೇಳಿ ತಪ್ಪಿಸಿಕೊಳ್ಳುತ್ತಿದ್ದಳು.
ಈ ಹಿಂದೆ ಗೋವಿಂದರಾಜನಗರ ಠಾಣೆಯಲ್ಲಿ ಈಕೆ ವಿರುದ್ಧ ವಂಚನೆ ಕೇಸ್ ದಾಖಲಾಗಿ ಬಂಧನವಾಗಿದ್ದರು. ಈ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿದ್ದ ಸವಿತಾ ಮತ್ತದೇ ಚಾಳಿ ಮುಂದುವರೆಸಿ ಬಸವೇಶ್ವರನಗರ ಪೊಲೀಸರ ಅತಿಥಿಯಾಗಿದ್ದಾರೆ.




