ಬುದ್ಧಗುರು, ಬಸವಣ್ಣ, ಅಂಬೇಡ್ಕರ್, ಕುವೆಂಪು ಮುಂತಾದ ದಾರ್ಶನಿಕರು ಯಾವತ್ತೂ ಮಾಂಸಾಹಾರ ಸಂಸ್ಕೃತಿಯನ್ನಾಗಲೀ ಮಾಂಸಾಹಾರಿಗಳನ್ನಾಗಲೀ ಕೀಳುಗಂಡಿಲ್ಲ. ಹಾಗೆಂದು ಅವರು ಮಾಂಸಾಹಾರವನ್ನು promote ಮಾಡಿಲ್ಲ. ಬುದ್ಧಗುರು ದೇವರ ಹೆಸರಿನಲ್ಲಿ ಬಲಿ ಕೊಡುವ ಮೂಢಾಚಾರಗಳನ್ನು ವಿರೋಧಿಸುತ್ತಾರೆ. ಬಸವಣ್ಣನವರು ಲಿಂಗಾರ್ಪಿತವಾದದ್ದೆಲ್ಲವೂ ಮಹಾಪ್ರಸಾದ ಎನ್ನುತ್ತಾರೆ. ಮಾಂಸಾಹಾರ ಪ್ರಿಯರಾದ ಕುವೆಂಪು ಅವರ ಮಗ ತೇಜಸ್ವಿ ಒಬ್ಬ ಬೇಟೆಗಾರ. ವಿಶ್ವಜ್ಞಾನಿ ಅಂಬೇಡ್ಕರ್ ಕೂಡಾ ಮಾಂಸಾಹಾರಿಯಾಗಿದ್ದರು.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಶೇಕಡಾ ೯೮ ರಷ್ಟು ನೊಬೆಲ್ ಪ್ರಶಸ್ತಿ ಪುರಸ್ಕೃತರು ಮಾಂಸಾಹಾರಿಗಳೇ ಆಗಿರುತ್ತಾರೆ. ವಿದೇಶಗಳಲ್ಲಿ ನಡೆಯುವ ಕವಿ ಮೇಳಗಳಲ್ಲಿ ಮದ್ಯ ಮತ್ತು ಮಾಂಸಾಹಾರ ಸೇವನೆ ಅವಿಭಾಜ್ಯ ಅಂಗವಾಗಿದೆ. ಅಲ್ಲಿನ ಟೇಬಲ್ ಗಳಲ್ಲಿ ಕವಿಗಳು ಕುಡಿದು ತಿಂದುಣ್ಣುವಾಗ ನಡೆಸುವ ಅನೌಪಚಾರಿಕ ಸಾಹಿತ್ಯ ಚರ್ಚೆಗಳನ್ನು ಕೂಡಾ ದಾಖಲೀಕರಿಸಿ Table talk ಹೆಸರಿನಲ್ಲಿ ಕೃತಿಗಳನ್ನು ಪ್ರಕಟಿಸುವ ಪರಿಪಾಠವಿದೆ.
ಅವರು ತಿಂದುಂಡು ಕುಡಿದು ನಡೆಸುವ ಚಟುವಟಿಕೆಗಳೆಲ್ಲವೂ ಅತ್ಯಂತ civilized ಆಗಿರುತ್ತವೆ. ನಮ್ಮಲ್ಲಿ ಸಸ್ಯಾಹಾರ ಸ್ವೀಕರಿಸಲು ಕೂಡಾ ರಂಪಾಟಗಳನ್ನು ನಡೆಸುವಾಗ ಮಾಂಸಾಹಾರ ಸ್ವೀಕರಿಸಲು ತಲೆಗಳೇ ಉರುಳಬಹುದೇನೋ ! ನಮ್ಮವರ ವರ್ತನೆಗಳು ಅಷ್ಟರಮಟ್ಟಿಗೆ uncivilized ಆಗಿರುತ್ತವೆ. ಅತ್ಯಂತ ಶಿಸ್ತಿನ ಕ್ರಮಗಳನ್ನು ಅನುಸರಿಸಿ ಸಾಹಿತ್ಯ ಸಮ್ಮೇಳನದಲ್ಲಿ ತೀರಾ civilized ಆಗಿ ಮಾಂಸಾಹಾರ ಒದಗಿಸುವುದಾದರೆ ನಾನು ಒಪ್ಪುತ್ತೇನೆ. ಇಲ್ಲದಿದ್ದರೆ ಮಾಂಸಾಹಾರ ಸಂಸ್ಕೃತಿಯ ಮೇಲೆ ಸಸ್ಯಾಹಾರಿಗಳು ಹುಸಿ ಶ್ರೇಷ್ಠತೆಯ ಹೆಸರಿನಲ್ಲಿ ನಡೆಸುವ ಹಲ್ಲೆ- ಹವಣಿಕೆಗಳು ಮತ್ತಷ್ಟು ತೀವ್ರವಾಗುತ್ತವೆ.
– ಡಾ.ವಡ್ಡಗೆರೆ ನಾಗರಾಜಯ್ಯ, ಹಿರಿಯ ಸಾಹಿತಿ




