ಸಂಚಾರಿ ಡಯಾಲಿಸಿಸ್ ಮತ್ತು ಹೃದಯ ತಪಾಸಣಾ ವಾಹನ ನಿಯೋಜಿಸಿ

2 years ago

ಇತ್ತೀಚಿನ ದಿನಗಳಲ್ಲಿ ಮೂತ್ರಪಿಂಡದ ಕಾಯಿಲೆಯಿಂದ ನರಳುತ್ತಿರುವಂತಹ ಜನರ ಸಂಖ್ಯೆಯು ಹೆಚ್ಚಾಗುತ್ತಿದೆ. ಇವರಿಗೆ ನಿಗದಿತವಾಗಿ ಡಯಾಲಿಸಿಸ್ ಮಾಡಬೇಕಾಗುತ್ತದೆ. ಆದ್ದರಿಂದ ಇವರು ಪದೇಪದೇ ಆಸ್ಪತ್ರೆಗಳಿಗೆ ಹೋಗಬೇಕಾಗುತ್ತದೆ.

ಇಂತಹ ಕಾಯಿಲೆಯಿಂದ ನರಳುತ್ತಿರುವವರಲ್ಲಿ ಕೆಲವರು ಅಂಗವಿಕಲರು ಇರುತ್ತಾರೆ. ಇವರುಗಳು ಆಸ್ಪತ್ರೆಗಳಿಗೆ ಹೋಗಿಬರುವುದು ಕಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಾನ್ಯ ಆರೋಗ್ಯ ಸಚಿವರು ಆಲೋಚನೆಯನ್ನು ಮಾಡಿ ಸಂಚಾರಿ ಡಯಾಲಿಸಿಸ್ ವಾಹನಗಳನ್ನು ಅಭಿವೃದ್ಧಿಪಡಿಸಿದರೆ ಅನಾರೋಗ್ಯ ಪೀಡಿತ ವಯೋವೃದ್ಧರು ಮತ್ತು ಅಂಗವಿಕಲರಾಗಿರುವ ರೋಗಿಗಳಿಗೆ ಅನುಕೂಲವಾಗುತ್ತದೆ.

ಜೊತೆಗೆ ಇಂತಹ ಜನರಿಗಾಗಿ ಸಂಚಾರಿ ಹೃದಯ ತಪಾಸಣೆ ವಾಹನಗಳನ್ನು ಅಭಿವೃದ್ಧಿಪಡಿಸಿದರೆ ಅನುಕೂಲವಾಗುತ್ತದೆ. ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ರವರು ಈಗಾಗಲೇ ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ಜಾರಿಗೆ ತಂದಿರುತ್ತಾರೆ. ಇವರು ಈ ನಿಟ್ಟಿನಲ್ಲೂ ಆಲೋಚಿಸಿ ಕ್ರಮ ಕೈಗೊಂಡರೆ ಇದೊಂದು ಜನಪರವಾದ ಯೋಜನೆಯಾಗುತ್ತದೆ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply