ಸಿಲಿಕಾನ್ ನಗರಿ ಬೆಚ್ಚಿಬಿದ್ದಿದ್ದ ಆ ಹಗರಣ
ಬೆಂಗಳೂರು: ಕೋಟಿ ಕೋಟಿ ಮೌಲ್ಯದ ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಸಿಲುಕಿ ಇಡೀ ಸ್ಯಾಂಡಲ್ವುಡ್ ಹಾಗೂ ಪೊಲೀಸ್ ವಲಯದಲ್ಲಿ ಸಂಚಲನ ಮೂಡಿಸಿದ್ದ ನಟಿ ರನ್ಯಾ ರಾವ್ (ಹರ್ಷವರ್ಧಿನಿ ರನ್ಯಾ), ಬುಧವಾರ ಸಂಜೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಿದ್ದಾರೆ.
- ಅಮೆರಿಕದಿಂದ 1 ಲಕ್ಷ ಕೋಟಿ ರೂ. ವಾಪಸ್ ಪಡೆಯುವುದಾಗಿ ಮೋದಿ ಶಪಥ ಮಾಡಿದ್ದಾರೆಯೇ?
- ಅಲೆಮಾರಿಗಳು ಇನ್ನೂ ಅತ್ಯಂತ ಹೀನಾಯ ಸ್ಥಿತಿಗೆ ತಲುಪುವ ಸಾಧ್ಯತೆ: ವಡ್ಡಗೆರೆ ನಾಗರಾಜಯ್ಯ
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
ಕಳ್ಳಸಾಗಣೆ ತಡೆ ಕಾಯ್ದೆಯಾದ ಕಾಫಿಪೋಸಾ (COFEPOSA) ಅಡಿಯಲ್ಲಿ ವಿಧಿಸಲಾಗಿದ್ದ ಒಂದು ವರ್ಷದ ಮುನ್ನೆಚ್ಚರಿಕೆ ಬಂಧನದ ಅವಧಿ ಏಪ್ರಿಲ್ 22ಕ್ಕೆ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಅವರು ಜೈಲಿನಿಂದ ಹೊರಬಂದಿದ್ದಾರೆ.
ಏನಿದು ಪ್ರಕರಣ?: ಮಾರ್ಚ್ 3, 2025ರಂದು ದುಬೈನಿಂದ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ರನ್ಯಾ ರಾವ್ ಅವರನ್ನು ಡಿಆರ್ಐ (DRI) ಅಧಿಕಾರಿಗಳು ತಡೆದಿದ್ದರು.
ಜಪ್ತಿ: ಅವರ ಬಳಿ ಬರೋಬ್ಬರಿ 14.2 ಕೆಜಿ ಚಿನ್ನದ ಬಿಸ್ಕೆಟ್ಗಳು ಪತ್ತೆಯಾಗಿದ್ದವು. ಇದರ ಮೌಲ್ಯ ಅಂದಾಜು 12.56 ಕೋಟಿ ರೂಪಾಯಿ!
ಸಿಂಡಿಕೇಟ್ ಜಾಲ: ತನಿಖೆಯ ವೇಳೆ ರನ್ಯಾ ರಾವ್ ಮತ್ತು ಅವರ ತಂಡ ಕೇವಲ ಒಂದು ವರ್ಷದಲ್ಲಿ ಸುಮಾರು 127 ಕೆಜಿ ಚಿನ್ನವನ್ನು ಅಕ್ರಮವಾಗಿ ಸಾಗಿಸಿರುವುದು ಬೆಳಕಿಗೆ ಬಂದಿತ್ತು. ಈ ದಂಧೆಯ ಒಟ್ಟು ಮೌಲ್ಯ 102 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
ಜಾಮೀನು ಸಿಕ್ಕರೂ ಜೈಲು ತಪ್ಪಿರಲಿಲ್ಲ!: ಕಳೆದ ಮೇ ತಿಂಗಳಲ್ಲೇ ರನ್ಯಾ ರಾವ್ ಅವರಿಗೆ ನ್ಯಾಯಾಲಯದಿಂದ ಜಾಮೀನು ಸಿಕ್ಕಿತ್ತು. ಆದರೆ, ಇಂತಹ ಗಂಭೀರ ಆರ್ಥಿಕ ಅಪರಾಧಗಳು ಮತ್ತೆ ಮರುಕಳಿಸದಂತೆ ತಡೆಯಲು ಕೇಂದ್ರ ಸರ್ಕಾರ ಅವರ ಮೇಲೆ ಕಾಫಿಪೋಸಾ ಕಾಯ್ದೆ ಹೇರಿತ್ತು. ಈ ಕಾಯ್ದೆಯನ್ವಯ ಯಾವುದೇ ವಿಚಾರಣೆ ಇಲ್ಲದೆ ಒಂದು ವರ್ಷದ ಕಾಲ ಬಂಧನದಲ್ಲಿಡಲು ಅವಕಾಶವಿದೆ. ಈ ಅವಧಿ ಇಂದು ಮುಕ್ತಾಯಗೊಂಡ ಕಾರಣ ಅವರು ಈಗ ಮುಕ್ತರಾಗಿದ್ದಾರೆ.
ವಿವಾದದ ಸುಳಿಯಲ್ಲಿ ಐಪಿಎಸ್ ಅಧಿಕಾರಿ: ಈ ಪ್ರಕರಣ ಕೇವಲ ಸಿನಿಮಾರಂಗಕ್ಕೆ ಸೀಮಿತವಾಗದೆ ಪೊಲೀಸ್ ಇಲಾಖೆಯಲ್ಲೂ ಬಿರುಗಾಳಿ ಎಬ್ಬಿಸಿತ್ತು. ರನ್ಯಾ ರಾವ್ ಹಿರಿಯ ಐಪಿಎಸ್ ಅಧಿಕಾರಿ ರಾಮಚಂದ್ರ ರಾವ್ ಅವರ ಮಗಳಾಗಿದ್ದು, ಪ್ರಕರಣದ ತನಿಖೆಯ ವೇಳೆ ಅಧಿಕಾರಿಯ ಹೆಸರೂ ಕೇಳಿಬಂದಿತ್ತು. ಸದ್ಯ ಆ ಅಧಿಕಾರಿ ಕೂಡ ಬೇರೆ ಕಾರಣಗಳಿಗಾಗಿ ಅಮಾನತ್ತಿನಲ್ಲಿದ್ದಾರೆ.
ಮುಂದೇನು?: ಜೈಲಿನಿಂದ ಬಿಡುಗಡೆಯಾಗಿದ್ದರೂ ರನ್ಯಾ ರಾವ್ ಅವರಿಗೆ ಸಂಕಷ್ಟಗಳು ಪೂರ್ಣವಾಗಿ ತೀರಿದಂತಿಲ್ಲ. ಡಿಆರ್ಐ ಮತ್ತು ಜಾರಿ ನಿರ್ದೇಶನಾಲಯ (ED) ದಾಖಲಿಸಿರುವ ಪ್ರಕರಣಗಳ ತನಿಖೆ ಇನ್ನೂ ಪ್ರಗತಿಯಲ್ಲಿದೆ. ಕೋರ್ಟ್ ವಿಚಾರಣೆಗಳು ಮುಂದುವರಿಯಲಿದ್ದು, ಸದ್ಯಕ್ಕೆ ರಣ್ಯ ಅವರು ಸುದೀರ್ಘ ಜೈಲು ವಾಸದ ನಂತರ ಮನೆ ಸೇರಿದ್ದಾರೆ.




