ಹಿರಿಯ ಉಪಾಧ್ಯಕ್ಷರಾಗಿ ಆರ್.ಲಕ್ಷ್ಮಿಕಾಂತ್, ಖಜಾಂಚಿಯಾಗಿ ಸುಬ್ಬನರಸಿಂಹ ನೇಮಕ
ಮಕ್ಕಳ ಶಿಕ್ಷಣಕ್ಕೆ 100 ಕೋಟಿ ರೂಪಾಯಿ ದತ್ತಿನಿಧಿ ಯೋಜನೆಗೆ ಚಾಲನೆ
ಪ್ರಥಮದಿನದಲ್ಲಿ 35 ಲಕ್ಷಕ್ಕೂ ಹೆಚ್ಚು ದೇಣಿಗೆ ಸಂಗ್ರಹ
ಬೆಂಗಳೂರು: ಗಾಯಿತ್ರಿ ಭವನದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಎಸ್.ರಘುನಾಥ್ ಅವರ ಪದಗ್ರಹಣ ಸಮಾರಂಭ ನಡೆಯಿತು.
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾಗಿ ಎಸ್.ರಘುನಾಥ್ ಅವರು ವಿಶೇಷಪೂಜೆ ಸಲ್ಲಿಸಿ, ಪದಗ್ರಹಣ ಮಾಡಿದರು. ಹಿರಿಯ ಉಪಾಧ್ಯಕ್ಷರಾಗಿ ಆರ್.ಲಕ್ಷ್ಮಿಕಾಂತ್ ಅವರು, ಖಜಾಂಚಿಯಾಗಿ ಸುಬ್ಬನರಸಿಂಹ (ಸುಬ್ಬಣ್ಣ) ಅವರನ್ನು ಈಸಂದರ್ಭದಲ್ಲಿ ನೇಮಕ ಮಾಡಲಾಯಿತು.
ಎಸ್.ರಘುನಾಥ್ ಮಾತನಾಡಿ, ವಿಪ್ರರು ಬುದ್ದಿವಂತರು, ವಿದ್ಯಾವಂತರು. ಇಡಿ ವಿಶ್ವಕ್ಕೆ ಗೊತ್ತು, ಆದರು ನಮ್ಮಲ್ಲಿ ಆರ್ಥಿಕವಾಗಿ ಹಿಂದುಳಿದವರು ಇದ್ದಾರೆ ಮತ್ತು ವಿಪ್ರ ಸಮುದಾಯದ ಮಕ್ಕಳು ವಿದ್ಯಾಭ್ಯಾಸ ಪೂರೈಸಲು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ ಎಂದರು.
ಬ್ರಾಹ್ಮಣ ಸಮುದಾಯದ ಮಕ್ಕಳಿಗೆ ಶಿಕ್ಷಣಕ್ಕೆ, ಪ್ರಥಮ ಹಂತವಾಗಿ ಶಿಕ್ಷಣಕ್ಕೆ ಆದ್ಯತೆ ನೀಡಿ ಪೈಮರಿ ಶಾಲೆಯಿಂದ ಕಾಲೇಜಿನವರಗೆ ವಿದ್ಯಾಭ್ಯಾಸ ಮಾಡಲು ಕಟ್ಟಡ ಸ್ಥಾಪನೆ. ವಿಪ್ರರಿಗೆ ಆರ್ಥಿಕವಾಗಿ ಚೈತನ್ಯ ಶಕ್ತಿ ತುಂಬಬೇಕು. ಈ ನಿಟ್ಟಿನಲ್ಲಿ ಹಲವಾರು ಯೋಜನೆಗಳು ರೂಪಿಸಲಾಗಿದೆ ಎಂದರು.
ಚುನಾವಣೆ ಪೂರ್ವದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಲು ಕಟಿಬದ್ದವಾಗಿ ಶ್ರಮಿಸುತ್ತೇನೆ. ನುಡಿದಂತೆ ನಡೆ, ನಡೆದಂತೆ ನುಡಿಯುತ್ತೇನೆ. ರಾಜ್ಯದಲ್ಲಿರುವ ಎಲ್ಲ ವಿಪ್ರ ಬಾಂಧವರು ಸಹಕಾರ, ಬೆಂಬಲ ನೀಡಬೇಕು ಎಂದು ಕೋರಿದರು.
100 ಕೋಟಿ ರೂಪಾಯಿ ದೇಣಿಗೆ ದತ್ತಿ ನಿಧಿ ಯೋಜನೆಗೆ ಚಾಲನೆ ನೀಡಲಾಗಿದೆ. 35 ಲಕ್ಷಕ್ಕೂ ಹೆಚ್ಚು ಹಣ ದೇಣಿಗೆ ರೂಪದಲ್ಲಿ ಒಂದೇ ದಿನದಲ್ಲಿ ಬಂದಿದೆ. ಬ್ಯಾಂಕ್ ಡಿಪಾಸಿಟ್ ಮಾಡಲಾಗುವುದು ಎಂದರು.
ಆರ್.ಲಕ್ಷ್ಮಿಕಾಂತ್ ಮಾತನಾಡಿ, ಬ್ರಾಹ್ಮಣ ಎಂದರೆ ಎಲ್ಲರು ಒಂದೇ. ನಮ್ಮಲ್ಲಿ ತಂಡಗಳು ಇಲ್ಲ, ಎಲ್ಲರು ಒಟ್ಟಾಗಿ ಒಂದು ತಂಡವಾಗಿ ವಿಪ್ರ ಶ್ರೇಯೋಭಿವೃದ್ದಿಗೆ ಶ್ರಮಿಸಲಾಗುವುದು. 100 ಕೋಟಿ ದೇಣಿಗೆ ಸಂಗ್ರಹ ಮಾಡುವ ಕಾರ್ಯ ಆರಂಭವಾಗಿದೆ. ದಾನಿಗಳಿಂದ ಹಣ ವಿಪ್ರರ ಮಕ್ಕಳ ಶಿಕ್ಷಣ ಕ್ಷೇತ್ರಕ್ಕೆ ಸದಪಯೋಗವಾಗಲಿದೆ ಎಂದರು.
ಶಾಸಕರಾದ ರವಿ ಸುಬ್ರಮಣ್ಯ, ಸಿ.ಕೆ.ರಾಮಮೂರ್ತಿ, ಮಾಜಿ ಅಧ್ಯಕ್ಷರಾದ ಎಂ.ಆರ್.ವಿ.ಪ್ರಸಾದ್, ಪಾವಗಡ ಪ್ರಕಾಶ್ ರಾವ್ ಮತ್ತು ಜಿಲ್ಲಾ ಪ್ರತಿನಿಧಿಗಳಾದ ರಾಮಚಂದ್ರ, ಪಿ.ಎಸ್.ಪ್ರಕಾಶ್, ಜಿ.ಎಸ್.ನಾಗೇಶ್, ದಿಲೀಪ್, ಸತೀಶ್ ಉರಾಳ್, ರಾಜಶೇಖರ್ ಜಿ.ರಾವ್, ಕೆ.ಎನ್.ರವಿಕುಮಾರ್, ಅಂಬಿಕಾ ರಾಮಚಂದ್ರ, ಎಸ್.ಎಸ್.ಪ್ರಸಾದ್, ಶ್ರೀನಿವಾಸ್ ಹಾಗೂ ವಿಪ್ರಮುಖಂಡರು ಹಾಜರಿದ್ದರು.










