ರಾಜ್ಯಮಟ್ಟದ ಬಂಜಾರ ಕಾವ್ಯ, ನಾಟಕ ಮತ್ತು ಸಾಹಿತ್ಯ ರಚನಾ ತರಬೇತಿ ಶಿಬಿರ

11 months ago

ಬೆಂಗಳೂರು: ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ವತಿಯಿಂದ ಹಾಗೂ ಸಾಹಿತ್ಯ ಸಂಸ್ಕೃತಿ ವೇದಿಕೆ (ನೋಂ.), ಬೆಂಗಳೂರು ಅವರ ಸಹಯೋಗದಲ್ಲಿ ರಾಜ್ಯಮಟ್ಟದ ಬಂಜಾರ ಕಾವ್ಯ, ನಾಟಕ ಮತ್ತು ಸಾಹಿತ್ಯ ರಚನಾ ತರಬೇತಿ ಶಿಬಿರ ಆಯೋಜಿಸಲಾಗಿದೆ.

ಶಿಬಿರವನ್ನು ರಾಮನಗರ ಜಿಲ್ಲೆಗೆ ಹೊಂದಿಕೊಂಡಿರುವ ಬೆಂಗಳೂರು ದಕ್ಷಿಣ ಭಾಗದಲ್ಲಿ ಏರ್ಪಡಿಸುತಿದ್ದು, ರಾಜ್ಯಾದ್ಯಂತ ಆಸಕ್ತ ಕಲಾವಿದರು ದಿನಾಂಕ:12.06.2025 ರ ಒಳಗಾಗಿ ಬಂಜಾರ ಅಕಾಡೆಮಿ ಕಚೇರಿಗೆ ನೊಂದಾಯಿಸಿಕೊಳ್ಳಲು ಅಥವಾ ಕಚೇರಿಗೆ ಖುದ್ದಾಗಿ ಅರ್ಚಿ ಸಲ್ಲಿಸಲು ಅಥವಾ ಅಂಚೆ, ಕೋರಿಯರ್‌ ಮೂಲಕ ಸ್ವವಿವರದೊಂದಿಗೆ ಹೆಸರನ್ನು ನೊಂದಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ.

ಸೂಚನೆ: ಶೇ.80% ಭಾಗ ಬಂಜಾರರು ಮತ್ತು ಶೇ.20% ಭಾಗ ಇತರರು ಭಾಗವಹಿಸಲು ಅವಕಾಶವಿದೆ.

ಸಂಪರ್ಕ ವಿಳಾಸ: ರಿಜಿಸ್ಟ್ರಾರ್, ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ, ಕನ್ನಡ ಭವನ, 1ನೇ ಮಹಡಿ, ಜೆ.ಸಿ ರಸ್ತೆ, ಬೆಂಗಳೂರು-560002 ಹೆಚ್ಚಿನ ಮಾಹಿತಿಗಾಗಿ   :  080-29917745 / ಸದಾಶಿವಯ್ಯ-9448029712

Leave a Reply