ಅಖಿಲ ಭಾರತ ಕರ್ತವ್ಯ ಪಥಕ್ಕೆ ನಯನಾ ಎಚ್.ಎ ಆಯ್ಕೆ

1 year ago

ಧಾರವಾಡ: ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಎ.ಹನುಮಂತಪ್ಪ ಮತ್ತು ಎಮ್.ರೇಣುಕಾ ದಂಪತಿಯ ಪುತ್ರಿ ನಯನಾ ಎಚ್.ಎ ಅವರು ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ-2025 ರಲ್ಲಿ ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯವನ್ನು ಪ್ರತಿನಿಧಿಸಲು ಅಖಿಲ ಭಾರತ ಕರ್ತವ್ಯ ಪಥದಲ್ಲಿ ಆಯ್ಕೆಯಾಗಿದ್ದಾರೆ.

ಪ್ರಸ್ತುತ ಧಾರವಾಡದ ಕರ್ನಾಟಕ ಕಲಾ ಕಾಲೇಜಿನಲ್ಲಿ ಪದವಿ ಪಡೆಯುತ್ತಿದ್ದಾರೆ ಮತ್ತು 2/24 ಎನ್‍ಸಿಸಿ ಬೆಟಾಲಿಯನ್‍ನೊಂದಿಗೆ ಸಂಯೋಜಿತರಾಗಿದ್ದಾರೆ.

ನಯನಾ ಎಚ್.ಎ ಅವರಿಗೆ 1 ನೇ ವರ್ಷದ ಎನ್‍ಸಿಸಿಯಿಂದ ಮತ್ತು ಇಲ್ಲಿಯವರೆಗೆ ANO ಕ್ಯಾಪ್ಟನ್ ವಾಯ್. ಎಸ್.ರಾವುತ್ ಸರ್ ಹೆಚ್ಚು ಪ್ರೋತ್ಸಾಹ ಮತ್ತು ಬೆಂಬಲ ನೀಡಿದ್ದಾರೆ ಮತ್ತು ಮಾಜಿ RDC ಕೆಡೆಟ್ ವಿನಾಯಕ್ ಹತ್ತೂರೆ ಹಿರಿಯರಿಂದ ಮಾರ್ಗದರ್ಶನ ಪಡೆದಿದ್ದಾರೆ.

Leave a Reply