ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಿಂದ ಬಿ.ವೈ.ವಿಜಯೇಂದ್ರರಿಗೆ ಸನ್ಮಾನ
ಎಲ್ಲ ಸಮುದಾಯ ಅಭಿವೃದ್ದಿಗೆ ಧ್ವನಿಯಾಗಿ ಸೇವೆ ಸಲ್ಲಿಸಿದವರು ಬಿ.ಎಸ್.ಯಡಿಯೂರಪ್ಪ
ಬೆಂಗಳೂರು: ಪದ್ಮನಾಭನಗರದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಗಾಯಿತ್ರಿ ಭವನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭೇಟಿ ನೀಡಿದರು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎಸ್.ರಘುನಾಥ್, ಶಾಸಕ ಸಿ.ಕೆ.ರಾಮಮೂರ್ತಿ, ಹಿರಿಯ ಉಪಾಧ್ಯಕ್ಷ ಆರ್.ಲಕ್ಷ್ಮಿಕಾಂತ್, ಖಜಾಂಚಿ ಸುಬ್ಬನರಸಿಂಹ, ಮಾಜಿ ಅಧ್ಯಕ್ಷ ಎಂ.ಆರ್.ವಿ.ಪ್ರಸಾದ್, ಬಿಜೆಪಿ ಮುಖಂಡ ದತ್ತಾತ್ರಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಬಿ.ವೈ.ವಿಜಯೇಂದ್ರರವರನ್ನು ಸನ್ಮಾನಿಸಲಾಯಿತು.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಬಿ.ವೈ.ವಿಜಯೇಂದ್ರ ಮಾತನಾಡಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಲ್ಲಿ ಆನೇಕ ಹಿರಿಯರು ಪ್ರಾಮಾಣಿಕ ಸೇವೆಯಿಂದ ಸಮಾಜಕ್ಕೆ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ. ವಿಪ್ರರ ಅಭಿವೃದ್ದಿಗೆ 100 ಕೋಟಿ ದತ್ತನಿಧಿ ಸಂಗ್ರಹಕ್ಕೆ ಗುರಿ ತಲುಪುವ ವಿಶ್ವಾಸವಿದೆ ಎಂದರು.
ಗಂಡು ಮಕ್ಕಳು ಆಗಬೇಕು ಎಂದು ನನ್ನ ತಂದೆಯವರು ಮಂತ್ರಾಲಯ ಗುರುರಾಯರ ಪ್ರಾರ್ಥನೆಯಿಂದ ಬಿ.ವೈ.ರಾಘವೇಂದ್ರರವರ ಜನನವಾಯಿತು. ಬಿ.ಎಸ್.ಯಡಿಯೂರಪ್ಪರವರು ಆಡಳಿತದ ಅವಧಿಯಲ್ಲಿ 5 ಕೋಟಿ ಅನುದಾನ ನೀಡಿದ್ದರು. ಎಲ್ಲ ಸಮಾಜದ ಧ್ವನಿಯಾಗಿ ಅವರು ಸೇವೆ ಸಲ್ಲಿಸಿದ್ದರು ಎಂದರು.
ಕೇಂದ್ರ ಸರ್ಕಾರ ಜಾತಿ ಜನಗಣತಿ ತೀರ್ಮಾನ ಸ್ವಾಗತ ಮಾಡುತ್ತೇವೆ. ಕಾಂಗ್ರೆಸ್ ಪಕ್ಷ ಜಾತಿ, ಜಾತಿ ನಡುವೆ ವಿಷಬೀಜ ಬಿತ್ತುತ್ತಿದೆ. ರಾಜ್ಯ ಸರ್ಕಾರಗಳು ಜಾತಿಗಣತಿ ಮಾಡುವ ಅವಕಾಶವಿಲ್ಲ. ಕೇಂದ್ರ ಸರ್ಕಾರ ಮಾತ್ರ ಜಾತಿಗಣತಿ ಮಾಡಲು ಅವಕಾಶವಿದೆ ಎಂದರು.
ಬಿ.ಎಸ್.ಯಡಿಯೂರಪ್ಪರವರು ಬ್ರಾಹ್ಮಣ ಮಹಾಸಭಾದ ನಡುವೆ ಉತ್ತಮ ಅವಿನಾಭವ ಸಂಬಂಧವಿದೆ. ಬ್ರಾಹ್ಮಣ ಸಮಾಜದವರ ಆಶೀರ್ವಾದ ಸಹಕಾರವಿರಲಿ ಎಂದರು.
ಎಸ್.ರಘುನಾಥ್ ರವರು ಮಾತನಾಡಿ ಮಹಾಸಭಾಗೆ ಬಿ.ವೈ.ವಿಜಯೇಂದ್ರರವರು ಗಾಯಿತ್ರಿ ಭವನಕ್ಕೆ ಬಂದಿರುವುದು ಸಂತೋಷದಾಯಕ ಸುದ್ದಿಯಾಗಿದೆ. 30 ಗುಂಟೆ ಜಾಗದಲ್ಲಿ ಮಹಿಳಾ ಹಾಸ್ಟಲ್ ನಡೆಯುತ್ತಿದೆ. ಅಲ್ಲಿ ಇನ್ನು ಅಭಿವೃದ್ದಿ ಕೆಲಸವಾಗಬೇಕಾಗಿದೆ. ಅದಕ್ಕೆ ಸಹಕಾರ ನೀಡಬೇಕು ಮತ್ತು ವಿಪ್ರರ ಅಭಿವೃದ್ದಿಗೆ 100 ಕೋಟಿ ದತ್ತಿ ನಿಧಿ ಸಂಗ್ರಹಕ್ಕೆ ಯೋಜನೆ ರೂಪಿಸಲಾಗಿದೆ. ಐದು ವರ್ಷಗಳಲ್ಲಿ ಬ್ರಾಹ್ಮಣ ಶ್ರೇಯೋಭಿವೃದ್ದಿಗಾಗಿ ಶ್ರಮಿಸಲು ವಿಪ್ರ ಮುಖಂಡರು ಸಹಕಾರ ನೀಡಬೇಕು ಎಂದರು.
ರಾಜ್ಯ ಬಿಜೆಪಿಯಲ್ಲಿ ಬ್ರಾಹ್ಮಣ ಕಾರ್ಯಕರ್ತರು ಇದ್ದಾರೆ. ಅವರಿಗೆ ರಾಜಕೀಯ ಸ್ಥಾನಮಾನ ನೀಡಬೇಕು ಎಂದು ಮನವಿ ಸಲ್ಲಿಸಿದರು.
ಬೆಂಗಳೂರು ನಗರ ಜಿಲ್ಲಾ ಪ್ರತಿನಿಧಿಗಳಾದ ಎಸ್.ಎಸ್.ಪ್ರಸಾದ್, ಕೆ.ಎನ್.ರವಿಕುಮಾರ್, ದಿಲೀಪ್, ಸತೀಶ್ ಉರಾಳ್, ಪಿ.ಎಸ್.ಪ್ರಕಾಶ್, ರಾಜಶೇಖರ್ ಜಿ.ರಾವ್, ಶ್ರೀನಿವಾಸ್ ರಾಘವನ್ ಮೊದಲಾದವರು ಹಾಜರಿದ್ದರು.




