ದೊಡ್ಡಹುಣಸೆ ಮಠದ ಶ್ರೀಗಳ ನೇತೃತ್ವದಲ್ಲಿ ಶಿಕ್ಷಣ ಮತ್ತು ಸಂಸ್ಕೃತಿ ವಿಸ್ತರಿಸಿದೆ: ಬಸವರಾಜ ಬೊಮ್ಮಾಯಿ

2 months ago

ನಾನು ಅರ್ಥಶಾಸ್ತ್ರ ಮತ್ತು ತತ್ವಶಾಸ್ತ್ರ ಎರಡನ್ನೂ ಅಧ್ಯಯನ ಮಾಡುತ್ತೇನೆ. ಅರ್ಥಶಾಸ್ತ್ರದಲ್ಲಿ ಲಾಭ–ನಷ್ಟ ಇದ್ದರೆ, ಆಧ್ಯಾತ್ಮದಲ್ಲಿ ಪಾಪ–ಪುಣ್ಯ ಇವೆ. ವ್ಯವಹಾರದಲ್ಲಿ ನೀತಿ ಇರಬೇಕು, ಆಧ್ಯಾತ್ಮದಲ್ಲಿ ಜಾಗೃತಿ ಇರಬೇಕು. ಲಾಭದಿಂದಲೂ ಪುಣ್ಯ ಗಳಿಸಬೇಕಾದರೆ ಸನ್ಮಾರ್ಗ ಅಗತ್ಯ. ಅದನ್ನೇ ಬಸವಣ್ಣ ಅವರು ನಮಗೆ ಕಲಿಸಿದ್ದಾರೆ.

ಅವರ ಅನುಭವ ಮಂಟಪವು ಜಗತ್ತಿನ ಮೊದಲ ಪಾರ್ಲಿಮೆಂಟ್ ಎಂದೇ ಹೇಳಲಾಗುತ್ತದೆ. “ಕಲಬೇಡ, ಕೊಲಬೇಡ, ಹುಸಿಯ ನುಡಿಯಬೇಡ” ಎಂದು ಅವರು ಸನ್ಮಾರ್ಗ ತೋರಿಸಿದರು. ಕಾಮ, ಕ್ರೋಧ, ಮದ, ಮತ್ಸರದಲ್ಲಿ ಸಿಲುಕಿದವನು ಮನುಷ್ಯ; ನ್ಯಾಯ, ನೀತಿ, ಪ್ರೀತಿ, ವಿಶ್ವಾಸದಲ್ಲಿ ಬದುಕುವವನು ಮಾನವ. ಆ ಮುಗ್ಧತೆ ಮತ್ತು ಆತ್ಮಸಾಕ್ಷಿ ಉಳಿಯಲು ಶ್ರೀಮಠಗಳ ಆಧ್ಯಾತ್ಮಿಕ ಜಾಗೃತಿ ಅಗತ್ಯ.

ದೊಡ್ಡ ಹುಣಸೆ ಮಠದ ಶ್ರೀಗಳ ನೇತೃತ್ವದಲ್ಲಿ ಶಿಕ್ಷಣ ಮತ್ತು ಸಂಸ್ಕೃತಿ ವಿಸ್ತರಿಸಿದೆ. ಮುಂದಿನ ವರ್ಷ ಲಿಂಗೈಕ್ಯ ಶ್ರೀ ಗುರು ರಾಚೋಟೇಶ್ವರ ಮಹಾಸ್ವಾಮಿಗಳವರ 50ನೇ ಸ್ಮರಣೋತ್ಸವವನ್ನು ಎಲ್ಲರೂ ಸೇರಿ ಅರ್ಥಪೂರ್ಣವಾಗಿ ಆಚರಿಸೋಣ.

– ಬಸವರಾಜ ಬೊಮ್ಮಾಯಿ, ಸಂಸದ

Leave a Reply