ನರೇಗಾ ಯೋಜನೆ ಜನ ಕೇಂದ್ರಿತ ಅಭಿವೃದ್ಧಿಯಲ್ಲಿ ಕ್ರಾಂತಿ ಉಂಟುಮಾಡುತ್ತಿದೆ

1 year ago

ಸರ್ಕಾರದ ಯೋಜನೆಯೊಂದು ಸಮಾಜದ ಕಟ್ಟಕಡೆಯ ವ್ಯಕ್ತಿಯ ಬದುಕಿನಲ್ಲಿ ಬದಲಾವಣೆ ತರುತ್ತಿದೆ ಎಂದಾದರೆ, ಅದು ಅಭಿವೃದ್ಧಿ ಎಂಬ ಪದಕ್ಕೆ ನೈಜ ಅರ್ಥ ಕೊಡುತ್ತದೆ. ಜನ ಕೇಂದ್ರಿತ ಅಭಿವೃದ್ಧಿಯಿಂದ ಮಾತ್ರ ಸಮೃದ್ಧ ಸಮಾಜ ಕಟ್ಟಲು ಸಾಧ್ಯ. ನರೇಗಾ ಯೋಜನೆ ಜನ ಕೇಂದ್ರಿತ ಅಭಿವೃದ್ಧಿಯಲ್ಲಿ ಕ್ರಾಂತಿ ಉಂಟುಮಾಡುತ್ತಿದೆ.

ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು ತಾಲ್ಲೂಕಿನ ಲಕ್ಕಮನಹಳ್ಳಿ ಗ್ರಾಮ ಪಂಚಾಯಿತಿಯ ಸಿರಬಾಡಿಗೆ ಗ್ರಾಮದ ರೈತ ರುದ್ರಪ್ಪರವರು ನರೇಗಾ ಯೋಜನೆಯ ಸಹಾಯ ಪಡೆದು ಡ್ರ್ಯಾಗನ್‌ ಫ್ರೂಟ್‌ ಬೆಳೆದಿದ್ದಾರೆ. 2,400 ಸಸಿಗಳನ್ನು ನೆಟ್ಟಿರುವ ಇವರು ಇದುವರೆಗೂ ಮೂರು ಬಾರಿ ಕಟಾವು ಮಾಡಿ, ಸುಮಾರು 2 ಲಕ್ಷ ಆದಾಯ ಗಳಿಸಿದ್ದೇನೆಂದು ಸಂತಸದಿಂದ ಹೇಳಿಕೊಳ್ಳುತ್ತಾರೆ.

ಸಮುದಾಯ ಯೋಜನೆಗಳಲ್ಲದೆ ಕೃಷಿ ಕ್ಷೇತ್ರದಲ್ಲಿನ ವೈಯುಕ್ತಿಕ ನರೇಗಾ ಕಾಮಗಾರಿಗಳು ಗ್ರಾಮೀಣ ಜನರ ಪರಿಸ್ಥಿತಿಯನ್ನು ಉನ್ನತಿಯತ್ತ ಕೊಂಡೊಯ್ಯುತ್ತಿದೆ. ರೈತರಲ್ಲಿ ಹೊಸ ಉತ್ಸಾಹ ನೀಡುತ್ತಿದೆ.

– ಪ್ರಿಯಾಂಕ್ ಖರ್ಗೆ, ಗ್ರಾಮೀಣಾಭಿವೃದ್ಧಿ ಸಚಿವ

Leave a Reply