ದಾವಣಗೆರೆಯಿಂದ ಶ್ರೀಶೈಲಕ್ಕೆ ಪಲ್ಲಕ್ಕಿ ಸಾರಿಗೆ ಪ್ರಾರಂಭ

5 months ago

ದಾವಣಗೆರೆ: ಪ್ರಯಾಣಿಕರ ಹಿತದೃಷ್ಟಿಯಿಂದ ನವಂಬರ್ 3 ರಿಂದ ದಾವಣಗೆರೆಯಿಂದ ಶ್ರೀಶೈಲಕ್ಕೆ ದಾವಣಗೆರೆ ವಿಭಾಗದಿಂದ ಪ್ರತಿನಿತ್ಯ ಹವಾನಿಯಂತ್ರಿತ ರಹಿತ ಸ್ಲೀಪರ್ ಪಲ್ಲಕ್ಕಿ ಸಾರಿಗೆ ಸೌಕರ್ಯವನ್ನು ಒದಗಿಸಲಾಗಿದೆ.

ದಾವಣಗೆರೆಯಿಂದ – ಹರಿಹರ – ಹರಪನಹಳ್ಳಿ –ಹೊಸಪೇಟೆ – ಬಳ್ಳಾರಿ – ಶ್ರೀಶೈಲಕ್ಕೆ ಸಂಜೆ 5.15ಕ್ಕೆ ಹೊರಟು ಬೆಳಿಗ್ಗೆ 6.30ಕ್ಕೆ ತಲುಪುತ್ತದೆ. ಪ್ರಯಾಣ ದರ ರೂ.1216/-. ಶ್ರೀಶೈಲ – ಬಳ್ಳಾರಿ – ಹೊಸಪೇಟೆ – ಹರಪನಹಳ್ಳಿ – ಹರಿಹರ – ದಾವಣಗೆರೆಗೆ ಸಂಜೆ 5.15ಕ್ಕೆ ಹೊರಟು ಬೆಳಿಗ್ಗೆ 6.30ಕ್ಕೆ ದಾವಣಗೆರೆ ತಲುಪುತ್ತದೆ. ಪ್ರಯಾಣ ದರ ರೂ.1216/-.

ಮುಂಗಡ ಬುಕ್ಕಿಂಗ್ ಕೌಂಟರ್ ಗಳಲ್ಲಿ ಮತ್ತು ksrtc.in ನಲ್ಲಿ  ಬುಕ್ಕಿಂಗ್ ಮಾಡಲು ಸೌಕರ್ಯ ಕಲ್ಪಿಸಲಾಗಿದೆ. ಪ್ರಯಾಣಿಕರು ಸಾರಿಗೆ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬಹುದು.

Leave a Reply