ಪದವಿಪೂರ್ವ, ಪದವಿ, ವಿಶ್ವವಿದ್ಯಾಲಯಗಳ ಕನ್ನಡ ಅಧ್ಯಾಪಕ ಹುದ್ದೆ ಆಕಾಂಕ್ಷಿಗಳಿಗೆ ತರಬೇತಿ

11 months ago

ಬೆಂಗಳೂರು: ಸರ್ಕಾರಿ ಕಿರಿಯ ಕಾಲೇಜು ಅಧ್ಯಾಪಕ (ಪದವಿ ಪೂರ್ವ ಕಾಲೇಜು),  ಪದವಿ ಕಾಲೇಜು ಸಹಾಯಕ ಪ್ರಾಧ್ಯಾಪಕ ಹಾಗೂ ವಿಶ್ವವಿದ್ಯಾಲಯಗಳ ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ಆಕಾಂಕ್ಷಿಗಳಿಗೆ ಕನ್ನಡ ಸಾಹಿತ್ಯ ವಿಷಯದ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಪ್ರಶ್ನೆ ಪತ್ರಿಕೆ ಆಧಾರಿತ ರೆಸಿಡೆನ್ಷಿಯಲ್ ತರಬೇತಿಯನ್ನು ಆಯೋಜಿಸಲಾಗಿದೆ. 

ನಾಡಿನ ಖ್ಯಾತ ಸಾಹಿತಿ, ಬಂಡಾಯ ಚಳುವಳಿಯ ಸಂಘಟಕ, ನಾಟಕಕಾರ, ನಿವೃತ್ತ ಪ್ರಾಧ್ಯಾಪಕ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ತರಗತಿಯನ್ನು ನಡೆಸುವಲ್ಲಿ ಅನುಭವಿಗಳಾಗಿರುವ ಪ್ರೊ.ರಾಜಪ್ಪ ದಳವಾಯಿಯವರು ಕನ್ನಡ ವಿಷಯದ ತರಗತಿಗಳನ್ನು ನಡೆಸಲಿದ್ದಾರೆ.

ಈಗಾಗಲೇ ತುಮಕೂರು, ಬೆಂಗಳೂರು, ಹಂಪಿ, ದೊಡ್ಡಬಳ್ಳಾಪುರ, ಗುಲಬರ್ಗಾ, ಬೆಳಗಾವಿ, ಕೋಲಾರ ಸೇರಿದಂತೆ ಅನೇಕ ಕಡೆ ಪದವಿಪೂರ್ವ ಮತ್ತು ಪದವಿ ತರಗತಿಗಳ ಉಪನ್ಯಾಸಕ ಮತ್ತು ಸಹಾಯಕ ಪ್ರಾಧ್ಯಾಪಕರ ಪರೀಕ್ಷೆ ಮತ್ತು ನೆಟ್ / ಜೆ ಆರ್ ಎಫ್ ತರಗತಿಗಳನ್ನು ನಡೆಸುವ ಮೂಲಕ ವಿದ್ಯಾರ್ಥಿ/ಆಕಾಂಕ್ಷಿಗಳಿಗೆ ನೆರವಾಗಿರುವ ಡಾ.ರಾಜಪ್ಪ ದಳವಾಯಿಯವರು ಇದೀಗ 1 ತಿಂಗಳ ಕಾಲ ವಸತಿಸಹಿತ ತರಗತಿಗಳ ತರಬೇತಿಯನ್ನು ನೀಡಲಿದ್ದಾರೆ.

ತರಬೇತಿ ವಸತಿ ಸಹಿತವಾಗಿರುವುದರಿಂದ 1 ತಿಂಗಳ ಕಾಲ ತರಬೇತಿ ನಡೆಯುವ ಸ್ಥಳದಲ್ಲೇ ವಾಸವಾಗಿರಬೇಕು. ತರಬೇತಿಯನ್ನು “ಆದಿಮ ಸಾಂಸ್ಕೃತಿಕ ಕೇಂದ್ರ, ಕೋಲಾರ”ದಲ್ಲಿ ನಡೆಸಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಈ ಕೆಳಗಿನ ಮೊಬೈಲ್ ನಂಬರ್ ಗೆ ಸಂಪರ್ಕಿಸಬಹುದು. ಮೊದಲು ಬಂದ 50 ಜನ ಆಸಕ್ತರಿಗೆ ಮಾತ್ರ ಅವಕಾಶವಿದೆ.

ಹೆಸರು: ಡಾ.ಶ್ರೀನಿವಾಸ ಎನ್

ಮೊಬೈಲ್: 8553552008

Leave a Reply