ಕಳೆದ ಒಂದು ತಿಂಗಳಲ್ಲಿ ಬಿಹಾರ, ಬದ್ಲಾಪುರ, ರತ್ನಗಿರಿ, ಅಸ್ಸಾಂ, ಯುಪಿಯಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ, ಹಲ್ಲೆ ನಡೆದಿದೆ. ಒಂದು ಪ್ರಕರಣದಲ್ಲಿ ಒಬ್ಬರ ಕೊಲೆಯಾಗಿದೆ.
- ವಿಷ್ಣುವರ್ಧನ್ ಸ್ಮಾರಕ ಕುರಿತು ನಮ್ಮ ಕುಟುಂಬದಿಂದ ಯಾವುದೇ ಸ್ಪಷ್ಟನೆ ನಿರೀಕ್ಷೆ ಮಾಡಬೇಡಿ: ಅನಿರುದ್ಧ
- ರಾಜಕೀಯ ಪ್ರೇರಣೆಗೆ ಬಲಿಯಾಗದೆ ಸತ್ಯ ಅರಿಯಬೇಕು: ಪ್ರಿಯಾಂಕ್ ಖರ್ಗೆ
- ಕುವೆಂಪು ವಿವಿಯಲ್ಲಿ ಪಿಎಚ್ಡಿ ಪೂರೈಸಿದ ಐಜಿಪಿ ಹರ್ಷ ಪಿ.ಎಸ್.
- ಬಿಜೆಪಿ ನಾಯಕನಿಂದ ‘ಹಾಸಿಗೆ ಹಂಚಿಕೊಂಡರೆ ಪದವಿ’ ಆಮಿಷ
- 53 ಸೆಕೆಂಡ್ ಗಳಲ್ಲಿ 9 ಬಾರಿ ಪೋಷಕಿಗೆ ‘Shut Up’ ಎಂದು ಕಿರುಚಾಡಿದ ಪ್ರಾಂಶುಪಾಲೆ
ಗಾಯದ ಮೇಲೆ ಬರೆಯಿಟ್ಟಂತೆ ಮೊನ್ನೆ ಉತ್ತರ ಪ್ರದೇಶದಲ್ಲಿ 15 ಮತ್ತು 18 ವಯಸ್ಸಿನ ಇಬ್ಬರು ದಲಿತ ಯುವತಿಯರು ನೇಣಿನಲ್ಲಿ ಬಿಗಿದು ಸಾವಿಗೀಡಾದ ದುರಂತ ಘಟನೆ ನಡೆದಿದೆ. ಸಂತ್ರಸ್ತರ ಮೈಮೇಲೆ ಗಾಯದ ಗುರುತುಗಳಿದ್ದರೂ ಅಲ್ಲಿನ ಪೊಲೀಸರು ಸರಿಯಾಗಿ ತನಿಖೆ ನಡೆಸದೆ ಆತ್ಮಹತ್ಯೆ ಎಂದು ಮರೆಮಾಚುತ್ತಿರುವುದು ಸ್ಥಳೀಯರು, ಪೋಷಕರಲ್ಲಿ ಆಕ್ರೋಶ ಮೂಡಿಸಿದೆ.
ಸರಿಯಾಗಿ ಹತ್ತು ವರ್ಷಗಳ ಹಿಂದೆ ಉತ್ತರ ಪ್ರದೇಶದ ಬದೌನ್ ಜಿಲ್ಲೆಯ ಕತ್ರಾ ಸದತ್ ಗಂಜ್ ಹಳ್ಳಿಯಲ್ಲಿ ಇಬ್ಬರು ದಲಿತ ಯುವತಿಯ ಮೇಲೆ ಅತ್ಯಾಚಾರ, ಕೊಲೆ ನಡೆಸಿ ನೇಣು ಹಾಕಿದ ಬರ್ಬರ ಘಟನೆ ಮತ್ತೆ ನೆನಪಾಗುತ್ತದೆ (ಆರ್ಟಿಕಲ್ 15 ಸಿನಿಮಾ ಈ ಘಟನೆ ಆಧರಿಸಿತ್ತು).
ಕೊಲ್ಕತ್ತಾದ ಆರ್.ಜಿ.ಖರ್ ಆಸ್ಪತ್ರೆಯ ಮಹಿಳಾ ವೈದ್ಯರ ಮೇಲಿನ ಅತ್ಯಾಚಾರ, ಹತ್ಯೆ ಕುರಿತಾದ ಪ್ರತಿಭಟನೆ ನಡೆಸುವ ಇಲ್ಲಿನ ನಾಗರಿಕ ಸಮಾಜ ಮೇಲೆ ಪ್ರಸ್ತಾಪಿಸಿದ ದುರ್ಘಟನೆಗಳ ಕುರಿತು ಮಾತನಾಡುತ್ತಿಲ್ಲ, ಆಕ್ರೋಶ ವ್ಯಕ್ತಪಡಿಸುತ್ತಿಲ್ಲ. ಪ್ರತಿಭಟನೆ ನಡೆಸುತ್ತಿಲ್ಲ. ಇವರ ಈ selectiveness ಗುಣದ ಕುರಿತು ಏನು ಹೇಳುವುದು? ಈ ಹಿಂದೆ ಹತ್ರಾಸ್, ಉನ್ನಾವ್ ನ ಅತ್ಯಾಚಾರ, ಕೊಲೆ ಕುರಿತು ಇದೇ ರೀತಿ ಮೌನವಾಗಿದ್ದರು. ಈಗಲೂ ಸಹ… ಇದೆಂತಹ ಹಿಪೊಕ್ರೆಟಿಕ್ ಸಮಾಜ?
– ಬಿ.ಶ್ರೀಪಾದ ಭಟ್, ಸಾಮಾಜಿಕ ಹೋರಾಟಗಾರರು




