ಯಾರಾದರೂ ಸ್ವಲ್ಪ ಪ್ರಸಿದ್ಧರು, ಸೆಲೆಬ್ರಿಟಿಗಳು ಅಥವಾ ತಮ್ಮ ಕುಟುಂಬ-ಸ್ನೇಹಿತ ವರ್ಗದವರು ಹಠಾತ್ ಕುಸಿದು ಬಿದ್ದಾಗ, ಪ್ರಾಯವಲ್ಲದ ಪ್ರಾಯದಲ್ಲಿ ಹೃದಯಾಘಾತಕ್ಕೆ ತುತ್ತಾಗಿ ಹಠಾತ್ ಸಾವನ್ನಪ್ಪಿದಾಗ ಮಾತ್ರ ಎಲ್ಲರೂ ಚೂರು ಪಾರು ಎಚ್ಚೆತ್ತುಕೊಂಡು, ಓ ಏನೋ ಅಸಹಜವಾದದ್ದು ಆಗುತ್ತಿದೆ ಎಂದು ಮಾತನಾಡಿದರೆ, ಅಥವಾ ಅದ್ಯಾವನೋ ರಾಜಾರಾಂ ತಲ್ಲೂರು ಯಾವಾಗ ನೋಡಿದ್ರೂ “ಕುಸಿದು ಬಿದ್ದು ಸಾವುಗಳ ಬಗ್ಗೆ ಹೇಳುತ್ತಿರುತ್ತಾನೆ” ಎಂದು ನೆನಪಿಸಿಕೊಂಡರೆ ಸಾಕಾಗುವುದಿಲ್ಲ. ಮರುದಿನ ಇದು ನೆನಪಿರುವುದಿಲ್ಲ. ಎಲ್ಲರೂ ಸುಖದಿಂದಿರುತ್ತಾರೆ. ಇದನ್ನೇ ಸ್ಮಶಾನ ವೈರಾಗ್ಯ ಅನ್ನೋದು.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಸ್ವಾಮೀ, ಕೇವಲ ಕರಾವಳಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಪ್ರತೀ ವಾರ ಸರಾಸರಿ 4-5 ಕುಸಿದು ಬಿದ್ದು ಸಾವು/ಅಕಾಲಿಕ ಹೃದಯಾಘಾತದ ಸಾವು ಸಂಭವಿಸುತ್ತಿದೆ; ಅದರ ಎರಡು ಪಾಲು ಜನ “ಅದೃಷ್ಟವಂತರು” ಹೃದಯಸಂಬಂಧಿ ಕಾರಣಗಳಿಗಾಗಿ ಆಸ್ಪತ್ರೆಗಳಿಗೆ ಲಕ್ಷಗಟ್ಟಲೆ ಸುರಿಯುತ್ತಿದ್ದಾರೆ. ಸಾಯುತ್ತಿರುವವರು ಮತ್ತು ಹೀಗೆ ತೊಂದರೆಗೆ ಸಿಲುಕಿಕೊಳ್ಳುತ್ತಿರುವವರೆಲ್ಲ 30-60ರ ನಡುವಿನ “ಉತ್ಪಾದಕ” ಪ್ರಾಯವರ್ಗದವರು. ನಾನು ಸತತವಾಗಿ, ಮೊದಲ ದಿನದಿಂದಲೇ ಇದು “ಅಸಹಜ” ಎಂದು ಅರಣ್ಯ ರೋದನ ಮಾಡುತ್ತಿದ್ದೇನೆ.
ಕರ್ನಾಟಕ ಸರ್ಕಾರ, ಈ ಬಗ್ಗೆ ತನಿಖೆ ನಡೆಸುವುದಾಗಿ ಪ್ರಕಟಿಸಿ ಈಗಾಗಲೇ ಎಂಟು-ಹತ್ತು ವಾರಗಳು ಕಳೆದಿವೆ. ಈ ನಿಟ್ಟಿನಲ್ಲಿ ಕಾರ್ಯಾಚರಣೆ ಆರಂಭಿಸಿರುವ ಬಗ್ಗೆ ಬಹಿರಂಗವಾಗಿ ಸರ್ಕಾರದ ಕಡೆಯಿಂದ ಏನೂ ಹೇಳಿಕೆ ಬಂದಿಲ್ಲ. ದಯವಿಟ್ಟು ಪ್ರತಿಯೊಬ್ಬರೂ ಈ ನಿಟ್ಟಿನಲ್ಲಿ ಇನ್ನಾದರೂ ಎಚ್ಚರಗೊಳ್ಳಿ. ಭಾರತ ಸರ್ಕಾರವನ್ನು ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸಿ.
ನಮ್ಮ ಕಣ್ಣೆದುರೇ ಜನ ಅಕಾರಣವಾಗಿ ಸಾಯುತ್ತಿರುವಾಗ ಸುಮ್ಮನೆ ಕುಳಿತು ನೋಡಲು ನಿಮಗೆ ಮನಸ್ಸಾದರೂ ಹೇಗೆ ಬರುತ್ತದೆ? ಇನ್ನು ಕೆಲವರಂತೂ ಯಾರನ್ನೋ “ರಕ್ಷಿಸುವ ಗುತ್ತಿಗೆ ಹೊತ್ತವರಂತೆ” ಇದಕ್ಕೆಲ್ಲ ಜೀವನ ಶೈಲಿ ಕಾರಣ, ಆಹಾರ ಪದ್ಧತಿ ಕಾರಣ ಎಂದೆಲ್ಲ ಹರಿಕತೆ ಶುರುಹಚ್ಚಿಕೊಳ್ಳುತ್ತಾರೆ. ಅವರಿಗೆ ಹೇಗೂ ಮನುಷ್ಯತ್ವ ಇಲ್ಲ. ನೀವಾದರೂ, ನಿಮ್ಮೊಟ್ಟಿಗೆ ಬದುಕುತ್ತಿರುವ ಪ್ರತಿಯೊಬ್ಬರ ಬಗ್ಗೆ ನಿಮ್ಮಲ್ಲಿ ದಯೆಯ ಪಸೆ ಇದೆಂದು ತೋರಿಸಿಕೊಳ್ಳಿ. ಸರ್ಕಾರಕ್ಕೆ ಒತ್ತಾಯ ಹೇರಿ. ಎಲ್ಲರ ಸ್ವರ ಸೇರಿದಾಗ, ಸರ್ಕಾರಗಳಿಗೆ ಕಿವಿ ಕೇಳಿಸೀತು.
– ರಾಜಾರಾಂ ತಲ್ಲೂರು, ಹಿರಿಯ ಪತ್ರಕರ್ತರು




