ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ಅಂತರ್ಜಾತಿ ವಿವಾಹ ಆಗಿದ್ದಕ್ಕೆ ಹೆತ್ತ ತಂದೆಯೇ ಮಗಳನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ.
- ಕಟ್ಟೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಸೇವೆ ಮನೆ ಬಾಗಿಲಿಗೆ ಮಾದರಿ ಕಾರ್ಯಕ್ರಮ
- ಕನ್ನಡ ಸಿನಿಮಾ: ಮುಳುಗುತ್ತಿರುವ ಟೈಟಾನಿಕ್
- RSS ಅನ್ನು ಪ್ರಶ್ನಿಸುವ ಯೋಗ್ಯತೆಯಿದೆಯೇ?: ಆರ್. ಅಶೋಕ್
- ಎಸ್ಐಆರ್ ಎನ್ಯೂಮರೇಷನ್ ಪ್ರಕ್ರಿಯೆ ಬಗ್ಗೆ ಗೊಂದಲ ನಿವಾರಣೆ ಅಗತ್ಯ: ಅಪ್ಸರ್ ಕೊಡ್ಲಿಪೇಟೆ
- ಮಾತಾಡದೇ ನನ್ನೊಳಗೇ ಉಳಿದ ವಿಷಯಗಳು ಹೀಗಿವೆ
ಜಾತಿ ಜಾತಿಗಳ ನಡುವೆ ಸಾಮರಸ್ಯ ತರಬೇಕು, ಸಮಾಜದಲ್ಲಿ ಸಮಾನತೆ ಮೂಡಬೇಕು ಎಂಬ ಉದ್ದೇಶದಿಂದ ಈ ನಾಡಿನಲ್ಲಿ ಎಷ್ಟೋ ಮಹನೀಯರು ಶ್ರಮಿಸಿದ್ದಾರೆ. ಸರ್ಕಾರಗಳೂ ಕೂಡಾ ಕಾಯ್ದೆ ಕಾನೂನುಗಳ ಜಾರಿಯ ಮೂಲಕ ಇಂತಹ ವಾತಾವರಣವನ್ನು ಸರಿಪಡಿಸಲು ಶ್ರಮಿಸಿವೆ.
ಹೀಗಿದ್ದರೂ ಸಹ ಜಾತಿ ಕಾರಣಕ್ಕಾಗಿ ನಿರ್ಮಾಣವಾಗಿರುವ ಶ್ರೇಷ್ಠತೆಯ ಮನಸ್ಥಿತಿಯನ್ನು ಹೋಗಲಾಡಿಸಲು ಸಾಧ್ಯವಾಗದೇ ಇರುವುದು ಅತ್ಯಂತ ಬೇಸರದ ಸಂಗತಿ.
ಆಚರಣೆ ಹಾಗೂ ಇನ್ನಿತರೆ ಸಮುದಾಯಿಕ ವ್ಯತ್ಯಾಸಗಳನ್ನು ಸಾಮರಸ್ಯದಿಂದ ನಿರ್ವಹಿಸುವ ಮನಸ್ಥಿತಿಯನ್ನು ಸರ್ಕಾರಗಳು ಕಲಿಸಲು ಸಾಧ್ಯವೇ.,?
ಇಂತಹ ಅಮಾನವೀಯತೆಯನ್ನು ಮೆರೆದ ವ್ಯಕ್ತಿಗೆ ಶಿಕ್ಷೆ ಆಗುವುದು ಖಚಿತ. ಆದರೆ ಪ್ರೀತಿಗಾಗಿ ಕಳೆದುಕೊಂಡ ಅಮೂಲ್ಯ ಜೀವ ಮರಳಿ ಬರುವುದಿಲ್ಲ ಎಂಬುದೇ ಈ ಹೊತ್ತಿನ ವಾಸ್ತವ.
– ಡಾ.ಎಚ್.ಸಿ.ಮಹದೇವಪ್ಪ, ಸಮಾಜ ಕಲ್ಯಾಣ ಸಚಿವ




