ಟ್ಯಾಂಕ್ ನೊಳಗೆ ಮುಳುಗಿ ಮೂವರು ಇಂಜಿನಿಯರ್ ಗಳು ಬಲಿ

2 years ago

ಬಳ್ಳಾರಿ: ನೀರಿನ ಟ್ಯಾಂಕ್ನೊಳಗೆ ಬಿದ್ದು ಬೆಂಗಳೂರಿನ ಒಬ್ಬ ಸೇರಿ ಮೂವರು ಇಂಜಿನಿಯರ್ಗಳು ಸಾವಿಗೀಡಾದ ಹೃದಯ ವಿದ್ರಾವಕಘಟನೆ ಜಿಂದಾಲ್ನ ಎಚ್ಎಸ್ಎಂ ಪ್ಲಾಂಟ್ನಲ್ಲಿ ನಿನ್ನೆ ರಾತ್ರಿ ನಡೆದಿದೆ. ಬೆಂಗಳೂರಿನ ಸುಶಾಂತ್(25), ಭುವನಹಳ್ಳಿಯ ಜಡೆಪ್ಪ(23), ಚೆನ್ನೈನ ಶಿವಮಹದೇವ(23) ಮೃತಪಟ್ಟವರು.

ಪೈಪ್ ಜೋಡಣೆ ಕೆಲಸ ಪರಿಶೀಲನೆ ಮಾಡುತ್ತಿದ್ದಾಗ ಬೃಹತ್ ಪೈಪ್ನಲ್ಲಿ ಇದ್ದಕ್ಕಿದ್ದಂತೆ ಬಂದ ನೀರಿನಲ್ಲಿ ಕೊಚ್ಚಿಹೋಗಿ ದೊಡ್ಡ ನೀರಿನ ಟ್ಯಾಂಕ್ನಲ್ಲಿ ಬಿದ್ದು ಮೃತಪಟ್ಟಿದ್ದಾರೆ. ಇದು ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳದೆ ಹೋದ ಪರಿಣಾಮವೇ, ಆಕಸ್ಮಿಕವೇ ಅಥವಾ ಇದರ ಹಿಂದೆ ಒಳಸಂಚು ಇದೆಯೇ ಎಂಬ ಬಗ್ಗೆಯೂ ತನಿಖೆ ಪೊಲೀಸರು ನಡೆಸಲಾಗುತ್ತಿದ್ದಾರೆ.

ಸಂಡೂರು ಡಿವೈಎಸ್ಪಿ ಪ್ರಸಾದ್ ಗೋಖಲೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ತನಿಖೆಗೆ ವಿಶೇಷ ಪೊಲೀಸ್ ತಂಡಗಳನ್ನು ರಚಿಸಿದ್ದಾರೆ.

Leave a Reply