ನಾನು ಅರ್ಥಶಾಸ್ತ್ರ ಮತ್ತು ತತ್ವಶಾಸ್ತ್ರ ಎರಡನ್ನೂ ಅಧ್ಯಯನ ಮಾಡುತ್ತೇನೆ. ಅರ್ಥಶಾಸ್ತ್ರದಲ್ಲಿ ಲಾಭ–ನಷ್ಟ ಇದ್ದರೆ, ಆಧ್ಯಾತ್ಮದಲ್ಲಿ ಪಾಪ–ಪುಣ್ಯ ಇವೆ. ವ್ಯವಹಾರದಲ್ಲಿ ನೀತಿ ಇರಬೇಕು, ಆಧ್ಯಾತ್ಮದಲ್ಲಿ ಜಾಗೃತಿ ಇರಬೇಕು. ಲಾಭದಿಂದಲೂ ಪುಣ್ಯ ಗಳಿಸಬೇಕಾದರೆ ಸನ್ಮಾರ್ಗ ಅಗತ್ಯ. ಅದನ್ನೇ ಬಸವಣ್ಣ ಅವರು ನಮಗೆ ಕಲಿಸಿದ್ದಾರೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಅವರ ಅನುಭವ ಮಂಟಪವು ಜಗತ್ತಿನ ಮೊದಲ ಪಾರ್ಲಿಮೆಂಟ್ ಎಂದೇ ಹೇಳಲಾಗುತ್ತದೆ. “ಕಲಬೇಡ, ಕೊಲಬೇಡ, ಹುಸಿಯ ನುಡಿಯಬೇಡ” ಎಂದು ಅವರು ಸನ್ಮಾರ್ಗ ತೋರಿಸಿದರು. ಕಾಮ, ಕ್ರೋಧ, ಮದ, ಮತ್ಸರದಲ್ಲಿ ಸಿಲುಕಿದವನು ಮನುಷ್ಯ; ನ್ಯಾಯ, ನೀತಿ, ಪ್ರೀತಿ, ವಿಶ್ವಾಸದಲ್ಲಿ ಬದುಕುವವನು ಮಾನವ. ಆ ಮುಗ್ಧತೆ ಮತ್ತು ಆತ್ಮಸಾಕ್ಷಿ ಉಳಿಯಲು ಶ್ರೀಮಠಗಳ ಆಧ್ಯಾತ್ಮಿಕ ಜಾಗೃತಿ ಅಗತ್ಯ.
ದೊಡ್ಡ ಹುಣಸೆ ಮಠದ ಶ್ರೀಗಳ ನೇತೃತ್ವದಲ್ಲಿ ಶಿಕ್ಷಣ ಮತ್ತು ಸಂಸ್ಕೃತಿ ವಿಸ್ತರಿಸಿದೆ. ಮುಂದಿನ ವರ್ಷ ಲಿಂಗೈಕ್ಯ ಶ್ರೀ ಗುರು ರಾಚೋಟೇಶ್ವರ ಮಹಾಸ್ವಾಮಿಗಳವರ 50ನೇ ಸ್ಮರಣೋತ್ಸವವನ್ನು ಎಲ್ಲರೂ ಸೇರಿ ಅರ್ಥಪೂರ್ಣವಾಗಿ ಆಚರಿಸೋಣ.
– ಬಸವರಾಜ ಬೊಮ್ಮಾಯಿ, ಸಂಸದ




