ಮಂಗಳೂರು ಮೀನುಗಾರಿಕಾ ಬಂದರಿನ ಸ್ಥಿತಿ ದಯನೀಯವಾಗಿದೆ. ಜಿಲ್ಲೆಯ ಆರ್ಥಿಕತೆ, ಉದ್ಯೋಗ ರಂಗಕ್ಕೆ ದೊಡ್ಡ ಕೊಡುಗೆ ಕೊಡುವ ಮಂಗಳೂರು ಮೀನುಗಾರಿಕೆ ಬಂದರಿನ ದುಸ್ಥಿತಿ, ಮೀನುಗಾರರು ಎದುರಿಸುವ ಸಮಸ್ಯೆಗಳ ಕುರಿತು ಡಿಸೆಂಬರ್ 8 ರಂದು ಸಿಪಿಐಎಂ ಜಿಲ್ಲಾ ಸಮಿತಿಯು ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ಆಗ್ರಹಿಸಿ ಹಮ್ಮಿಕೊಂಡಿರುವ ಜಿಲ್ಲಾ ಮಟ್ಟದ ರ್ಯಾಲಿಯ ಬೇಡಿಕೆ ಪಟ್ಟಿಯಲ್ಲಿ ಸೇರ್ಪಡೆ ಮಾಡಿದ್ದೆವು. ಡಿಸೆಂಬರ್ 8 ರ್ಯಾಲಿಯ 20 ಬೇಡಿಕೆಗಳಲ್ಲಿ ಮಂಗಳೂರು ಮೀನುಗಾರಿಕಾ ಧಕ್ಕೆಯ ಸಮಗ್ರ ಅಭಿವೃದ್ದಿಯ ಬೇಡಿಕೆಯೂ ಒಂದು.
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
ಅಷ್ಟಕ್ಕೆ, ಪರ್ಸಿನ್, ಟ್ರಾಲ್ ಬೋಟ್ ಮಾಲಕರ ಸಂಘಗಳಿಗೆ ಸೇರಿದ ಪ್ರತಿನಿಧಿಗಳು ಪತ್ರಿಕಾಗೋಷ್ಟಿ ನಡೆಸಿ ಸಿಪಿಐಎಂ ನವರು ಮೀನುಗಾರರ ಸಮಸ್ಯೆಗಳ ಕುರಿತು ಮಾತಾಡಬಾರದು ಎಂದು ಫರ್ಮಾನು ಹೊರಡಿಸಿರುವುದು ನಿಜಕ್ಕೂ ಅಚ್ಚರಿ ತಂದಿದೆ. ನಾವು ಇವರಲ್ಲಿ ಬೆಂಬಲ ಕೇಳಿಯೂ ಇರಲಿಲ್ಲ. ಅದಲ್ಲದೆ, ಪತ್ರಿಕಾಗೋಷ್ಟಿ ನಡೆಸಿದ ವ್ಯಕ್ತಿಗಳು ತಮ್ಮನ್ನು ತಾವು ಇಡೀ ಸಮುದಾಯದ ಮುಖಂಡರು ಎಂಬಂತೆ ಬಿಂಬಿಸಿಕೊಂಡಿದ್ದಾರೆ. ಇವರಲ್ಲಿ ಬಹುತೇಕರು ರಾಜಕೀಯ ಪಕ್ಷಗಳ ಪ್ರತಿನಿಧಿಗಳೂ ಆಗಿದ್ದಾರೆ.
ಸಿಪಿಐಎಂ ವಿರುದ್ಧದ ಈ ಪತ್ರಿಕಾಗೋಷ್ಟಿಯನ್ನು ಬಹುತೇಕ ಪತ್ರಿಕೆಗಳು ಆದ್ಯತೆಯಲ್ಲಿ ಸುದ್ದಿ ಮಾಡಿವೆ. ಹಾಗೆಯೆ ಮೀನುಗಾರಿಕಾ ಬಂದರಿನ ದುಸ್ಥಿತಿಯ ಕುರಿತು, ಸಿಪಿಐಎಂ ಮುಂದಿಟ್ಟಿರುವ ಬೇಡಿಕೆಗಳ ಕುರಿತಾಗಿಯು ಸುದ್ದಿ ಮಾಡಬೇಕಾಗಿ ವಿನಂತಿಸುತ್ತಿದ್ದೇವೆ. ಮೀನುಗಾರರ ಗಂಭೀರ ಸಮಸ್ಯೆಗಳು, ಧಕ್ಕೆಯ ದುರವಸ್ಥೆಯ ಕುರಿತು ಧ್ವನಿ ಎತ್ತಬೇಕಾದ ಸಂಘ ಸಂಸ್ಥೆಗಳು ತರಾತುರಿಯಲ್ಲಿ ಎಚ್ಚೆತ್ತು ಸರಕಾರದ ಪರ ಮಾತಾಡಲು ಹೊರಟಿರುವುದು ಉಚಿತ ಅಲ್ಲ.
– ಮುನೀರ್ ಕಾಟಿಪಳ್ಳ




