ಕರ್ನಾಟಕ ಇತಿಹಾಸದಲ್ಲಿ ಸೈದ್ಧಾಂತಿಕ ಸ್ಪಷ್ಟತೆ ಇಲ್ಲದ ಜೆಡಿಎಸ್ ಪಕ್ಷವು ಅಧಿಕಾರವನ್ನೇ ಪ್ರಮುಖ ಉದ್ದೇಶವನ್ನಾಗಿಸಿಕೊಂಡು ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರ ಬದುಕಿನ ಹಿತಾಸಕ್ತಿಯನ್ನು, ಸಾಮಾಜಿಕ ನ್ಯಾಯವನ್ನು ಗಾಳಿಗೆ ತೂರುವ ಕೆಲಸವನ್ನು ಮಾಡುತ್ತಲೇ ಬಂದಿದೆ. ಇದು ಅದರ ಮುಂದುವರೆದ ಭಾಗವಷ್ಟೇ.
- ಭಾರತ ಕಲ್ಯಾಣ ರಾಷ್ಟ್ರವಾಗಲು ಅಂಬೇಡ್ಕರರ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು: ಕೆ.ವೈ.ನಾರಾಯಣಸ್ವಾಮಿ
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
ಸಾಮಾಜಿಕ ಮತ್ತು ಐತಿಹಾಸಿಕ ಅವಮಾನ ಹಾಗೂ ದೌರ್ಜನ್ಯಗಳೇ ಮೀಸಲಾತಿಗೆ ಪ್ರಮುಖ ಮಾನದಂಡ ಎಂಬ ಸಂಗತಿಯು ಸ್ಪಷ್ಟವಾಗಿದೆ. ಇನ್ನು ಆರ್ಥಿಕವಾಗಿ ಹಿಂದುಳಿದ ಸಮುದಾಯಗಳಿಗೆ ಸಹಾಯ ಮಾಡಲು ಸರ್ಕಾರಗಳು ಪೂರಕ ಯೋಜನೆಗಳನ್ನು ರೂಪಿಸುವುದು ಹೆಚ್ಚು ಸೂಕ್ತವೂ ಮತ್ತು ನ್ಯಾಯಯುತವಾದ ಬೆಳವಣಿಗೆಯೂ ಆಗಿದೆ.
ಇಂತಹ ಸಂದರ್ಭಗಳಲ್ಲಿ, ಜಾತ್ಯಾತೀತ ರಾಜಕೀಯ ಸಿದ್ಧಾಂತದ ಹಿನ್ನಲೆಯಲ್ಲಿ ಗುರುತಿಸಿಕೊಂಡು ವಿವಿಧ ರಾಜಕೀಯ ಅಧಿಕಾರವನ್ನು ಅನುಭವಿಸಿದ ದೇವೇಗೌಡರು ಇದೀಗ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ, ಸಾಮಾಜಿಕ ವಾಸ್ತವಕ್ಕೆ ಎದುರಾಗಿ ನಿಂತು ಆರ್ಥಿಕತೆಯ ಮಾನದಂಡದಲ್ಲಿ ಮೀಸಲಾತಿಯನ್ನು ನೀಡುವ ಕುರಿತು ಸಲಹೆ ನೀಡುತ್ತಿದ್ದಾರೆ ಎಂದರೆ ಜೆಡಿಎಸ್ ಪಕ್ಷ ಮತ್ತದರ ಸಿದ್ಧಾಂತವನ್ನು ಮನುವಾದಿಗಳಿಗೆ ಅಡವಿಟ್ಟಿದ್ದಾರೆಂದೇ ಅರ್ಥ.
ಮಾಜಿ ಪ್ರಧಾನಿಯಾಗಿ ಸಾರ್ವಜನಿಕ ಜೀವನದಲ್ಲಿ ಸಾಮಾಜಿಕ ನ್ಯಾಯದ ಕುರಿತು ಅರಿವಿಲ್ಲದೇ, ಸಹಜವಾದ ಸಾರ್ವಜನಿಕ ಜವಾಬ್ದಾರಿಯನ್ನು ಮರೆತು ವರ್ತಿಸುತ್ತಿರುವ ದೇವೇಗೌಡರು ತಮ್ಮ selective ಸಿದ್ಧಾಂತ ಮತ್ತು ಅವಕಾಶವಾದಿ ನಡವಳಿಕೆಯ ಕಾರಣದಿಂದಾಗಿ ಇಷ್ಟು ವರ್ಷಗಳ ಕಾಲ ಉಳಿಸಿಕೊಂಡಿದ್ದ ಗೌರವಕ್ಕೆ ತಮ್ಮ ಕೈಯಾರೆ ಮಸಿ ಬಳಿದುಕೊಂಡಿದ್ದಾರೆ.
ಇಂತಹ ಅವಕಾಶವಾದಿ ಮನಸ್ಥಿತಿಗಳ ಎದುರು ಅಂದು ಬಾಬಾ ಸಾಹೇಬರು ಹೋರಾಡಿ ಶೋಷಿತರಿಗೆ ನ್ಯಾಯ ಕೊಡಿಸಬೇಕಿದ್ದರೆ, ಅದೆಷ್ಟು ಹೋರಾಟ ನಡೆಸಿರಬೇಕು ಎಂದು ನೆನೆಸಿಕೊಂಡರೆ ಮನಸ್ಸು ಭಾರವಾಗುತ್ತದೆ.
ಡಾ.ಎಚ್.ಸಿಮಹದೇವಪ್ಪ, ಸಮಾಜ ಕಲ್ಯಾಣ ಸಚಿವ




