ಬುದ್ಧಗುರು, ಬಸವಣ್ಣ, ಅಂಬೇಡ್ಕರ್, ಕುವೆಂಪು ಮುಂತಾದ ದಾರ್ಶನಿಕರು ಯಾವತ್ತೂ ಮಾಂಸಾಹಾರ ಸಂಸ್ಕೃತಿಯನ್ನಾಗಲೀ ಮಾಂಸಾಹಾರಿಗಳನ್ನಾಗಲೀ ಕೀಳುಗಂಡಿಲ್ಲ. ಹಾಗೆಂದು ಅವರು ಮಾಂಸಾಹಾರವನ್ನು promote ಮಾಡಿಲ್ಲ. ಬುದ್ಧಗುರು ದೇವರ ಹೆಸರಿನಲ್ಲಿ ಬಲಿ ಕೊಡುವ ಮೂಢಾಚಾರಗಳನ್ನು ವಿರೋಧಿಸುತ್ತಾರೆ. ಬಸವಣ್ಣನವರು ಲಿಂಗಾರ್ಪಿತವಾದದ್ದೆಲ್ಲವೂ ಮಹಾಪ್ರಸಾದ ಎನ್ನುತ್ತಾರೆ. ಮಾಂಸಾಹಾರ ಪ್ರಿಯರಾದ ಕುವೆಂಪು ಅವರ ಮಗ ತೇಜಸ್ವಿ ಒಬ್ಬ ಬೇಟೆಗಾರ. ವಿಶ್ವಜ್ಞಾನಿ ಅಂಬೇಡ್ಕರ್ ಕೂಡಾ ಮಾಂಸಾಹಾರಿಯಾಗಿದ್ದರು.
- ಭಾರತ ಕಲ್ಯಾಣ ರಾಷ್ಟ್ರವಾಗಲು ಅಂಬೇಡ್ಕರರ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು: ಕೆ.ವೈ.ನಾರಾಯಣಸ್ವಾಮಿ
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
ಶೇಕಡಾ ೯೮ ರಷ್ಟು ನೊಬೆಲ್ ಪ್ರಶಸ್ತಿ ಪುರಸ್ಕೃತರು ಮಾಂಸಾಹಾರಿಗಳೇ ಆಗಿರುತ್ತಾರೆ. ವಿದೇಶಗಳಲ್ಲಿ ನಡೆಯುವ ಕವಿ ಮೇಳಗಳಲ್ಲಿ ಮದ್ಯ ಮತ್ತು ಮಾಂಸಾಹಾರ ಸೇವನೆ ಅವಿಭಾಜ್ಯ ಅಂಗವಾಗಿದೆ. ಅಲ್ಲಿನ ಟೇಬಲ್ ಗಳಲ್ಲಿ ಕವಿಗಳು ಕುಡಿದು ತಿಂದುಣ್ಣುವಾಗ ನಡೆಸುವ ಅನೌಪಚಾರಿಕ ಸಾಹಿತ್ಯ ಚರ್ಚೆಗಳನ್ನು ಕೂಡಾ ದಾಖಲೀಕರಿಸಿ Table talk ಹೆಸರಿನಲ್ಲಿ ಕೃತಿಗಳನ್ನು ಪ್ರಕಟಿಸುವ ಪರಿಪಾಠವಿದೆ.
ಅವರು ತಿಂದುಂಡು ಕುಡಿದು ನಡೆಸುವ ಚಟುವಟಿಕೆಗಳೆಲ್ಲವೂ ಅತ್ಯಂತ civilized ಆಗಿರುತ್ತವೆ. ನಮ್ಮಲ್ಲಿ ಸಸ್ಯಾಹಾರ ಸ್ವೀಕರಿಸಲು ಕೂಡಾ ರಂಪಾಟಗಳನ್ನು ನಡೆಸುವಾಗ ಮಾಂಸಾಹಾರ ಸ್ವೀಕರಿಸಲು ತಲೆಗಳೇ ಉರುಳಬಹುದೇನೋ ! ನಮ್ಮವರ ವರ್ತನೆಗಳು ಅಷ್ಟರಮಟ್ಟಿಗೆ uncivilized ಆಗಿರುತ್ತವೆ. ಅತ್ಯಂತ ಶಿಸ್ತಿನ ಕ್ರಮಗಳನ್ನು ಅನುಸರಿಸಿ ಸಾಹಿತ್ಯ ಸಮ್ಮೇಳನದಲ್ಲಿ ತೀರಾ civilized ಆಗಿ ಮಾಂಸಾಹಾರ ಒದಗಿಸುವುದಾದರೆ ನಾನು ಒಪ್ಪುತ್ತೇನೆ. ಇಲ್ಲದಿದ್ದರೆ ಮಾಂಸಾಹಾರ ಸಂಸ್ಕೃತಿಯ ಮೇಲೆ ಸಸ್ಯಾಹಾರಿಗಳು ಹುಸಿ ಶ್ರೇಷ್ಠತೆಯ ಹೆಸರಿನಲ್ಲಿ ನಡೆಸುವ ಹಲ್ಲೆ- ಹವಣಿಕೆಗಳು ಮತ್ತಷ್ಟು ತೀವ್ರವಾಗುತ್ತವೆ.
– ಡಾ.ವಡ್ಡಗೆರೆ ನಾಗರಾಜಯ್ಯ, ಹಿರಿಯ ಸಾಹಿತಿ




