ಅಂಬೇಡ್ಕರ್ ಅವರ ಬರಹಗಳು, ಸಾಮಾಜಿಕ ಚಿಂತನೆಗಳ ಪ್ರಕಟಣೆಗಳು ಹೆಚ್ಚಾಗಬೇಕು: ಸಿ.ಎಂ.ನರಸಿಂಹಮೂರ್ತಿ

4 months ago

ಚಾಮರಾಜನಗರ: ಡಾ. ಬಿ.ಆರ್ ಅಂಬೇಡ್ಕರ್ ಅವರ ಜೀವನ ಚರಿತ್ರೆ ಸಂಶೋಧನೆ ಸಂವಿಧಾನ ರಚನೆಯ ಕುರಿತ ಬರಹಗಳು ಮತ್ತು ಸಾಮಾಜಿಕ ಚಿಂತನೆಗಳ ಕೃತಿಗಳ  ಪ್ರಕಟಣೆಗಳು ಹೆಚ್ಚಾಗಿ ಆಗಬೇಕು ಎಂದು ದಲಿತ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸಿಎಂ ನರಸಿಂಹಮೂರ್ತಿ ಹೇಳಿದರು. 

ಡಾ. ಬಿಆರ್ ಅಂಬೇಡ್ಕರ್ ಬಡಾವಣೆಯಲ್ಲಿ ಸರ್ವೋದಯ ಡಾ. ಬಿಆರ್ ಅಂಬೇಡ್ಕರ್ ಸಂಘವು ಬಾಬಾ ಸಾಹೇಬ್ ಡಾ. ಬಿಆರ್ ಅಂಬೇಡ್ಕರ್ ಪರಿನಿಬ್ಬಾಣ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಭೀಮ ಜ್ಯೋತಿ ಮೆರವಣಿಗೆ ಸಮಾರಂಭದಲ್ಲಿ ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. 

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ವಿಶ್ವವಿದ್ಯಾನಿಲಯಗಳು ಅಂಬೇಡ್ಕರ್ ಅವರ ಕೃತಿಗಳನ್ನು ಕನ್ನಡದಲ್ಲಿ ಪ್ರಕಟಿಸುತ್ತಿವೆ. ಆದರೂ ಕೂಡ ಕೃತಿಗಳು ದೊರೆಯುತ್ತಿಲ್ಲ ಈ ಬಗ್ಗೆ ಸರ್ಕಾರ ಗಮನಹರಿಸಬೇಕು ಎಂದರು.

ನಗರಸಭಾ ಮಾಜಿ ಅಧ್ಯಕ್ಷರಾದ ಚಿನ್ನಮ್ಮ ಸಿದ್ದರಾಮಯ್ಯ ಮಾತನಾಡಿ, ಡಾ. ಬಿ ಆರ್ ಅಂಬೇಡ್ಕರ್ ಅವರು ಸಾಮಾಜಿಕ ಸಮಾನತೆ, ಅಸ್ಪೃಶ್ಯತಾ ನಿವಾರಣೆಗಾಗಿ ಹೋರಾಡಿದ ಮಹಾನ್ ನಾಯಕರು. ಭಾರತದ ಸಂವಿಧಾನವನ್ನು ರಚಿಸಿದ ಇವರನ್ನು ಸಂವಿಧಾನ ಶಿಲ್ಪಿ ಎಂದು ಕರೆಯುತ್ತಾರೆ. ಇವರನ್ನು ಭಾರತೀಯರೆಲ್ಲರೂ ಕೂಡ ಸದಾ ಸ್ಮರಿಸಿಕೊಳ್ಳಬೇಕು ಎಂದರು.

ಭೀಮ ಜ್ಯೋತಿ ಮೆರವಣಿಗೆಯಲ್ಲಿ ಯಜಮಾನರುಗಳಾದ ಮಾಧು, ಮಂಜುನಾಥ್, ಕುದರ್, ನಾಗರಾಜ್, ನಂಜುಂಡಯ್ಯ, ಶಿವಣ್ಣ, ಗುರುಸ್ವಾಮಿ, ಮಹದೇವಯ್ಯ, ಕೊಂಬಿನ ಹೊನ್ನಯ್ಯ ಪ್ರತಿಷ್ಠಾನದ ರವಿಚಂದ್ರ ಪ್ರಸಾದ್ ಕಹಳೆ, ಸರ್ವೋದಯ ಡಾ. ಬಿಆರ್ ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ಪ್ರಕಾಶ್, ಮಲ್ಲು ಕಾಂಗ್ರೆಸ್ ಮುಖಂಡ ಶ್ರೀಕಾಂತ್ ಮತ್ತು ಪದಾಧಿಕಾರಿಗಳು ಹಾಗೂ ಬಡಾವಣೆಯ ಯುವಕ ಯುವತಿಯರು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Leave a Reply