ವಕ್ಫ್ ಆಸ್ತಿಯ ಸಂರಕ್ಷಣೆ ವಿಷಯದಲ್ಲಿ ಅತಿದೊಡ್ಡ ವಿವಾದ ಸೃಷ್ಟಿಸುವ ಅನಗತ್ಯ ಹುನ್ನಾರ ನಡೆಸುತ್ತಿರುವ ಬಿಜೆಪಿಗರು ಕಾಂಗ್ರೆಸ್ ಅವಧಿಯಲ್ಲಿ ವಕ್ಫ್ ಹೆಸರಲ್ಲಿ ರೈತರ ಜಮೀನುಗಳಿಗೆ ನೋಟಿಸ್ ನೀಡಿ ಅದನ್ನು ಕಿತ್ತುಕೊಳ್ಳಲಾಗುತ್ತಿದೆ, ಹಿಂದೂಗಳಿಗೆ ಇದರಿಂದ ಅಪಾಯವಿದೆ ಎಂಬ ಸುಳ್ಳುಗಳನ್ನು ಹರಿ ಬಿಡುತ್ತಿದ್ದಾರೆ.
- ಕಟ್ಟೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಸೇವೆ ಮನೆ ಬಾಗಿಲಿಗೆ ಮಾದರಿ ಕಾರ್ಯಕ್ರಮ
- ಕನ್ನಡ ಸಿನಿಮಾ: ಮುಳುಗುತ್ತಿರುವ ಟೈಟಾನಿಕ್
- RSS ಅನ್ನು ಪ್ರಶ್ನಿಸುವ ಯೋಗ್ಯತೆಯಿದೆಯೇ?: ಆರ್. ಅಶೋಕ್
- ಎಸ್ಐಆರ್ ಎನ್ಯೂಮರೇಷನ್ ಪ್ರಕ್ರಿಯೆ ಬಗ್ಗೆ ಗೊಂದಲ ನಿವಾರಣೆ ಅಗತ್ಯ: ಅಪ್ಸರ್ ಕೊಡ್ಲಿಪೇಟೆ
- ಮಾತಾಡದೇ ನನ್ನೊಳಗೇ ಉಳಿದ ವಿಷಯಗಳು ಹೀಗಿವೆ
ಆದರೆ ಅಂಕಿ ಅಂಶಗಳನ್ನು ಗಮನಿಸಿದರೆ ಕಾಂಗ್ರೆಸ್ ಅವಧಿಯಲ್ಲಿ ಭೂಮಾಲೀಕರಿಗೆ 1201 ನೋಟಿಸ್ ಗಳನ್ನು ನೀಡಿದ್ದರೆ ಬಿಜೆಪಿಗರು ಬರೋಬ್ಬರಿ 1735 ನೋಟಿಸ್ ಗಳನ್ನು ಹೊರಡಿಸಿದ್ದಾರೆ.
ವಿಷಯವೇ ಅಲ್ಲದ ವಿಷಯದಲ್ಲಿ ರಾಜಕೀಯ ಮಾಡುತ್ತಿರುವಾಗಲೂ ಇವರದ್ದೇ ಸಮಸ್ಯೆ ಇಟ್ಟುಕೊಂಡ ಬಿಜೆಪಿಗರು ನಮ್ಮ ಸರ್ಕಾರದ ಮೇಲೆ ಅಪಪ್ರಚಾರ ಮಾಡುತ್ತಿದ್ದು ಇದಕ್ಕೆ ಈಗಾಗಲೇ ಇವರು ಜನರಿಂದ ಛೀಮಾರಿ ಹಾಕಿಸಿಕೊಂಡಿದ್ದಾರೆ.
ಆಡಳಿತದ ಗಂಧ ಗಾಳಿ ಇಲ್ಲದೇ, ವಿರೋಧ ಪಕ್ಷದ ಜವಾಬ್ದಾರಿಯೂ ತಿಳಿಯದೇ ವರ್ತಿಸುತ್ತಿರುವ ಬಿಜೆಪಿಗರಿಂದ ಕೇವಲ ಹಿಂದೂಗಳು ಮಾತ್ರವಲ್ಲದೇ ಎಲ್ಲ ವರ್ಗದವರೂ ತೊಂದರೆಗೆ ಒಳಗಾಗಿದ್ದಾರೆ.
ಇಂತಹ ಪಕ್ಷಗಳು ಸಾರ್ವಜನಿಕ ಜೀವನದಲ್ಲಿ ಇರುವುದಕ್ಕಿಂತ ತಮ್ಮ ಪಕ್ಷವನ್ನು ತಾವೇ ವಜಾಗೊಳಿಸಿಕೊಂಡರೆ ಜನರಿಗೆ ಮಹದುಪಕಾರ ಮಾಡಿದಂತೆ ಆಗುತ್ತದೆ
– ಡಾ ಎಚ್ ಸಿ ಮಹದೇವಪ್ಪ, ಸಮಾಜ ಕಲ್ಯಾಣ ಸಚಿವ




