ಶಿವಮೊಗ್ಗ: ಶಿವಮೊಗ್ಗ ರಂಗಾಯಣ, ಸಮುದಾಯ ಹಾಗೂ ಕಡೆಕೊಪ್ಪಲು ಪತ್ರಿಷ್ಠಾನದ ಸಹಯೋಗದೊಂದಿಗೆ ಜ.20 ರಿಂದ 22 ವರೆಗೆ ಸಂಜೆ 6.30 ಕ್ಕೆ ಅಶೋಕನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ರಂಗ ಸಂಕ್ರಾಂತಿ 2025 ಶೀರ್ಷಿಕೆ ಅಡಿಯಲ್ಲಿ ನಾಟಕೋತ್ಸವವನ್ನು ಏರ್ಪಡಿಸಲಾಗಿದೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ನಾಟಕೋತ್ಸವವನ್ನು ಅಂಕಣಕಾರ ಬಿ.ಚಂದ್ರೇಗೌಡ ಉದ್ಘಾಟಿಸಲಿದ್ದು, ರಂಗಾಯಣ ನಿರ್ದೇಶಕ ಪ್ರಸನ್ನ ಡಿ ಸಾಗರ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಮುದಾಯದ ಕಾರ್ಯದರ್ಶಿ ಡಾ.ಕೆ.ಜಿ.ವೆಂಕಟೇಶ್, ಕಡೆಕೊಪ್ಪಲ ಪ್ರತಿಷ್ಠಾನದ ಮ್ಯಾನೆಜಂಗ್ ಟ್ರಸ್ಟಿ ಡಾ.ಕೆ.ಮಧುಸೂಧನ್ ಆಗಮಿಸಲಿದ್ದು, ರಂಗಾಯಣ ಅಡಳಿತಾಧಿಕಾರಿ ಡಾ.ಎ.ಸಿ.ಶೈಲಜಾ ಉಪಸ್ಥಿತರಿರುವರು.
ಜ.20 ರ ಸಂಜೆ 6.30ಕ್ಕೆ ಬೆಂಗಳೂರಿನ ಅನೇಕ ತಂಡದಿಂದ ‘ಅಂಗವಿಲ್ಲದ ದೇಹದಲ್ಲಿ ‘ಭಂಗೀಹುಳ’ ನಾಟಕ ನಡೆಯಲಿದ್ದು, ನಾಟಕದ ಮೂಲ ಕೆ.ಟಿ.ಗಟ್ಟಿ, ಮರುರಚನೆ ಹಾಗೂ ನಿರ್ದೇಶನ ಪರಿಕಲ್ಪನೆ ಸುರೇಶ ಆನಗಳ್ಳಿ, ಸಂಗೀತ ಭರತ್, ಸಹ ನಿರ್ದೇಶನ ಅಂಜನಾ.
ಜ.21 ರ ಸಂಜೆ 6.30ಕ್ಕೆ ನಿರ್ದಿಗಂತ ತಂಡದಿಂದ ‘ರಸೀದಿ ಟಿಕೇಟ್’ ನಾಟಕ ನಡೆಯಲಿದ್ದು, ನಾಟಕದ ಮೂಲ ಅಮೃತಾ ಪ್ರೀತಂ, ರಚನೆ ಸುಧಾ ಆಡುಕಳ, ಅಭಿಯನ ಶಾಲೋಮ್ ಸುನ್ನತ, ವಿನ್ಯಾಸ ಹಾಗೂ ನಿರ್ದೇಶನ ಡಾ.ಸವಿತಾರಾಣಿ, ಕಲೆ ಖಾಜುಗುತ್ತಲ, ಸಂಗೀತ ಮುನ್ನ ಮೈಸೂರು.
ಜ.22 ರ ಸಂಜೆ 6.30ಕ್ಕೆ ಮಣಿಪಾಲಿನ ಸಂಗಮ ಕಲಾವಿದರ ತಂಡದಿಂದ ನಿರಂಜನರ ಕಾದಂಬರಿಯ ರಂಗರೂಪ ‘ಮೃತ್ಯುಂಜಯ’ ನಾಟಕ ನಡೆಯಲಿದ್ದು, ರಂಗರೂಪ ಸಚಿನ್ ಅಂಕೋಲ, ನಿರ್ದೇಶನ ರೋಹಿತ್ ಎಸ್ ಬೈಕಾಡಿ ಮಾಡಿದ್ದಾರೆ. ಪ್ರತಿ ನಾಟಕಕ್ಕೂ ರೂ. 30 ಟಿಕೆಟ್ ದರ ನಿಗದಿ ಮಾಡಲಾಗಿದೆ ಎಂದು ರಂಗಾಯಣ ಆಡಳಿತಾಧಿಕಾರಿ ತಿಳಿಸಿದ್ದಾರೆ.




