ಗಿರಡ್ಡಿ ಗೋವಿಂದರಾಜ ಹೆಸರಿನ ವಿಮರ್ಶಾ ಪ್ರಶಸ್ತಿಗೆ ವಿಮರ್ಶಾ ಕೃತಿಗಳ ಆಹ್ವಾನ

2 years ago

ಧಾರವಾಡ: ಕನ್ನಡದ ಹೆಸರಾಂತ ಸಾಹಿತಿ, ವಿಮರ್ಶಕ ಡಾ. ಗಿರಡ್ಡಿ ಗೋವಿಂದರಾಜ ಅವರ ಹೆಸರಲ್ಲಿ ನಿಡುವ “ವಿಮರ್ಶಾ ಪ್ರಶಸ್ತಿಗೆ” ವಿಮರ್ಶಾ ಕೃತಿಗಳನ್ನು ಆಹ್ವಾನಿಸಲಾಗಿದೆ.

ಡಾ. ಗಿರಡ್ಡಿ ಗೋವಿಂದರಾಜ ಅವರ ಸ್ಮರಣಾರ್ಥ ಪ್ರತಿ ವರ್ಷ ಕನ್ನಡದ ಒಂದು ಸ್ವತಂತ್ರ ವಿಮರ್ಶಾ ಕೃತಿಗೆ ಧಾರವಾಡದ ಡಾ. ಗಿರಡ್ಡಿ ಗೋವಿಂದರಾಜ ಫೌಂಡೇಶನ್ ಪ್ರಶಸ್ತಿ ನೀಡಲು ನಿರ್ಧರಿಸಿದೆ.

ಪ್ರಸ್ತುತ ಪ್ರಶಸ್ತಿಯನ್ನು ೦೧-೦೧-೨೦೨೩ ರಿಂದ ೩೧-೧೨-೨೩ರ ವರೆಗೆ ಪ್ರಥಮ ಸಲ ಮುದ್ರಣಗೊಂಡಿರುವ ಕನ್ನಡದ ವಿಮರ್ಶಾ ಕೃತಿಗೆ ನೀಡಲಾಗುವುದು. ಪ್ರಶಸ್ತಿ ೨೫ ಸಾವಿರ ರೂಪಾಯಿ ನಗದು ಮತ್ತು ಸ್ಮರಣಿಕೆ ಒಳಗೊಂಡಿರುತ್ತದೆ. ಒಬ್ಬ ವಿಮರ್ಶಕರ ಒಂದು ಕೃತಿಯನ್ನು ಮಾತ್ರ ಪ್ರಶಸ್ತಿಗೆ ಪರಿಗಣಿಸಲಾಗುವುದು. ಪ್ರಶಸ್ತಿಗೆ ಕಳುಹಿಸುವ ಕೃತಿಯ ೪ ಪ್ರತಿಗಳನ್ನು ೩೦-೦೬-೨೦೨೪ (೩೦ ಜೂನ್, ೨೦೨೪) ರೊಳಗಾಗಿ ತಲುಪುವಂತೆ ಕಳುಹಿಸಬೇಕು.

ವಿಳಾಸ: ಅಧ್ಯಕ್ಷರು, ಡಾ. ಗಿರಡ್ಡಿ ಗೋವಿಂದರಾಜ ಫೌಂಡೇಶನ್, ಮನೋಹರ ಗ್ರಂಥಮಾಲಾ, ಸುಭಾಸ ರಸ್ತೆ, ಧಾರವಾಡ-೫೮೦೦೦೧

ಅವಧಿ ಮೀರಿ ತಲುಪುವ ಕೃತಿಗಳನ್ನು ಪ್ರಶಸ್ತಿಗೆ ಸ್ವೀಕರಿಸುವುದಿಲ್ಲ. ಸಂಗ್ರಹ, ಸಂಕಲನ, ಅನುವಾದ, ಪಿಎಚ್ಡಿ ಸಂಶೋಧನಾ ಪ್ರಬಂಧಗಳಂಥ ಕೃತಿಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದಿಲ್ಲ ಎಂದು ಫೌಂಡೇಶನ್ ಪ್ರಕಟಣೆಯಲ್ಲಿ ತಿಳಿಸಿದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ಪ್ರೋ. ಮಲ್ಲಿಕಾರ್ಜುನ ಹಿರೇಮಠ, ಅಧ್ಯಕ್ಷರು, ೯೯೪೫೬ ೦೭೧೪೪.

Leave a Reply