ಬೆಂಗಳೂರು: ಮತದಾನ ನ್ಯಾಯಯುತವಾಗಿ ಚಲಾಯಿಸಿ, ಯಾವುದೇ ಆಮಿಷಗಳಿಗೆ ಒಳಗಾಗಬೇಡಿ ಎಂದು ಶಿಕ್ಷಣ ತಜ್ಞ ಜಿಮುನಿರಾಜು ಕರೆನೀಡಿದರು.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಡಾ.ಎಸ್ ಗೋಪಾಲರಾಜ್ ಕಾಲೇಜು ವಿದ್ಯಾರ್ಥಿಗಳಿಂದ ಮತದಾನದ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾರ್ವಜನಿಕರಲ್ಲಿ ಮತದಾನದ ಕುರಿತಾಗಿ ಅರಿವು ಮೂಡಿಸಲು ಜಾಥಾವನ್ನು ಕಾಲೇಜಿನಿಂದ ಆನೇಕಲ್ ನ ಟೌನ್ ಪ್ರಮುಖ ಬೀದಿಯಲ್ಲಿ ಸಂಚರಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಂದು ಓಟು ಒಂದು ಮೌಲ್ಯ, ಭಾರತದ ಪ್ರತಿಯೊಬ್ಬರಿಗೂ ಹಕ್ಕಿದೆ ಎಂದರು.
ವಕೀಲ ಆರ್ ವಿ ಮೂರ್ತಿ ಮಾತನಾಡಿ, ದುಡ್ಡಿಗೆ ನಿಮ್ಮ ಮತವನ್ನು ಮಾರಿಕೊಳ್ಳಬೇಡಿ. ನಮ್ಮ ಮನೆಯಿಂದಲೇ ಶುರುಮಾಡಬೇಕು. ನಮಗೆ ತುಂಬಾ ಜವಾಬ್ದಾರಿ ಇದೆ. ನಾವು ನಮ್ಮ ಜವಾಬ್ದಾರಿಯನ್ನು ಮರೆಯಬಾರದು ಎಂದರು.
ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ ಮಾತನಾಡಿ, ನಮ್ಮ ಕಾಲೇಜಿನಲ್ಲಿ ಉತ್ತಮ ವಿದ್ಯಾರ್ಥಿಗಳು ಇದ್ದು, ಶಿಕ್ಷಕರು ವಿದ್ಯಾರ್ಥಿಗಳಿಗೆ ಮತದಾನದ ಅರಿವನ್ನು ತಿಳಿಸುವುದರ ಜೊತೆಗೆ ಈ ರೀತಿ ಜನರಿಗೆ ಓಟಿನ ಮಹತ್ವವನ್ನು ಸಾರ್ವಜನಿಕರಿಗೆ ತಿಳಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಕಾರ್ಯಕ್ರಮದಲ್ಲಿ ಗೋಪಾಲರಾಜ್ ಕಾಲೇಜು ವಿದ್ಯಾರ್ಥಿಗಳು, ಡಾ.ಹೇಮಾವತಿ, ಡಾ.ಸುನೀತಾ ಕುಮಾರಿ, ಮಂಜುನಾಥ ವಿ, ಕೋಕಿಲಾ ಎಂ, ಪ್ರವೀಣ್ ಕುಮಾರ್, ಸತೀಶ್ ಕುಮಾರ್ ಡಾ. ಪಾಂಡುರಂಗ, ವೀಣಾ, ರಶ್ಮಿ, ಡಾ. ಯೋಗೇಶ್ವರಿ, ಮುನಿರಾಜು, ಶೃತಿ ನಾಗವೇಣಿ, ನಂದಿನಿ, ಜವಲಿ ಮಂಜುನಾಥ್ ಗರೀಶ್ ಸೋಮಶೇಖರ್, ಹಲಪ್ಪನರ್ ನಿಂಗಪ್ಪ, ಚೈಪ್ರಕಾಶ್ ಹಾಜರಿದ್ದರು.




